ಪ್ರಕೃತಿ ಪ್ರವಾಸ
ಯಾಂತ್ರಿಕತೆಯಿಂದ ಬೇಸರವೆನಿಸಿತು ನಗರದ ವಾಸ
ಯೋಚಿಸಿದೆವು ನಾವೆಲ್ಲಾ ಮಾಡಲು ಪುಟ್ಟ ಪ್ರವಾಸ
ಸಭೆ ಏರ್ಪಡಿಸಿದೆವು ತೀರ್ಮಾನಿಸಲು ಪ್ರವಾಸದ ತಾಣ
ಬದಲಾವಣೆಗೆ ಮಲೆನಾಡೇ ಒಳ್ಳೆಯದೆಂದ ಒಬ್ಬ ಜಾಣ
ನಾಲ್ವರೂ ಸೇರಿ ಹೊರೆಟೆವು ಹತ್ತಿ ನಮ್ಮ ಕಾರು
ಉತ್ಸಾಹದಲೇ ಪ್ರವಾಸಕಾಗಿ ಬಿಟ್ಟೆವು ನಮ್ಮ ಊರು
ದಾರಿಯುದ್ದಕೂ ಕಂಡಿತು ಹಚ್ಚ ಹಸಿರ ಗುಡ್ಡ ಬೆಟ್ಟಗಳು
ಹಸಿರ ಕಾಡ ತಂಪಾಗಿಸಿತ್ತು ಹರಿಯುತ್ತಿದ್ದ ಝರಿಗಳು
ದಾರಿಯಲ್ಲಿ ಕಾಣ ಸಿಕ್ಕವು ಪುಟ್ಟ ಮೊಲ, ಜಿಂಕೆ, ಕೋತಿ
ಸಣ್ಣನೆ ಮಂಜು ಹೆಚ್ಚಿಸಿತು ಪ್ರಕೃತಿಯ ರಮ್ಯತೆ ಈ ರೀತಿ
ಸುಂದರ ನೋಟದ ನಡುವೆ ತಲುಪಿದೆವು ವಿಹಾರಧಾಮ
ತುಂತುರು ಮಳೆ ಶುರುವಾಗಿ ಹೆಚ್ಚಿಸಿತು ಪ್ರಕೃತಿ ಪ್ರೇಮ
ಪ್ರವಾಸದಿ ನಾವು ಹೊಕ್ಕಿದೆವು ದಟ್ಟನೆಯ ಅಭಯಾರಣ್ಯ
ನಾಡಿನ ಅರಣ್ಯ ಸಂಪತ್ತು ನೋಡಿ ನಾನಾದೆನಂದು ಧನ್ಯ
ಯಥೇಚ್ಛ ಪ್ರಕೃತಿ ಸಂಪತ್ತನು ಹೊಂದಿದ ನಾಡು ನಮ್ಮದು
ಈ ಸಂಪತ್ತನು ರಕ್ಷಿಸಿ ಬೆಳೆಸುವ ಜವಾಬ್ದಾರಿಯು ನಮ್ಮದು
ಪ್ರಕೃತಿಯ ಪ್ರವಾಸದಲಿ ಎಲ್ಲೂ ಪ್ಲಾಸ್ಟಿಕ್ ಬಳಸಿಲಿಲ್ಲ ನಾವು
ಹೀಗೆ ಎಲ್ಲಾ ನೋಡಿಕೊಂಡೆವು ಏರದಂತೆ ಭೂಮಿಯ ಕಾವು
- ತೇಜಸ್ವಿ.ಎ.ಸಿ
ಹಾಯ್,ನಾನು ತೇಜಸ್ವಿ, ವೃತ್ತಿಯಲ್ಲಿ ಐ ಟಿ ಕ್ಷೇತ್ರದಲ್ಲಿ ಉದ್ಯೋಗಿ. ನನ್ನ ಆಸಕ್ತಿಯೆಲ್ಲ ಕವನ, ಸಾಹಿತ್ಯ, ಚಿತ್ರಕಲೆ, ಛಾಯಾಚಿತ್ರಗ್ರಹಣ. ಈ ನನ್ನ ಕಲೆಯ ಅಭಿರುಚಿಗಾಗಿ ನಾನು ಈ ತಾಣವನ್ನು ನಿರ್ಮಿಸಿದ್ದೇನೆ. ನಿಮ್ಮಲ್ಲರಿಗೂ ನನ್ನ ಪುಟ್ಟ ತಾಣಕ್ಕೆ ಸ್ವಾಗತ.
Wednesday, December 22, 2010
Sunday, December 12, 2010
ಪರಿಪೂರ್ಣತೆಯ ಹುಚ್ಚು
ಪರಿಪೂರ್ಣತೆಯ ಹುಚ್ಚು
ತಾನು ಮುಟ್ಟಲಾಗದ ನಿರೀಕ್ಷೆಯ ಭಾರವ ಹೊತ್ತು
ಸರಳ ತೃಪ್ತಿಗಾಗಿ ಹೋರಾಡುವುದು ತರವೇ?
ಎಂದೂ ಮುಗಿಯದ ಹುಚ್ಚು ಸ್ಪರ್ಧೆಗಳ ಗೆಲುವಿನ
ಅಳತೆಗೋಲಿಗೆ ಸಂತೋಷದ ಅವಲಂಭನೆ ತರವೇ?
ಜೀವನದುದ್ದಕ್ಕೂ ಪ್ರತಿ ಕೆಲಸಗಳಲ್ಲಿ ಅತ್ಯುನ್ನತ
ಸಾಧಿಸಲು ಮನದ ನೆಮ್ಮದಿಯ ಮರೆವುದು ತರವೇ?
ಬಾಹ್ಯ ಸಮಾಜದ ಕಣ್ಣ ಮೆಚ್ಚುಗೆಯ ಉದ್ದೇಶಕಾಗಿ
ಬಲವಂತದ ಗುರಿಯ ಹೊರುವುದು ತರವೇ?
ಮನದ ಸಹಜ ಸಂತೋಷವನು ಮಿತಿ ಇಲ್ಲದ
ಈ ಆಸೆಗಳ ಹತೋಟಿಗೆ ಬಿಟ್ಟು ಕೊಡಲಾರೆ
ನವಿರಾದ ಭಾವನೆಗಳ ಕೋಮಲ ಹೃದಯವನು
ಸಾಮರ್ಥ್ಯ ಅಳೆವ ಹುಚ್ಚು ಜೂಜಿಗೆ ಬಿಡಲಾರೆ
ಕೈಯಲ್ಲೇ ಇರುವ ನನ್ನ ಸುಂದರ ಜೀವನವನ್ನು
ದಿಕ್ಕು ಕೊನೆಯಿಲ್ಲದ ಸ್ಪರ್ಧೆಗಳಿಗೆ ತಳ್ಳಲಾರೆ
ನನಗಿತ್ತುರುವ ಶಕ್ತಿ ಸಾಮರ್ಥ್ಯವನು ವಿರಳವಾದ
ಪರಿಪೂರ್ಣತೆಯೆಂಬ ಅತೃಪ್ತಿಗೆ ಒಪ್ಪಿಸಲಾರೆ
ಚಿಕ್ಕ ವಿಷಯಗಳಲ್ಲೂ ತೃಪ್ತಿ ಪಡೋಣ ನಾವು
ಆಗದಿರಲಿ ಪರಿಪೂರ್ಣತೆ ಎಂಬುದು ನೋವು
-ತೇಜಸ್ವಿ.ಎ.ಸಿ
ತಾನು ಮುಟ್ಟಲಾಗದ ನಿರೀಕ್ಷೆಯ ಭಾರವ ಹೊತ್ತು
ಸರಳ ತೃಪ್ತಿಗಾಗಿ ಹೋರಾಡುವುದು ತರವೇ?
ಎಂದೂ ಮುಗಿಯದ ಹುಚ್ಚು ಸ್ಪರ್ಧೆಗಳ ಗೆಲುವಿನ
ಅಳತೆಗೋಲಿಗೆ ಸಂತೋಷದ ಅವಲಂಭನೆ ತರವೇ?
ಜೀವನದುದ್ದಕ್ಕೂ ಪ್ರತಿ ಕೆಲಸಗಳಲ್ಲಿ ಅತ್ಯುನ್ನತ
ಸಾಧಿಸಲು ಮನದ ನೆಮ್ಮದಿಯ ಮರೆವುದು ತರವೇ?
ಬಾಹ್ಯ ಸಮಾಜದ ಕಣ್ಣ ಮೆಚ್ಚುಗೆಯ ಉದ್ದೇಶಕಾಗಿ
ಬಲವಂತದ ಗುರಿಯ ಹೊರುವುದು ತರವೇ?
ಮನದ ಸಹಜ ಸಂತೋಷವನು ಮಿತಿ ಇಲ್ಲದ
ಈ ಆಸೆಗಳ ಹತೋಟಿಗೆ ಬಿಟ್ಟು ಕೊಡಲಾರೆ
ನವಿರಾದ ಭಾವನೆಗಳ ಕೋಮಲ ಹೃದಯವನು
ಸಾಮರ್ಥ್ಯ ಅಳೆವ ಹುಚ್ಚು ಜೂಜಿಗೆ ಬಿಡಲಾರೆ
ಕೈಯಲ್ಲೇ ಇರುವ ನನ್ನ ಸುಂದರ ಜೀವನವನ್ನು
ದಿಕ್ಕು ಕೊನೆಯಿಲ್ಲದ ಸ್ಪರ್ಧೆಗಳಿಗೆ ತಳ್ಳಲಾರೆ
ನನಗಿತ್ತುರುವ ಶಕ್ತಿ ಸಾಮರ್ಥ್ಯವನು ವಿರಳವಾದ
ಪರಿಪೂರ್ಣತೆಯೆಂಬ ಅತೃಪ್ತಿಗೆ ಒಪ್ಪಿಸಲಾರೆ
ಚಿಕ್ಕ ವಿಷಯಗಳಲ್ಲೂ ತೃಪ್ತಿ ಪಡೋಣ ನಾವು
ಆಗದಿರಲಿ ಪರಿಪೂರ್ಣತೆ ಎಂಬುದು ನೋವು
-ತೇಜಸ್ವಿ.ಎ.ಸಿ
Monday, December 6, 2010
ಕವನ ರಚಿಸುವ ಅನುಭವ
ಕವನ ರಚಿಸುವ ಅನುಭವ
ಕವನ ಬರೆಯಲು ಕೂತರೆ ಆಗುವುದು ಮನ ಪುಳಕ
ತಯಾರಿಸಬೇಕೆನಿಸುವುದು ಅಕ್ಷರಗಳ ಹೊಸ ಪಾಕ
ಬರೆಯುವ ವಿಷಯದಲ್ಲಿ ಒಮ್ಮೆ ವಿಹರಿಸುವೆನು ಹಾಗೆ
ವಿಹರಿಸಿ ತೀರ್ಮನಿಸುವೆನು ಅದನು ಬರೆಯುವ ಬಗೆ
ಬರೆಯಲು ಕುಳಿತರೆ ಜೀವಕೆ ಸಿಗುವುದು ಹೊಸಜೀವ
ಕವನವು ಕೊಡುವುದು ನಮಗೆ ನವ ಜೀವನೋತ್ಸಾಹ
ನನ್ನ ಅನುಭವಕೆ ಅಕ್ಷರಗಳು ಕೊಡುವವು ಸೌಂದರ್ಯ
ಕನ್ನಡದಲೇ ನಾ ಮಾಡುವೆನು ಕವನ ಕೆತ್ತುವ ಕಾರ್ಯ
ಕನ್ನಡದ ಪದಗಳು ಮಾಡುವವು ನಿರೂಪಣೆ ಸುಲಭ
ಅದರಿಂದಲೆ ಕವನ ರಚನೆ ಒಂದು ಸುಂದರ ಅನುಭವ
ಕವನ ರಚನೆಯಿಂದ ಹಗುರವಾಗುವುದು ನಮ್ಮ ಮನ
ಸುಂದರ ಕವನದ ರಚನೆ ನೀಡುವುದು ಸಂತೋಷವನ್ನ
- ತೇಜಸ್ವಿ.ಎ.ಸಿ
ಕವನ ಬರೆಯಲು ಕೂತರೆ ಆಗುವುದು ಮನ ಪುಳಕ
ತಯಾರಿಸಬೇಕೆನಿಸುವುದು ಅಕ್ಷರಗಳ ಹೊಸ ಪಾಕ
ಬರೆಯುವ ವಿಷಯದಲ್ಲಿ ಒಮ್ಮೆ ವಿಹರಿಸುವೆನು ಹಾಗೆ
ವಿಹರಿಸಿ ತೀರ್ಮನಿಸುವೆನು ಅದನು ಬರೆಯುವ ಬಗೆ
ಬರೆಯಲು ಕುಳಿತರೆ ಜೀವಕೆ ಸಿಗುವುದು ಹೊಸಜೀವ
ಕವನವು ಕೊಡುವುದು ನಮಗೆ ನವ ಜೀವನೋತ್ಸಾಹ
ನನ್ನ ಅನುಭವಕೆ ಅಕ್ಷರಗಳು ಕೊಡುವವು ಸೌಂದರ್ಯ
ಕನ್ನಡದಲೇ ನಾ ಮಾಡುವೆನು ಕವನ ಕೆತ್ತುವ ಕಾರ್ಯ
ಕನ್ನಡದ ಪದಗಳು ಮಾಡುವವು ನಿರೂಪಣೆ ಸುಲಭ
ಅದರಿಂದಲೆ ಕವನ ರಚನೆ ಒಂದು ಸುಂದರ ಅನುಭವ
ಕವನ ರಚನೆಯಿಂದ ಹಗುರವಾಗುವುದು ನಮ್ಮ ಮನ
ಸುಂದರ ಕವನದ ರಚನೆ ನೀಡುವುದು ಸಂತೋಷವನ್ನ
- ತೇಜಸ್ವಿ.ಎ.ಸಿ
Friday, November 26, 2010
ರಾಜಕೀಯ
ರಾಜಕೀಯ
ಮತ್ತೆ ಮತ್ತೆ ಕೇಳಬರುತ್ತಿದೆ ಗುಸು ಗುಸು ಸುದ್ದಿ
ನಡವಳಿಕೆಯೂ ತೋರುತ್ತಿದೆ ಪಕ್ಷಪಾತದ ಬುದ್ದಿ
ನನಗೂ ಬಡೆಯಿತು ಹೊಲಸು ರಾಜಕೀಯದ ವಾಸನೆ
ಆಗಲೇ ಗೊತ್ತಾಯಿತು ರಾಜಕೀಯ ತೀರ ದುರ್ವಾಸನೆ
ಸತ್ಯದ ಖಚಿತತೆಗೆ ಗಮನಿಸಿದೆ ಸ್ವಲ್ಪ ದಿನಗಳು ಹೀಗೆ
ಪರೀಕ್ಷಿಸಿಯೂ ನೋಡಿದೆ ಸುದ್ದಿಯು ನಿಜವೋ ಹೇಗೆ
ಪಕ್ಷಪಾತತೆ ಎದ್ದು ಕಾಣತೊಡಗಿತು ಬರಿಗಣ್ಣಿನ ಮುಂದೆ
ತೆರೆಯೆ ಇಲ್ಲದೆ ನಡೆಯುತ್ತಿತ್ತು ನಾಟಕವು ನಮ್ಮ ಮುಂದೆ
ಹತೋಟಿ ಇಲ್ಲದೆ ನಡೆಯುತ್ತಿದೆ ಕಳಪೆ ರಾಜಕೀಯ
ನಮ್ಮ ನೆಲದಲ್ಲೇ ಇಂದು ನಾವಾಗಿದ್ದೇವೆ ಪರಕೀಯ
ಇಂಥಹ ವಾತಾವರಣ ನೀಡುವುದು ಅರೆ ಕ್ಷಣ ನಿರುತ್ಸಾಹ
ಮುಂದಿನ ಕ್ಷಣವೇ ನೀಡುವುದು ಮುಂಬರಲು ಪ್ರೋತ್ಸಾಹ
ತಲೆ ಓಡಿಸಿ ಮುಂಬರಲು ನೀಡುತ್ತಿರುವ ಸೂಚನೆಯೇನೋ
ಇಂತಹ ಸಂಧರ್ಭಗಳು ಬರುವುದು ನಮ್ಮ ಒಳಿತಿಗೇನೋ?
- ತೇಜಸ್ವಿ .ಎ.ಸಿ
ಮತ್ತೆ ಮತ್ತೆ ಕೇಳಬರುತ್ತಿದೆ ಗುಸು ಗುಸು ಸುದ್ದಿ
ನಡವಳಿಕೆಯೂ ತೋರುತ್ತಿದೆ ಪಕ್ಷಪಾತದ ಬುದ್ದಿ
ನನಗೂ ಬಡೆಯಿತು ಹೊಲಸು ರಾಜಕೀಯದ ವಾಸನೆ
ಆಗಲೇ ಗೊತ್ತಾಯಿತು ರಾಜಕೀಯ ತೀರ ದುರ್ವಾಸನೆ
ಸತ್ಯದ ಖಚಿತತೆಗೆ ಗಮನಿಸಿದೆ ಸ್ವಲ್ಪ ದಿನಗಳು ಹೀಗೆ
ಪರೀಕ್ಷಿಸಿಯೂ ನೋಡಿದೆ ಸುದ್ದಿಯು ನಿಜವೋ ಹೇಗೆ
ಪಕ್ಷಪಾತತೆ ಎದ್ದು ಕಾಣತೊಡಗಿತು ಬರಿಗಣ್ಣಿನ ಮುಂದೆ
ತೆರೆಯೆ ಇಲ್ಲದೆ ನಡೆಯುತ್ತಿತ್ತು ನಾಟಕವು ನಮ್ಮ ಮುಂದೆ
ಹತೋಟಿ ಇಲ್ಲದೆ ನಡೆಯುತ್ತಿದೆ ಕಳಪೆ ರಾಜಕೀಯ
ನಮ್ಮ ನೆಲದಲ್ಲೇ ಇಂದು ನಾವಾಗಿದ್ದೇವೆ ಪರಕೀಯ
ಇಂಥಹ ವಾತಾವರಣ ನೀಡುವುದು ಅರೆ ಕ್ಷಣ ನಿರುತ್ಸಾಹ
ಮುಂದಿನ ಕ್ಷಣವೇ ನೀಡುವುದು ಮುಂಬರಲು ಪ್ರೋತ್ಸಾಹ
ತಲೆ ಓಡಿಸಿ ಮುಂಬರಲು ನೀಡುತ್ತಿರುವ ಸೂಚನೆಯೇನೋ
ಇಂತಹ ಸಂಧರ್ಭಗಳು ಬರುವುದು ನಮ್ಮ ಒಳಿತಿಗೇನೋ?
- ತೇಜಸ್ವಿ .ಎ.ಸಿ
Wednesday, October 27, 2010
ಕೃಷಿಕನಾಗುವೆ
ಕೃಷಿಕನಾಗುವೆ
ನಗರದ ದಟ್ಟಣೆಯಿಂದ ಹೊರಹೋಗಲು ಪ್ರಕೃತಿಯ
ರಮ್ಯತೆಯ ಸವಿಯಲು ಹೋಗಿ ಸೇರಿದೆ ಮಲೆನಾಡ
ಮಡಿಲಿಗೆ, ಗುಡ್ಡಗಳ ನಡುವೆ ಒಂಟಿ ತೋಟದ ಮನೆ,
ಮನೆಯೇ ಹಿಂದೆಯೇ ನಲಿಯುತ್ತಿತ್ತು ಹಸಿರು ತೆನೆ
ವರುಷಗಳ ನಂತರ ಸಿಕ್ಕ ಅವಕಾಶಕೆ ನಾ ನಡೆದೆ
ತೋಟದ ಒಳಗೆ, ಹಿಂದೆಯೇ ಇದ್ದ ಹಸಿರು ಗದ್ದೆಯು
ಮೈದುಂಬಿ ನಿಂತಿತ್ತು, ತನ್ನ ಬಳಿ ಇದ್ದ ಜಲ ಸಂಪತ್ತ
ತೋರುತ, ತನ್ನ ಶ್ರೀಮಂತಿಕೆಯ ಜೊತೆ ಬೀಗುತ
ಹಾಗೆಯೇ ಕಾಲ ಸವೆಸುತ ಸ್ವಲ್ಪ ಮುನ್ನಡೆದರೆ
ಕಂಡಿತೆನಗೆ ಘಮ ಘಮಿಸುವ ಏಲಕ್ಕಿಯ ಗಿಡಗಳು
ಸುತ್ತಲೂ ಇದ್ದ ಎತ್ತರದ ಅಡಕೆಯ ಮರಗಳ ಮಧ್ಯೆ
ತಾನು ಕಾಣದೆ ಮೆಣಸಿನ ಹಿಂದೆ ಬಚ್ಚಿಟ್ಟು ಕೊಂಡಿತ್ತು
ತೋಟದ ಪಕ್ಕದಲ್ಲೇ ಇದ್ದ ಕೊಡಗಿನ ಕಿತ್ತಳೆ ಹಣ್ಣು
ನನ್ನ ಕೃಷಿಯ ತಿಳುವಳಿಕೆಗೆ ಪುಟ್ಟ ಸವಾಲಾಯಿತು
ಪಕ್ಕದಲ್ಲೇ ಗುಡ್ಡದ ಮೇಲೆ ಇದ್ದ ಕಾಫಿ ಬೆಳೆ, ಒಂದೇ
ಕಡೆ ಕಂಡ ವೈವಿಧ್ಯ ಬೆಳೆ ನನ್ನನ್ನು ಬೆರಗುಗೊಳಿಸಿತು
ಸುಂದರ ಪ್ರಕೃತಿಯ ನಡುವೆ ಕಂಡ ಹತ್ತು ಹಲವು
ಬಗೆಯ ಕೃಷಿ ತಂದುಕೊಟ್ಟಿತು ಎಲ್ಲರಿಗೂ ಉತ್ಸಾಹ
ನಾವೂ ಮುಂದೆ ನಗರವ ತೊರೆದು, ಪ್ರಕೃತಿ ಸಹಜ
ಕೃಷಿಯಲಿ ತೊಡಗಿ ವ್ಯವಸಾಯ ಮಾಡುವ ಪ್ರೋತ್ಸಾಹ
- ತೇಜಸ್ವಿ.ಎ.ಸಿ
ನಗರದ ದಟ್ಟಣೆಯಿಂದ ಹೊರಹೋಗಲು ಪ್ರಕೃತಿಯ
ರಮ್ಯತೆಯ ಸವಿಯಲು ಹೋಗಿ ಸೇರಿದೆ ಮಲೆನಾಡ
ಮಡಿಲಿಗೆ, ಗುಡ್ಡಗಳ ನಡುವೆ ಒಂಟಿ ತೋಟದ ಮನೆ,
ಮನೆಯೇ ಹಿಂದೆಯೇ ನಲಿಯುತ್ತಿತ್ತು ಹಸಿರು ತೆನೆ
ವರುಷಗಳ ನಂತರ ಸಿಕ್ಕ ಅವಕಾಶಕೆ ನಾ ನಡೆದೆ
ತೋಟದ ಒಳಗೆ, ಹಿಂದೆಯೇ ಇದ್ದ ಹಸಿರು ಗದ್ದೆಯು
ಮೈದುಂಬಿ ನಿಂತಿತ್ತು, ತನ್ನ ಬಳಿ ಇದ್ದ ಜಲ ಸಂಪತ್ತ
ತೋರುತ, ತನ್ನ ಶ್ರೀಮಂತಿಕೆಯ ಜೊತೆ ಬೀಗುತ
ಹಾಗೆಯೇ ಕಾಲ ಸವೆಸುತ ಸ್ವಲ್ಪ ಮುನ್ನಡೆದರೆ
ಕಂಡಿತೆನಗೆ ಘಮ ಘಮಿಸುವ ಏಲಕ್ಕಿಯ ಗಿಡಗಳು
ಸುತ್ತಲೂ ಇದ್ದ ಎತ್ತರದ ಅಡಕೆಯ ಮರಗಳ ಮಧ್ಯೆ
ತಾನು ಕಾಣದೆ ಮೆಣಸಿನ ಹಿಂದೆ ಬಚ್ಚಿಟ್ಟು ಕೊಂಡಿತ್ತು
ತೋಟದ ಪಕ್ಕದಲ್ಲೇ ಇದ್ದ ಕೊಡಗಿನ ಕಿತ್ತಳೆ ಹಣ್ಣು
ನನ್ನ ಕೃಷಿಯ ತಿಳುವಳಿಕೆಗೆ ಪುಟ್ಟ ಸವಾಲಾಯಿತು
ಪಕ್ಕದಲ್ಲೇ ಗುಡ್ಡದ ಮೇಲೆ ಇದ್ದ ಕಾಫಿ ಬೆಳೆ, ಒಂದೇ
ಕಡೆ ಕಂಡ ವೈವಿಧ್ಯ ಬೆಳೆ ನನ್ನನ್ನು ಬೆರಗುಗೊಳಿಸಿತು
ಸುಂದರ ಪ್ರಕೃತಿಯ ನಡುವೆ ಕಂಡ ಹತ್ತು ಹಲವು
ಬಗೆಯ ಕೃಷಿ ತಂದುಕೊಟ್ಟಿತು ಎಲ್ಲರಿಗೂ ಉತ್ಸಾಹ
ನಾವೂ ಮುಂದೆ ನಗರವ ತೊರೆದು, ಪ್ರಕೃತಿ ಸಹಜ
ಕೃಷಿಯಲಿ ತೊಡಗಿ ವ್ಯವಸಾಯ ಮಾಡುವ ಪ್ರೋತ್ಸಾಹ
- ತೇಜಸ್ವಿ.ಎ.ಸಿ
Sunday, October 17, 2010
ಗೃಹಸ್ತಾಶ್ರಮ
ಗೃಹಸ್ತಾಶ್ರಮ
ಮನೆಯ ಮುಂದೆ ಎದ್ದು ನಿಂತಿದೆ ಚಪ್ಪರ
ಹಸೆಮಣೆಯ ಏರಿ ಕುಳಿತಿಹನಿಂದು ವರ
ಬಾಗಿಲಲಿ ಕಾಣುತಿದೆ ಹಸಿರು ತೋರಣ
ಹುಡುಗನ ಮೈಯೆಲ್ಲಾ ಆಗಿದೆ ಹರಿಶಿಣ
ಮನೆಯಲ್ಲೆಲ್ಲಾ ಸೇರಿದ್ದಾರೆ ಬಂಧುಗಳು
ಭರದಿಂದ ಸಾಗಿದೆ ಲಗ್ನದ ಕಾರ್ಯಗಳು
ಮನೆಯಲ್ಲಿಂದು ನಡೆದಿದೆ ದೇವರ ಕಾರ್ಯ
ಹುಡುಗನು ಮುಗಿಸುತ್ತಿದ್ದಾನೆ ಬ್ರಹ್ಮಚರ್ಯ
ನಾಲ್ಕು ದಿನದಿ ಬಂದಿತು ಮದುವೆಯ ದಿನ
ಮನೆ ಮಂದಿಗೆಲ್ಲರಿಗಿದು ಸಂಭ್ರಮದ ದಿನ
ಮಂಟಪವು ಅಲಂಕೃತವಾಗಿದೆ ಹೂಗಳಿಂದ
ಶಾಸ್ತ್ರಗಳು ಆರಂಭವಾಗಿದೆ ಶಾಸ್ತ್ರಿಗಳಿಂದ
ಕನ್ಯಾಧಾರೆಯ ಮಾಡಿಹರು ಮಗಳ ಹೆತ್ತವರು
ಮಾಂಗಲ್ಯಧಾರಣೆ ಮಾಡಿಸಿ ಆದರು ಗೆದ್ದವರು
ಗೃಹಸ್ತಾಶ್ರಮ ಪ್ರವೇಶಿಸಿದ ಸಪ್ತಪದಿ ತುಳಿದು
ಹೊಸ ಜೀವನವ ಆರಂಭಿಸಿದ ಹುಡುಗನಿಂದು
- ತೇಜಸ್ವಿ ಎ.ಸಿ
ಮನೆಯ ಮುಂದೆ ಎದ್ದು ನಿಂತಿದೆ ಚಪ್ಪರ
ಹಸೆಮಣೆಯ ಏರಿ ಕುಳಿತಿಹನಿಂದು ವರ
ಬಾಗಿಲಲಿ ಕಾಣುತಿದೆ ಹಸಿರು ತೋರಣ
ಹುಡುಗನ ಮೈಯೆಲ್ಲಾ ಆಗಿದೆ ಹರಿಶಿಣ
ಮನೆಯಲ್ಲೆಲ್ಲಾ ಸೇರಿದ್ದಾರೆ ಬಂಧುಗಳು
ಭರದಿಂದ ಸಾಗಿದೆ ಲಗ್ನದ ಕಾರ್ಯಗಳು
ಮನೆಯಲ್ಲಿಂದು ನಡೆದಿದೆ ದೇವರ ಕಾರ್ಯ
ಹುಡುಗನು ಮುಗಿಸುತ್ತಿದ್ದಾನೆ ಬ್ರಹ್ಮಚರ್ಯ
ನಾಲ್ಕು ದಿನದಿ ಬಂದಿತು ಮದುವೆಯ ದಿನ
ಮನೆ ಮಂದಿಗೆಲ್ಲರಿಗಿದು ಸಂಭ್ರಮದ ದಿನ
ಮಂಟಪವು ಅಲಂಕೃತವಾಗಿದೆ ಹೂಗಳಿಂದ
ಶಾಸ್ತ್ರಗಳು ಆರಂಭವಾಗಿದೆ ಶಾಸ್ತ್ರಿಗಳಿಂದ
ಕನ್ಯಾಧಾರೆಯ ಮಾಡಿಹರು ಮಗಳ ಹೆತ್ತವರು
ಮಾಂಗಲ್ಯಧಾರಣೆ ಮಾಡಿಸಿ ಆದರು ಗೆದ್ದವರು
ಗೃಹಸ್ತಾಶ್ರಮ ಪ್ರವೇಶಿಸಿದ ಸಪ್ತಪದಿ ತುಳಿದು
ಹೊಸ ಜೀವನವ ಆರಂಭಿಸಿದ ಹುಡುಗನಿಂದು
- ತೇಜಸ್ವಿ ಎ.ಸಿ
Friday, October 8, 2010
ಕಾರ್ಯಶೀಲನಾಗು
ಕಾರ್ಯಶೀಲನಾಗು
ಗುರುಗಳೇ, ಬೇಕಿರುವ ಗುರಿಯ ಮುಟ್ಟಲಾರೆವು ಏಕೆ
ತಿಳುವಳಿಕೆ ಎಲ್ಲಾ ಇದ್ದರೂ ಅದು ಕೈ ತಪ್ಪುವುದೇಕೆ
ನನ್ನಲ್ಲಿ ಇಚ್ಛಾಶಕ್ತಿಯ ಕೊರತೆಯೇನೂ ಇದ್ದಿರಲಿಲ್ಲ
ಕಾಗದದ ಮೇಲೆ ಅದಕ್ಕೆ ಯೋಜನೆಗಳು ಇದ್ದವಲ್ಲ
ಮನೆಯಲ್ಲಿ ಹಣದ ಕೊರತೆಯ ಎಂದೂ ನೋಡಲಿಲ್ಲ
ಬೇಡದ ದುರಭ್ಯಾಸಗಳ ನಾ ಎಂದೂ ಬೆಳೆಸಲಿಲ್ಲ
ತಿಳಿದಿದೆಯೇ ನಿಮಗೆ ಈ ಎಲ್ಲಾ ಸೋಲಿಗೆ ಕಾರಣ
ನಾನು ಕಟ್ಟಬೇಕು ಕೆಲಸಗಳಿಗೆ ಗೆಲುವಿನ ತೋರಣ
ಶಿಷ್ಯಾ, ಕೂತು ಕೆಲಸದ ಬಗ್ಗೆ ಯೋಚಿಸಿದರೆ ಫಲವಿಲ್ಲ
ಕಾರ್ಯಶೀಲನಾಗದೇ ನಿನ್ನ ಕೆಲಸದಲಿ ಗೆಲುವಿಲ್ಲ
ಬರೇ ಯೋಚಿಸುತ್ತಾ ಕುಳಿತರೆ ಆಗುವುದು ಮನ ಭಾರ
ಯೋಚಿಸದೆ ಕಾರ್ಯಶೀಲನಾದರೆ ಹೋಗುವೆ ನೀ ದೂರ
ಎಲ್ಲಾ ಕೆಲಸವ ಕಲಿತು ನಂತರವೇ ಪ್ರಾರಂಭಿಸಬೇಕಿಲ್ಲ
ಕೆಲಸವ ಆರಂಭಿಸು, ಮಾಡುತ್ತಾ ಕಲಿಯುವೆ ನೀ ಎಲ್ಲಾ
ಕೆಲಸದಲಿ ಇರಲಿ ಯೋಜನೆಗೆ ಕೇವಲ ಪ್ರತಿಶತ ಇಪ್ಪತ್ತು
ಕಾರ್ಯಶೀಲನಾಗಿ ಕೆಲಸ ಮಾಡಲು ಪ್ರತಿಶತ ಎಂಬತ್ತು
ಸಂಪೂರ್ಣ ಹೊಣೆ ಹೊತ್ತು ಶುರು ಮಾಡು ನೀ ಕೆಲಸವ
ನಿನ್ನೀ ಚುರುಕುತನ ನಿನ್ನರಿವಿಲ್ಲದೆ ಕ್ರಮಿಸುವುದು ದೂರವ
- ತೇಜಸ್ವಿ.ಎ.ಸಿ
ಗುರುಗಳೇ, ಬೇಕಿರುವ ಗುರಿಯ ಮುಟ್ಟಲಾರೆವು ಏಕೆ
ತಿಳುವಳಿಕೆ ಎಲ್ಲಾ ಇದ್ದರೂ ಅದು ಕೈ ತಪ್ಪುವುದೇಕೆ
ನನ್ನಲ್ಲಿ ಇಚ್ಛಾಶಕ್ತಿಯ ಕೊರತೆಯೇನೂ ಇದ್ದಿರಲಿಲ್ಲ
ಕಾಗದದ ಮೇಲೆ ಅದಕ್ಕೆ ಯೋಜನೆಗಳು ಇದ್ದವಲ್ಲ
ಮನೆಯಲ್ಲಿ ಹಣದ ಕೊರತೆಯ ಎಂದೂ ನೋಡಲಿಲ್ಲ
ಬೇಡದ ದುರಭ್ಯಾಸಗಳ ನಾ ಎಂದೂ ಬೆಳೆಸಲಿಲ್ಲ
ತಿಳಿದಿದೆಯೇ ನಿಮಗೆ ಈ ಎಲ್ಲಾ ಸೋಲಿಗೆ ಕಾರಣ
ನಾನು ಕಟ್ಟಬೇಕು ಕೆಲಸಗಳಿಗೆ ಗೆಲುವಿನ ತೋರಣ
ಶಿಷ್ಯಾ, ಕೂತು ಕೆಲಸದ ಬಗ್ಗೆ ಯೋಚಿಸಿದರೆ ಫಲವಿಲ್ಲ
ಕಾರ್ಯಶೀಲನಾಗದೇ ನಿನ್ನ ಕೆಲಸದಲಿ ಗೆಲುವಿಲ್ಲ
ಬರೇ ಯೋಚಿಸುತ್ತಾ ಕುಳಿತರೆ ಆಗುವುದು ಮನ ಭಾರ
ಯೋಚಿಸದೆ ಕಾರ್ಯಶೀಲನಾದರೆ ಹೋಗುವೆ ನೀ ದೂರ
ಎಲ್ಲಾ ಕೆಲಸವ ಕಲಿತು ನಂತರವೇ ಪ್ರಾರಂಭಿಸಬೇಕಿಲ್ಲ
ಕೆಲಸವ ಆರಂಭಿಸು, ಮಾಡುತ್ತಾ ಕಲಿಯುವೆ ನೀ ಎಲ್ಲಾ
ಕೆಲಸದಲಿ ಇರಲಿ ಯೋಜನೆಗೆ ಕೇವಲ ಪ್ರತಿಶತ ಇಪ್ಪತ್ತು
ಕಾರ್ಯಶೀಲನಾಗಿ ಕೆಲಸ ಮಾಡಲು ಪ್ರತಿಶತ ಎಂಬತ್ತು
ಸಂಪೂರ್ಣ ಹೊಣೆ ಹೊತ್ತು ಶುರು ಮಾಡು ನೀ ಕೆಲಸವ
ನಿನ್ನೀ ಚುರುಕುತನ ನಿನ್ನರಿವಿಲ್ಲದೆ ಕ್ರಮಿಸುವುದು ದೂರವ
- ತೇಜಸ್ವಿ.ಎ.ಸಿ
Subscribe to:
Posts (Atom)