ತಪ್ಪಿಸಿಕೊಂಡ ಪುಟ್ಟ
ಶನಿವಾರ ಶಾಲೆಗೆ ಬಂದ ಪುಟ್ಟ
ಸ್ನೇಹಿತರನ್ನು ಕರೆದ ಆಡಲು ಆಟ
ಅಷ್ಟರಲ್ಲೇ ಕೇಳಿತು ಘಂಟೆಯ ಸದ್ದು
ಕೊಠಡಿಗೆ ನಡೆದರು ಎಲ್ಲರೂ ಎದ್ದು
ಪಾಠವ ಮುಗಿಸಿದರು ಲೆಕ್ಕದ ಮೇಷ್ಟ್ರು
ಮನೆಯಲಿ ಮಾಡಲು ಲೆಕ್ಕಗಳ ಕೊಟ್ರು
ಹುಡುಗರೆಲ್ಲ ಸೇರಿದರು ಆಡಲು ಆಟ
ಆಟದೊಂದಿಗೆ ಶನಿವಾರ ಕಳೆದ ಪುಟ್ಟ
ಭಾನುವಾರ ಪೇಟೆಗೆ ಹೊರಟ ಪುಟ್ಟ
ಸರ್ಕಸ್ಸು ತೋರಿಸಲು ಬೇಡಿಕೆ ಇಟ್ಟ
ಸರ್ಕಸ್ಸು ನೋಡಿ ಕುಣಿದು ಕುಪ್ಪಳಿಸಿದ
ಅಪ್ಪನೊಂದಿಗೆ ಸಂಜೆ ಮನೆಗೆ ನಡೆದ
ರಾತ್ರಿಯಿತ್ತು ಅಮ್ಮನ ವಿಶೇಷ ಭೋಜನ
ಭಾನುವಾರ ಪೂರ್ತಿ ಮಾಡಿದ ಮಜಾನ
ಸೋಮವಾರ ಬೆಳಿಗ್ಗೆ ಶಾಲೆಗೆ ಹೋದ
ಮೇಷ್ಟರು ಕೊಟ್ಟಿದ್ದ ಲೆಕ್ಕಗಳ ಮರೆತ್ತಿದ್ದ
ಒಬ್ಬಬ್ಬರಿಗೆ ಲೆಕ್ಕವ ಕೇಳುತ ಬಂದರು
ಕೈಯಲ್ಲೇ ಬೆತ್ತವನ್ನು ಹಿಡಿದು ತಂದರು
ಅಷ್ಟರಲ್ಲೇ ಬಂದಿತು ನೋಟಿಸು ಕೊಠಡಿಗೆ
ರಜೆ ಸಿಕ್ಕಿತು ಗಣ್ಯರ ಸಾವಿನಿಂದ ಶಾಲೆಗೆ
ಪುಟ್ಟ ತಪ್ಪಿಸಿಕೊಂಡ ಲೆಕ್ಕದ ಮೇಷ್ಟರ ಏಟ
ರಜೆ ಘೋಷಿಸುತ್ತಲೇ ಮನೆಗೆ ಓಡಿದ ಓಟ
- ತೇಜಸ್ವಿ.ಎ.ಸಿ
ಹಾಯ್,ನಾನು ತೇಜಸ್ವಿ, ವೃತ್ತಿಯಲ್ಲಿ ಐ ಟಿ ಕ್ಷೇತ್ರದಲ್ಲಿ ಉದ್ಯೋಗಿ. ನನ್ನ ಆಸಕ್ತಿಯೆಲ್ಲ ಕವನ, ಸಾಹಿತ್ಯ, ಚಿತ್ರಕಲೆ, ಛಾಯಾಚಿತ್ರಗ್ರಹಣ. ಈ ನನ್ನ ಕಲೆಯ ಅಭಿರುಚಿಗಾಗಿ ನಾನು ಈ ತಾಣವನ್ನು ನಿರ್ಮಿಸಿದ್ದೇನೆ. ನಿಮ್ಮಲ್ಲರಿಗೂ ನನ್ನ ಪುಟ್ಟ ತಾಣಕ್ಕೆ ಸ್ವಾಗತ.
Saturday, July 17, 2010
ಸೃಷ್ಟಿ ವೈಚಿತ್ರ್ಯ
ಸೃಷ್ಟಿ ವೈಚಿತ್ರ್ಯ
ಭಗವಂತ, ನೀನೇ ಸೃಷ್ಟಿಸಿ ಜೀವಿಗಳು ಬಾಳಬೇಕಾದ ಜಗವು ಇದು
ಸೃಷ್ಟಿಕರ್ತನೆ, ನಿನ್ನ ಜಗದಲೇ ಜೀವಗಳೊಡನೆ ಚಿನ್ನಾಟವು ಸರಿಯೆ
ನಿನ್ನ ಸೃಷ್ಟಿಯ ಮರ್ಮವನರಿಯೆ
ನಿನ್ನ ಸುಂದರ ಸೃಷ್ಟಿಗೆ ಪ್ರಾಣವನಿತ್ತೆ, ಬಾಳಲು ದೇಹಕೆ ಜೀವನವಿತ್ತೆ
ಹೊಸ ಜೀವನಕೆ ಲೋಕವನಿತ್ತೆ, ಪ್ರಾಣದ ಜೊತೆಗೆ ಆಟವು ಸರಿಯೆ
ನಿನ್ನ ಸೃಷ್ಟಿಯ ಮರ್ಮವನರಿಯೆ
ಜಿಂಕೆಯ ಬದುಕು ನಿನ್ನದೇ ಸೃಷ್ಟಿ, ಜೀವಕೆರಗುವ ಹುಲಿಯು ನಿನ್ನದೇ ಸೃಷ್ಟಿ
ನಿನ್ನ ಸೃಷ್ಟಿಯ ಬದುಕಿಗೆ ಏಕೀ ಅನ್ಯಾಯ? ಜೀವದ ಜೊತೆಗೆ ಆಟವು ಸರಿಯೇ
ನಿನ್ನ ಸೃಷ್ಟಿಯ ಮರ್ಮವನರಿಯೆ
ಜನಗಳ ಹಸಿವು ನಿನ್ನದೇ ಸೃಷ್ಟಿ, ಜನಗಳ ಆಹಾರವು ನಿನ್ನದೇ ಸೃಷ್ಟಿ
ನಿನ್ನೀ ಸೃಷ್ಟಿಯ ಜೀವಗಳ ಹೊಟ್ಟೆಯ ಜೊತೆಗೆ ಆಟವು ಸರಿಯೇ
ನಿನ್ನ ಸೃಷ್ಟಿಯ ಮರ್ಮವನರಿಯೆ
ಸೂರ್ಯನ ಬಿಸಿಲು ನಿನ್ನದೇ ಸೃಷ್ಟಿ, ತಲೆ ಮೇಲಿನ ಸೂರು ನಿನ್ನದೇ ಸೃಷ್ಟಿ
ನೀ ಸೃಷ್ಟಿಸಿದ ಮಕ್ಕಳ ನೆಲೆಯ ಜೊತೆ ನಿನ್ನಾಟವು ಸರಿಯೇ
ನಿನ್ನ ಸೃಷ್ಟಿಯ ಮರ್ಮವನರಿಯೆ
ಜನಗಳಿಗೆ ಕೊಟ್ಟ ಬಾಳೂ ನಿನ್ನ ಸೃಷ್ಟಿ, ಬಾಳಿನ ಭವಿಷ್ಯವೂ ನಿನ್ನದೇ ಸೃಷ್ಟಿ
ನೀ ಸೃಷ್ಟಿಸಿದ ಮಕ್ಕಳ ಭವಿಷ್ಯದ ಜೊತೆಗಿನ ನಿನ್ನಾಟವು ಸರಿಯೇ
ನಿನ್ನ ಸೃಷ್ಟಿಯ ಮರ್ಮವನರಿಯೆ
ನಮಗೆ ಕೊಟ್ಟ ಬದುಕು ನಿನ್ನದೇ ಸೃಷ್ಟಿ, ಬಾಳಿನ ಅಗತ್ಯಗಳೂ ನಿನ್ನದೇ ಸೃಷ್ಟಿ
ಎಲ್ಲವೂ ನಿನ್ನದೇ ಇರುವಾಗ ಮಾಡು ಎಲ್ಲವ ಸರಿಯ
ನಿನ್ನೀ ಸೃಷ್ಟಿಗೆ ಧರ್ಮವನೆರೆಯೆ
- ತೇಜಸ್ವಿ.ಎ.ಸಿ
ಭಗವಂತ, ನೀನೇ ಸೃಷ್ಟಿಸಿ ಜೀವಿಗಳು ಬಾಳಬೇಕಾದ ಜಗವು ಇದು
ಸೃಷ್ಟಿಕರ್ತನೆ, ನಿನ್ನ ಜಗದಲೇ ಜೀವಗಳೊಡನೆ ಚಿನ್ನಾಟವು ಸರಿಯೆ
ನಿನ್ನ ಸೃಷ್ಟಿಯ ಮರ್ಮವನರಿಯೆ
ನಿನ್ನ ಸುಂದರ ಸೃಷ್ಟಿಗೆ ಪ್ರಾಣವನಿತ್ತೆ, ಬಾಳಲು ದೇಹಕೆ ಜೀವನವಿತ್ತೆ
ಹೊಸ ಜೀವನಕೆ ಲೋಕವನಿತ್ತೆ, ಪ್ರಾಣದ ಜೊತೆಗೆ ಆಟವು ಸರಿಯೆ
ನಿನ್ನ ಸೃಷ್ಟಿಯ ಮರ್ಮವನರಿಯೆ
ಜಿಂಕೆಯ ಬದುಕು ನಿನ್ನದೇ ಸೃಷ್ಟಿ, ಜೀವಕೆರಗುವ ಹುಲಿಯು ನಿನ್ನದೇ ಸೃಷ್ಟಿ
ನಿನ್ನ ಸೃಷ್ಟಿಯ ಬದುಕಿಗೆ ಏಕೀ ಅನ್ಯಾಯ? ಜೀವದ ಜೊತೆಗೆ ಆಟವು ಸರಿಯೇ
ನಿನ್ನ ಸೃಷ್ಟಿಯ ಮರ್ಮವನರಿಯೆ
ಜನಗಳ ಹಸಿವು ನಿನ್ನದೇ ಸೃಷ್ಟಿ, ಜನಗಳ ಆಹಾರವು ನಿನ್ನದೇ ಸೃಷ್ಟಿ
ನಿನ್ನೀ ಸೃಷ್ಟಿಯ ಜೀವಗಳ ಹೊಟ್ಟೆಯ ಜೊತೆಗೆ ಆಟವು ಸರಿಯೇ
ನಿನ್ನ ಸೃಷ್ಟಿಯ ಮರ್ಮವನರಿಯೆ
ಸೂರ್ಯನ ಬಿಸಿಲು ನಿನ್ನದೇ ಸೃಷ್ಟಿ, ತಲೆ ಮೇಲಿನ ಸೂರು ನಿನ್ನದೇ ಸೃಷ್ಟಿ
ನೀ ಸೃಷ್ಟಿಸಿದ ಮಕ್ಕಳ ನೆಲೆಯ ಜೊತೆ ನಿನ್ನಾಟವು ಸರಿಯೇ
ನಿನ್ನ ಸೃಷ್ಟಿಯ ಮರ್ಮವನರಿಯೆ
ಜನಗಳಿಗೆ ಕೊಟ್ಟ ಬಾಳೂ ನಿನ್ನ ಸೃಷ್ಟಿ, ಬಾಳಿನ ಭವಿಷ್ಯವೂ ನಿನ್ನದೇ ಸೃಷ್ಟಿ
ನೀ ಸೃಷ್ಟಿಸಿದ ಮಕ್ಕಳ ಭವಿಷ್ಯದ ಜೊತೆಗಿನ ನಿನ್ನಾಟವು ಸರಿಯೇ
ನಿನ್ನ ಸೃಷ್ಟಿಯ ಮರ್ಮವನರಿಯೆ
ನಮಗೆ ಕೊಟ್ಟ ಬದುಕು ನಿನ್ನದೇ ಸೃಷ್ಟಿ, ಬಾಳಿನ ಅಗತ್ಯಗಳೂ ನಿನ್ನದೇ ಸೃಷ್ಟಿ
ಎಲ್ಲವೂ ನಿನ್ನದೇ ಇರುವಾಗ ಮಾಡು ಎಲ್ಲವ ಸರಿಯ
ನಿನ್ನೀ ಸೃಷ್ಟಿಗೆ ಧರ್ಮವನೆರೆಯೆ
- ತೇಜಸ್ವಿ.ಎ.ಸಿ
Thursday, July 8, 2010
ಕಣ್ಣಾ ಮುಚ್ಚಾಲೆ
ಕಣ್ಣಾ ಮುಚ್ಚಾಲೆ
ಹಗಲಿರುಳು ಸಾಲಾಗಿ ಬರುವ ಸುಂದರ ಕನಸುಗಳು
ಜೀವನಕೆ ತೋರುವವು ಬಣ್ಣ ಬಣ್ಣದ ಹೊಸ ಆಸೆಗಳ
ಕನಸಿನ ಲೋಕದಿ ಪಯಣ ನೀಡುವುವು ಹೊಸ ಭರವಸೆ
ಈ ಹೊಸ ಭರವಸೆಗಳಿತ್ತವು ಬಾಳಿಗೆ ಒಂದು ದಿಸೆ
ನಾವ್ ತೋರಿದೆವು ಈ ದಿಸೆಯಲ್ಲಿ ಮುನ್ನುಗುವ ತುಡಿತ
ಆಸೆಗಳ ಈಡೇರಿಕೆಗೆ ನಾವು ಶ್ರಮ ವಹಿಸಿದೆವು ಸತತ
ಚಿಕ್ಕ ಪುಟ್ಟ ಆಸೆಗಳ ಈಡೇರಿಕೆಗಳು ಅನ್ನಿಸಲಿಲ್ಲ ಬಲು ಕಷ್ಟ
ಮೂಲಭೂತ ಆಸೆಗಳ ತಡವರಿಕೆ ಮಾಡಿವೆ ಜೀವನವನ್ನೇ ನಷ್ಟ
ಬದುಕಿನ ಅಗತ್ಯಗಳ ಈಡೇರಿಕೆ ಜೀವನದ ಉದ್ದೇಶವಲ್ಲ
ಕನಸುಗಳ ಈಡೇರಿಕೆಯೇ ಜೀವನಕೆ ತೃಪ್ತಿ ಕೊಡುವುದಲ್ಲ
ಬೇಡದ ಕನಸುಗಳು ನಿತ್ಯ ಬಂದು ಮೂಡಿಸುವವು ಬರಿ ಆಸೆ
ಈಡೇರದ ಈ ಆಸೆಗಳ ಹೊರೆ ಆಗಿವೆ ಜೀವಕ್ಕೊಂದು ಶಿಕ್ಷೆ
ಕನಸು ಆಸೆಗಳ ಉದ್ದೇಶ ಸೃಷ್ಟಿಸಿವೆ ಹಲವು ಅನುಮಾನಗಳ
ಇವು ಬರುವುದು ಸ್ಪೂರ್ತಿಗೋ ಅಥವಾ ನೀಡಲು ಹತಾಶೆಗಳ?
ಈ ಎಲ್ಲಾ ಆಟ ದ್ವಂದ್ವಕೆ ಎಡೆಮಾಡಿದೆ ಜೀವನದ ದೋಣಿಯ
ಆಸೆಗಳು ದಿನ ಬಂದು ತೋರುತ್ತಿವೆಯೇ ನಮಗೆ ಬರಿ ಭ್ರಮೆಯ?
- ತೇಜಸ್ವಿ .ಎ.ಸಿ
ಹಗಲಿರುಳು ಸಾಲಾಗಿ ಬರುವ ಸುಂದರ ಕನಸುಗಳು
ಜೀವನಕೆ ತೋರುವವು ಬಣ್ಣ ಬಣ್ಣದ ಹೊಸ ಆಸೆಗಳ
ಕನಸಿನ ಲೋಕದಿ ಪಯಣ ನೀಡುವುವು ಹೊಸ ಭರವಸೆ
ಈ ಹೊಸ ಭರವಸೆಗಳಿತ್ತವು ಬಾಳಿಗೆ ಒಂದು ದಿಸೆ
ನಾವ್ ತೋರಿದೆವು ಈ ದಿಸೆಯಲ್ಲಿ ಮುನ್ನುಗುವ ತುಡಿತ
ಆಸೆಗಳ ಈಡೇರಿಕೆಗೆ ನಾವು ಶ್ರಮ ವಹಿಸಿದೆವು ಸತತ
ಚಿಕ್ಕ ಪುಟ್ಟ ಆಸೆಗಳ ಈಡೇರಿಕೆಗಳು ಅನ್ನಿಸಲಿಲ್ಲ ಬಲು ಕಷ್ಟ
ಮೂಲಭೂತ ಆಸೆಗಳ ತಡವರಿಕೆ ಮಾಡಿವೆ ಜೀವನವನ್ನೇ ನಷ್ಟ
ಬದುಕಿನ ಅಗತ್ಯಗಳ ಈಡೇರಿಕೆ ಜೀವನದ ಉದ್ದೇಶವಲ್ಲ
ಕನಸುಗಳ ಈಡೇರಿಕೆಯೇ ಜೀವನಕೆ ತೃಪ್ತಿ ಕೊಡುವುದಲ್ಲ
ಬೇಡದ ಕನಸುಗಳು ನಿತ್ಯ ಬಂದು ಮೂಡಿಸುವವು ಬರಿ ಆಸೆ
ಈಡೇರದ ಈ ಆಸೆಗಳ ಹೊರೆ ಆಗಿವೆ ಜೀವಕ್ಕೊಂದು ಶಿಕ್ಷೆ
ಕನಸು ಆಸೆಗಳ ಉದ್ದೇಶ ಸೃಷ್ಟಿಸಿವೆ ಹಲವು ಅನುಮಾನಗಳ
ಇವು ಬರುವುದು ಸ್ಪೂರ್ತಿಗೋ ಅಥವಾ ನೀಡಲು ಹತಾಶೆಗಳ?
ಈ ಎಲ್ಲಾ ಆಟ ದ್ವಂದ್ವಕೆ ಎಡೆಮಾಡಿದೆ ಜೀವನದ ದೋಣಿಯ
ಆಸೆಗಳು ದಿನ ಬಂದು ತೋರುತ್ತಿವೆಯೇ ನಮಗೆ ಬರಿ ಭ್ರಮೆಯ?
- ತೇಜಸ್ವಿ .ಎ.ಸಿ
Thursday, July 1, 2010
ಅರ್ಥವಾಗದ ಭಾವನೆಗಳು
ಅರ್ಥವಾಗದ ಭಾವನೆಗಳು
ನಾನೆಷ್ಟೇ ಕೋಪ ಮಾಡಿಕೊಂಡರು
ಅದು ಅರೆ ಕ್ಷಣ ಮಾತ್ರ
ಅದು ನಿನ್ನ ನೋಡಿದ ಕೆಲ ಕ್ಷಣ ಮಾತ್ರ .
ನನಗೆ ನಿನ್ನ ಮೇಲಿರುವ ಅಸಮಧಾನ
ನಿಜವಾದುದೆ ಎಂದು ನನಗೆಯೇ ಅನುಮಾನ
ಏಕೆಂದರೆ ಅದು ಕೇವಲ ಕ್ಷಣಿಕ ಮಾತ್ರ
ನನ್ನೀ ಚುಚ್ಚು ನಡವಳಿಕೆಯನು ನೋಡಿ
ಮನ ನೊಂದಿದೆಯೇ?
ನಿನಗೂ ಇದೆಯೇ ಮತಾಡಿಸಬೇಕೆಂದು ನನ್ನ ಹತ್ತಿರ?
ನಾನು ನನ್ನೀ ಭಾವನೆಗಳ ಅರ್ಥೈಸುವ
ಪ್ರಯತ್ನದಲ್ಲಿರುವೆ.
ನನ್ನೀ ತಾಕಲಾಟಕ್ಕೆ ಹುಡುಕಲೆತ್ನಿಸುವೆ ಉತ್ತರ.
ನನ್ನ ಮನದೊಳ ದ್ವಂದ್ವ ವನು ಬಿಡಿಸಿ
ಅರ್ಥೈಸಿದೆನಿಸಿದರೂ
ನಿನ್ನ ಮನದಾಳ ಅರಿಯಲು ಬೇಕು ನಿನ್ನ ಪಾತ್ರ.
- ತೇಜಸ್ವಿ.ಎ.ಸಿ
ನಾನೆಷ್ಟೇ ಕೋಪ ಮಾಡಿಕೊಂಡರು
ಅದು ಅರೆ ಕ್ಷಣ ಮಾತ್ರ
ಅದು ನಿನ್ನ ನೋಡಿದ ಕೆಲ ಕ್ಷಣ ಮಾತ್ರ .
ನನಗೆ ನಿನ್ನ ಮೇಲಿರುವ ಅಸಮಧಾನ
ನಿಜವಾದುದೆ ಎಂದು ನನಗೆಯೇ ಅನುಮಾನ
ಏಕೆಂದರೆ ಅದು ಕೇವಲ ಕ್ಷಣಿಕ ಮಾತ್ರ
ನನ್ನೀ ಚುಚ್ಚು ನಡವಳಿಕೆಯನು ನೋಡಿ
ಮನ ನೊಂದಿದೆಯೇ?
ನಿನಗೂ ಇದೆಯೇ ಮತಾಡಿಸಬೇಕೆಂದು ನನ್ನ ಹತ್ತಿರ?
ನಾನು ನನ್ನೀ ಭಾವನೆಗಳ ಅರ್ಥೈಸುವ
ಪ್ರಯತ್ನದಲ್ಲಿರುವೆ.
ನನ್ನೀ ತಾಕಲಾಟಕ್ಕೆ ಹುಡುಕಲೆತ್ನಿಸುವೆ ಉತ್ತರ.
ನನ್ನ ಮನದೊಳ ದ್ವಂದ್ವ ವನು ಬಿಡಿಸಿ
ಅರ್ಥೈಸಿದೆನಿಸಿದರೂ
ನಿನ್ನ ಮನದಾಳ ಅರಿಯಲು ಬೇಕು ನಿನ್ನ ಪಾತ್ರ.
- ತೇಜಸ್ವಿ.ಎ.ಸಿ
Saturday, June 19, 2010
ಅನಿರೀಕ್ಷಿತ ಅತಿಥಿ
ಅನಿರೀಕ್ಷಿತ ಅತಿಥಿ
ಒಮ್ಮೆ ನಮ್ಮ ಮನೆಗೆ ಬಂದಿತ್ತೊಂದು ಪುಟ್ಟ ಅನಿರೀಕ್ಷಿತ ಅತಿಥಿ
ನನಗಾಗ ತಿಳಿಯಿತು ಯಾರ ಯಾರಿಗೋ ಇದೆ ನಮ್ಮೇಲೆ ಪ್ರೀತಿ
ಅತಿಥಿ ತನ್ನ ಪುಟ್ಟ ಸಂಸಾರವನ್ನೇ ಹೂಡುವ ಲೆಕ್ಕದಲಿ ಬಂದಿತ್ತು
ಸ್ವಲ್ಪ ದಿನದಲ್ಲಿ ತನ್ನ ಪುಟ್ಟ ಗೂಡಿನ ನಿರ್ಮಾಣ ಶುರು ಮಾಡಿತ್ತು
ನಮ್ಮ ಅತಿಥಿ ಪಾರಿವಾಳವು ಹಾರುತ್ತಿತ್ತು ಮಾತಾಡಿಸಲು ಬಂದರೆ
ನಮಗೂ ಅನಿಸಿತು ಕೊಡುವುದು ಬೇಡ ಅದರ ಸಂಸಾರಕ್ಕೆ ತೊಂದರೆ
ನಾವೆಲ್ಲಾ ಸುಮ್ಮನಿದ್ದೆವು ಆದರೆ ಕೇಳಬೇಕಲ್ಲ ನಮ್ಮ ಪುಟ್ಟ ಪೋರ
ಪದೇ ಪದೇ ಹೋಗಿ ಕಿಟಕಿ ಹತ್ತಿ ನೋಡುತ್ತಿದ್ದನು ಅದರ ಸಂಸಾರ
ಪೋರನ ಜೊತೆಗೂಡಿತ್ತು ಅವನ ಜೊತೆಗಾರ ನಮ್ಮನೆಯ ಶ್ವಾನ
ಇಬ್ಬರೂ ಜೊತೆಗೂಡಿ ಕಾಡಿ ಹಿಂಡುತ್ತಿದ್ದರು ಪಾರಿವಾಳದ ಪ್ರಾಣ
ಬಿಡಲಾದೀತೇ ಸಂಸಾರ ನಡೆಸುವುದು ಪೋರ, ಕುನ್ನಿಯ ಕಾಟಕ್ಕೆ
ಮೊಟ್ಟೆ ಇಟ್ಟು ಮುನ್ನುಗಿದ್ದವು, ತಡೆಯುವರಿಲ್ಲ ಅವುಗಳ ಹಾರಾಟಕ್ಕೆ
ದಿನ ಕಳೆದಂತೆ ಹೆಚ್ಚಾಗುತ್ತಾ ಹೋಯಿತು ಕಸ, ಕಡ್ಡಿಗಳ ಉಪಟಳ
ಕಾಲ ಕ್ರಮೇಣ ಬರಲಾರಂಬಿಸಿತು ಅವು ಹಾಕಿದ ಪಿಕ್ಕಿಯ ಪರಿಮಳ
ದುರ್ವಾಸನೆಯ ಅತಿಥಿಗಳನ್ನು ಮರಳಿ ಕಳಿಸಲು ನಿರ್ಧರಿಸಿದರು ಅಪ್ಪ
ನಾನು ಅಣ್ಣ ಸೇರಿ ಗೂಡ ತೆಗೆದು ಓಡಿಸಿದೆವು ಅವುಗಳ ಮರಿಗಳ ಪಾಪ
ಬಿಡಬೇಕೆ ಪಾರಿವಾಳಗಳು ಮತ್ತೆ ತಿರುಗಿ ಬಂದಿವೆ, ಹೊಸ ಗೂಡು ಕಟ್ಟಿವೆ
ತನ್ನ ಹೊಸ ಸಂಸಾರವನ್ನು ಹೊತ್ತು ತಂದಿವೆ, ಮತ್ತೆ ಮೊಟ್ಟೆಗಳ ಇಟ್ಟಿವೆ
- ತೇಜಸ್ವಿ.ಎ.ಸಿ
ಒಮ್ಮೆ ನಮ್ಮ ಮನೆಗೆ ಬಂದಿತ್ತೊಂದು ಪುಟ್ಟ ಅನಿರೀಕ್ಷಿತ ಅತಿಥಿ
ನನಗಾಗ ತಿಳಿಯಿತು ಯಾರ ಯಾರಿಗೋ ಇದೆ ನಮ್ಮೇಲೆ ಪ್ರೀತಿ
ಅತಿಥಿ ತನ್ನ ಪುಟ್ಟ ಸಂಸಾರವನ್ನೇ ಹೂಡುವ ಲೆಕ್ಕದಲಿ ಬಂದಿತ್ತು
ಸ್ವಲ್ಪ ದಿನದಲ್ಲಿ ತನ್ನ ಪುಟ್ಟ ಗೂಡಿನ ನಿರ್ಮಾಣ ಶುರು ಮಾಡಿತ್ತು
ನಮ್ಮ ಅತಿಥಿ ಪಾರಿವಾಳವು ಹಾರುತ್ತಿತ್ತು ಮಾತಾಡಿಸಲು ಬಂದರೆ
ನಮಗೂ ಅನಿಸಿತು ಕೊಡುವುದು ಬೇಡ ಅದರ ಸಂಸಾರಕ್ಕೆ ತೊಂದರೆ
ನಾವೆಲ್ಲಾ ಸುಮ್ಮನಿದ್ದೆವು ಆದರೆ ಕೇಳಬೇಕಲ್ಲ ನಮ್ಮ ಪುಟ್ಟ ಪೋರ
ಪದೇ ಪದೇ ಹೋಗಿ ಕಿಟಕಿ ಹತ್ತಿ ನೋಡುತ್ತಿದ್ದನು ಅದರ ಸಂಸಾರ
ಪೋರನ ಜೊತೆಗೂಡಿತ್ತು ಅವನ ಜೊತೆಗಾರ ನಮ್ಮನೆಯ ಶ್ವಾನ
ಇಬ್ಬರೂ ಜೊತೆಗೂಡಿ ಕಾಡಿ ಹಿಂಡುತ್ತಿದ್ದರು ಪಾರಿವಾಳದ ಪ್ರಾಣ
ಬಿಡಲಾದೀತೇ ಸಂಸಾರ ನಡೆಸುವುದು ಪೋರ, ಕುನ್ನಿಯ ಕಾಟಕ್ಕೆ
ಮೊಟ್ಟೆ ಇಟ್ಟು ಮುನ್ನುಗಿದ್ದವು, ತಡೆಯುವರಿಲ್ಲ ಅವುಗಳ ಹಾರಾಟಕ್ಕೆ
ದಿನ ಕಳೆದಂತೆ ಹೆಚ್ಚಾಗುತ್ತಾ ಹೋಯಿತು ಕಸ, ಕಡ್ಡಿಗಳ ಉಪಟಳ
ಕಾಲ ಕ್ರಮೇಣ ಬರಲಾರಂಬಿಸಿತು ಅವು ಹಾಕಿದ ಪಿಕ್ಕಿಯ ಪರಿಮಳ
ದುರ್ವಾಸನೆಯ ಅತಿಥಿಗಳನ್ನು ಮರಳಿ ಕಳಿಸಲು ನಿರ್ಧರಿಸಿದರು ಅಪ್ಪ
ನಾನು ಅಣ್ಣ ಸೇರಿ ಗೂಡ ತೆಗೆದು ಓಡಿಸಿದೆವು ಅವುಗಳ ಮರಿಗಳ ಪಾಪ
ಬಿಡಬೇಕೆ ಪಾರಿವಾಳಗಳು ಮತ್ತೆ ತಿರುಗಿ ಬಂದಿವೆ, ಹೊಸ ಗೂಡು ಕಟ್ಟಿವೆ
ತನ್ನ ಹೊಸ ಸಂಸಾರವನ್ನು ಹೊತ್ತು ತಂದಿವೆ, ಮತ್ತೆ ಮೊಟ್ಟೆಗಳ ಇಟ್ಟಿವೆ
- ತೇಜಸ್ವಿ.ಎ.ಸಿ
Saturday, June 12, 2010
ಜವಾಬ್ದಾರಿಯ ಲಾಭ
ಜವಾಬ್ದಾರಿಯ ಲಾಭ
ನಾನೊಮ್ಮೆ ಯೋಚಿಸಿದೆ ನಾನೇಕೆ ಹೀರೋ ಅಲ್ಲ
ಹೀರೋ ಆಗಬೇಕಾದರೆ ಏನೇನು ಮಾಡಬೇಕೆಲ್ಲ
ಕ್ರಿಕೆಟ್ ಆಡುವಾಗ ಚೆಂಡು ಬಂದಿತು ನಮ್ಮಿಬ್ಬರ ನಡುವೆ
ನಾನೇಕೆ ಓಡಲಿ ಅವನಿಗೆ ಚೆಂಡ ತಡೆವ ಜವಾಬ್ದಾರಿ ಬಿಡುವೆ
ತನ್ನೆಲ್ಲಾ ಶಕ್ತಿ ಕೊಟ್ಟು, ಹಾರಿ ಚೆಂಡ ತಡೆದನಾತ ಅಂದು
ಆ ಪ್ರಯತ್ನದಿಂದಾಗಿ ಉಳಿಯಿತು ಮೂರು ಓಟ ನಮ್ದು
ಆತನ ಶ್ರಮಕ್ಕೆ ಸಿಕ್ಕಿತು ಆತನಿಗೆ ಚಪ್ಪಾಳೆಯ ಸುರಿಮಳೆ
ಅದರಿಂದ ಆತನ ಮುಖದಲ್ಲಿ ಕಾಣುತ್ತಿತ್ತು ಉತ್ಸಾಹದ ಕಳೆ
ನಾ ಲೆಕ್ಕ ಹಾಕಿದೆ ಇದರಿಂದ ಆತನಿಗೆ ಸಿಕ್ಕ ಲಾಭವೇನು
ಆತನ ಜವಾಬ್ದಾರಿ ಮೂರು ಓಟ ಉಳಿಸಿದ್ದು ಲಾಭವಲ್ಲವೇನು
ಆತನಿಗೆ ಸಿಕ್ಕ ಮತ್ತೊಂದು ಲಾಭ ಆತನ ತುಂಬು ಆತ್ಮ ವಿಶ್ವಾಸ
ಇದೆಲ್ಲರ ಜೊತೆಗೆ ಆತನು ಗಳಿಸಿದ್ದ ತನ್ನ ಇಡೀ ತಂಡದ ವಿಶ್ವಾಸ
ಆ ಜವಾಬ್ದಾರಿಯಿಂದ ಅವನಿಗೆ ಸಿಕ್ಕಿತ್ತು ತಂಡದಿಂದ ಪ್ರಶಂಸೆ
ಈ ಅನುಭವಕ್ಕೆ ಮುಂಚೆ ನಾ ತಿಳಿದಿದ್ದೆ ಜವಾಬ್ದಾರಿ ಬರೀ ಹಿಂಸೆ
ಈ ಎಲ್ಲ ನನ್ನ ಅನುಭವದಿಂದ ನಾ ಕಲಿತೆ ಹೊಸ ಪಾಠವನು
ಇದು ಬೆಳೆಸಲಾರಂಭಿಸಿತು ಜವಾಬ್ದಾರಿಯ ಬಗ್ಗೆ ಪ್ರೀತಿಯನು
ಈಗ ಜೀವನದಲಿ ನಾ ಹೊರುತಿರುವೆ ವಿವಿಧ ಜವಾಬ್ದಾರಿಗಳನು
ಈ ನನ್ನ ಹೊಸ ನಡುವಳಿಕೆ ತಂದಿದೆ ಜೀವನದಲ್ಲಿ ಆಸಕ್ತಿಯನು
- ತೇಜಸ್ವಿ .ಎ.ಸಿ
ನಾನೊಮ್ಮೆ ಯೋಚಿಸಿದೆ ನಾನೇಕೆ ಹೀರೋ ಅಲ್ಲ
ಹೀರೋ ಆಗಬೇಕಾದರೆ ಏನೇನು ಮಾಡಬೇಕೆಲ್ಲ
ಕ್ರಿಕೆಟ್ ಆಡುವಾಗ ಚೆಂಡು ಬಂದಿತು ನಮ್ಮಿಬ್ಬರ ನಡುವೆ
ನಾನೇಕೆ ಓಡಲಿ ಅವನಿಗೆ ಚೆಂಡ ತಡೆವ ಜವಾಬ್ದಾರಿ ಬಿಡುವೆ
ತನ್ನೆಲ್ಲಾ ಶಕ್ತಿ ಕೊಟ್ಟು, ಹಾರಿ ಚೆಂಡ ತಡೆದನಾತ ಅಂದು
ಆ ಪ್ರಯತ್ನದಿಂದಾಗಿ ಉಳಿಯಿತು ಮೂರು ಓಟ ನಮ್ದು
ಆತನ ಶ್ರಮಕ್ಕೆ ಸಿಕ್ಕಿತು ಆತನಿಗೆ ಚಪ್ಪಾಳೆಯ ಸುರಿಮಳೆ
ಅದರಿಂದ ಆತನ ಮುಖದಲ್ಲಿ ಕಾಣುತ್ತಿತ್ತು ಉತ್ಸಾಹದ ಕಳೆ
ನಾ ಲೆಕ್ಕ ಹಾಕಿದೆ ಇದರಿಂದ ಆತನಿಗೆ ಸಿಕ್ಕ ಲಾಭವೇನು
ಆತನ ಜವಾಬ್ದಾರಿ ಮೂರು ಓಟ ಉಳಿಸಿದ್ದು ಲಾಭವಲ್ಲವೇನು
ಆತನಿಗೆ ಸಿಕ್ಕ ಮತ್ತೊಂದು ಲಾಭ ಆತನ ತುಂಬು ಆತ್ಮ ವಿಶ್ವಾಸ
ಇದೆಲ್ಲರ ಜೊತೆಗೆ ಆತನು ಗಳಿಸಿದ್ದ ತನ್ನ ಇಡೀ ತಂಡದ ವಿಶ್ವಾಸ
ಆ ಜವಾಬ್ದಾರಿಯಿಂದ ಅವನಿಗೆ ಸಿಕ್ಕಿತ್ತು ತಂಡದಿಂದ ಪ್ರಶಂಸೆ
ಈ ಅನುಭವಕ್ಕೆ ಮುಂಚೆ ನಾ ತಿಳಿದಿದ್ದೆ ಜವಾಬ್ದಾರಿ ಬರೀ ಹಿಂಸೆ
ಈ ಎಲ್ಲ ನನ್ನ ಅನುಭವದಿಂದ ನಾ ಕಲಿತೆ ಹೊಸ ಪಾಠವನು
ಇದು ಬೆಳೆಸಲಾರಂಭಿಸಿತು ಜವಾಬ್ದಾರಿಯ ಬಗ್ಗೆ ಪ್ರೀತಿಯನು
ಈಗ ಜೀವನದಲಿ ನಾ ಹೊರುತಿರುವೆ ವಿವಿಧ ಜವಾಬ್ದಾರಿಗಳನು
ಈ ನನ್ನ ಹೊಸ ನಡುವಳಿಕೆ ತಂದಿದೆ ಜೀವನದಲ್ಲಿ ಆಸಕ್ತಿಯನು
- ತೇಜಸ್ವಿ .ಎ.ಸಿ
Thursday, June 3, 2010
ನಿದ್ದೆ
ನಿದ್ದೆ
ದೈವ ಕೊಟ್ಟ ಅತ್ಯುತ್ತಮ ಉಡುಗೊರೆ ನೀನು
ನೀನು ಕೊಡುವ ಉಲ್ಲಾಸಕ್ಕೆ ಸರಿಸಾಟಿ ಏನು
ದಿನದ ದಣಿವಿಗೆ ಸುಖದ ಆರಾಮ ಕೊಡುವೆ
ದಿನದ ಆತಂಕಕೆ ನಿಶ್ಚಿಂತ ನೆಮ್ಮದಿಯ ತರುವೆ
ಇರುಳಷ್ಟೇ ಅಲ್ಲ ಹಗಲಲ್ಲೂ ಇರುವುದು ನಿನ್ನ ಸವಿ
ಮಧ್ಯಾಹ್ನ ಊಟದ ನಂತರ ಎಳೆವಳು ನಿದ್ರಾದೇವಿ
ನಿದ್ದೆಯ ಸವಿ ಸವಿಯಲು ಹೊತ್ತಿನ ಭೇದ ಭಾವವೇ
ಕೆಲಸವಿಲ್ಲದಿದ್ದರೆ ಸಾಕು ತಾನೇ ನಿದ್ರೆಗೆ ಜಾರುವೆ
ಕನಸುಗಳ ಸ್ವಪ್ನ ಲೋಕದಲಿ ಸುಂದರ ವಿಹಾರ
ಸ್ವಪ್ನ ಲೋಕದ ಸುಖ ಇಳಿಸುವುದು ಮನಸಿನ ಭಾರ
ಕನಸುಗಳು ಮಾಡುವವು ಬದುಕನ್ನು ವರ್ಣಮಯ
ಕನಸುಗಳು ಮಾಡುವವು ನಿದ್ದೆಯನು ಸುಖಮಯ
ಸುಖ ನಿದ್ದೆ ಕೆಡಿಸುವ ಹಲವು ವೃತ್ತಿಗಳಿವೆ ಜಗದಲಿ
ದುರದೃಷ್ಟಕ್ಕೆ ಸೇವೆ ಗೈವರ ಪಾಲು ಹೆಚ್ಚು ಅದರಲಿ
ಸ್ಥಿತಿ ಬದಲಾಗುವುದೆಂಬ ಆಶಯ ತಾಂತ್ರಿಕತೆಯಿಂದ
ಎಲ್ಲಾ ರೀತಿಯ ಜನ ಸುಖ ನಿದ್ದೆ ಪಡೆಯಲಿ ಇದರಿಂದ
ನಿದ್ದೆ ಗೆಟ್ಟೆಯೋ ಬುದ್ದಿ ಗೆಟ್ಟೆಯೋ ಎಂಬ ಹಳೆ ಗಾದೆ
ತಿಳಿಸುವುದು ನಿದ್ದೆಗೆಟ್ಟರೆ ಆರೋಗ್ಯಕ್ಕಾಗುವ ಭಾದೆ
ಪ್ರಕೃತಿ ಕೊಟ್ಟ ವರವಿದು ಜನರೆಲ್ಲರೂ ಸವಿಯಲಿ
ನಿದ್ರೆಯಿಂದ ಸುಖ ಆರೋಗ್ಯವನ್ನು ಜನರೆಲ್ಲಾ ಗಳಿಸಲಿ
- ತೇಜಸ್ವಿ. ಎ.ಸಿ
ದೈವ ಕೊಟ್ಟ ಅತ್ಯುತ್ತಮ ಉಡುಗೊರೆ ನೀನು
ನೀನು ಕೊಡುವ ಉಲ್ಲಾಸಕ್ಕೆ ಸರಿಸಾಟಿ ಏನು
ದಿನದ ದಣಿವಿಗೆ ಸುಖದ ಆರಾಮ ಕೊಡುವೆ
ದಿನದ ಆತಂಕಕೆ ನಿಶ್ಚಿಂತ ನೆಮ್ಮದಿಯ ತರುವೆ
ಇರುಳಷ್ಟೇ ಅಲ್ಲ ಹಗಲಲ್ಲೂ ಇರುವುದು ನಿನ್ನ ಸವಿ
ಮಧ್ಯಾಹ್ನ ಊಟದ ನಂತರ ಎಳೆವಳು ನಿದ್ರಾದೇವಿ
ನಿದ್ದೆಯ ಸವಿ ಸವಿಯಲು ಹೊತ್ತಿನ ಭೇದ ಭಾವವೇ
ಕೆಲಸವಿಲ್ಲದಿದ್ದರೆ ಸಾಕು ತಾನೇ ನಿದ್ರೆಗೆ ಜಾರುವೆ
ಕನಸುಗಳ ಸ್ವಪ್ನ ಲೋಕದಲಿ ಸುಂದರ ವಿಹಾರ
ಸ್ವಪ್ನ ಲೋಕದ ಸುಖ ಇಳಿಸುವುದು ಮನಸಿನ ಭಾರ
ಕನಸುಗಳು ಮಾಡುವವು ಬದುಕನ್ನು ವರ್ಣಮಯ
ಕನಸುಗಳು ಮಾಡುವವು ನಿದ್ದೆಯನು ಸುಖಮಯ
ಸುಖ ನಿದ್ದೆ ಕೆಡಿಸುವ ಹಲವು ವೃತ್ತಿಗಳಿವೆ ಜಗದಲಿ
ದುರದೃಷ್ಟಕ್ಕೆ ಸೇವೆ ಗೈವರ ಪಾಲು ಹೆಚ್ಚು ಅದರಲಿ
ಸ್ಥಿತಿ ಬದಲಾಗುವುದೆಂಬ ಆಶಯ ತಾಂತ್ರಿಕತೆಯಿಂದ
ಎಲ್ಲಾ ರೀತಿಯ ಜನ ಸುಖ ನಿದ್ದೆ ಪಡೆಯಲಿ ಇದರಿಂದ
ನಿದ್ದೆ ಗೆಟ್ಟೆಯೋ ಬುದ್ದಿ ಗೆಟ್ಟೆಯೋ ಎಂಬ ಹಳೆ ಗಾದೆ
ತಿಳಿಸುವುದು ನಿದ್ದೆಗೆಟ್ಟರೆ ಆರೋಗ್ಯಕ್ಕಾಗುವ ಭಾದೆ
ಪ್ರಕೃತಿ ಕೊಟ್ಟ ವರವಿದು ಜನರೆಲ್ಲರೂ ಸವಿಯಲಿ
ನಿದ್ರೆಯಿಂದ ಸುಖ ಆರೋಗ್ಯವನ್ನು ಜನರೆಲ್ಲಾ ಗಳಿಸಲಿ
- ತೇಜಸ್ವಿ. ಎ.ಸಿ
Subscribe to:
Posts (Atom)