ನಮ್ಮ ಮನೆ
ಶಾಲೆಯಲ್ಲಿದ್ದಾಗ ನೆನೆಯುತ್ತಿದ್ದೆ ನಿನ್ನ ಪ್ರತಿ ಅವಧಿ
ಮನೆಯೇ, ನಿನ್ನಲ್ಲಿ ಅಲ್ಲವೇ ಸಿಗುವುದು ನನ್ನ ನೆಮ್ಮದಿ
ಶಾಲೆ ಘಂಟೆಯ ಸದ್ದಿಗೆ ಕಾದಿದ್ದೆವು ಬಕ ಪಕ್ಷಿಯಂತೆ
ಸಂಜೆಯಾದರೆ ಹಾರುತ್ತಿದ್ದೆವಲ್ಲ ಗೂಡಿಗೆ ಹಕ್ಕಿಯಂತೆ
ಆರಾಮದ ವಿಷಯದಲ್ಲಿ ಮನೆಗೆ ಉಂಟೆ ಸಾಟಿ?
ಮನೆಯಲಿರುವ ಸುಖಕ್ಕಾಗಿ ಎಲ್ಲರಿಗೂ ಬೇಕು ಸೂಟಿ
ಜನರು ದುಡಿದು ಕಟ್ಟಲು ಬಯಸುವ ಗೂಡು ನೀನು
ನಿನ್ನನು ನೆನೆದಾಗ ಸಿಗುವ ನೆಮ್ಮದಿಗೆ ಹೋಲಿಕೆ ಏನು?
ಹುಟ್ಟಿದಾಗಲೇ ಸ್ವಂತ ಮನೆಯೊಂದಿದ್ದರೆ ಅದೇ ಅದೃಷ್ಟ
ಆದರೂ, ಹೊಸ ಮನೆ ಕಟ್ಟುವ ಗುರಿಯೂ ಬಲು ಇಷ್ಟ
ಈಗೇನು, ಮನೆ ಕಟ್ಟಲು ಹಲವು ಬ್ಯಾಂಕುಗಳು ಕೊಡುತ್ತವೆ ಸಾಲ
ತೀರಿಸಲು ಉಪಯೋಗಿಸಿ ಕಂತುಗಳಲ್ಲಿ ನಿಮ್ಮ ಸಂಬಳದ ಬಲ
ಏನೇ ಹೇಳೀ ರಾಜಿ ಮಾಡಲಾಗದು ವಿಶಾಲ ಮನೆಯ ಅಗತ್ಯಕ್ಕೆ
ಬುದ್ದಿಯಿಂದ ಹಣ ಮಾಡಿ ಕಟ್ಟುವೆವು ಕನಸಿನ ಮನೆಯನ್ನು ಆಗಸಕ್ಕೆ
ಹಾಕಲಿ ಎಲ್ಲರೂ ಕಟ್ಟಿಸಲು ಮನೆಯ ನೀಲ ನಕ್ಷೆಯ ಯೋಜನೆ
ಎಲ್ಲರಿಗೂ ಸಿಗಲಿ ಸುಂದರ-ನೆಮ್ಮದಿಯ ತರುವ ಸ್ವಂತದ ಮನೆ
- ತೇಜಸ್ವಿ. ಎ. ಸಿ
ಹಾಯ್,ನಾನು ತೇಜಸ್ವಿ, ವೃತ್ತಿಯಲ್ಲಿ ಐ ಟಿ ಕ್ಷೇತ್ರದಲ್ಲಿ ಉದ್ಯೋಗಿ. ನನ್ನ ಆಸಕ್ತಿಯೆಲ್ಲ ಕವನ, ಸಾಹಿತ್ಯ, ಚಿತ್ರಕಲೆ, ಛಾಯಾಚಿತ್ರಗ್ರಹಣ. ಈ ನನ್ನ ಕಲೆಯ ಅಭಿರುಚಿಗಾಗಿ ನಾನು ಈ ತಾಣವನ್ನು ನಿರ್ಮಿಸಿದ್ದೇನೆ. ನಿಮ್ಮಲ್ಲರಿಗೂ ನನ್ನ ಪುಟ್ಟ ತಾಣಕ್ಕೆ ಸ್ವಾಗತ.
Saturday, March 27, 2010
Tuesday, March 16, 2010
ಸವಲತ್ತಿನ ಜೀವನ
ಸವಲತ್ತಿನ ಜೀವನ
ನಮ್ಮ ಕನಸಿಗೂ ಎಟುಕದ ಜೀವನವಿದು
ನನಸಿನಲ್ಲೇ ಸಿಕ್ಕಿದೆಯಲ್ಲ ನಿಜವೇ ಇದು
ಕನಸಿನಲ್ಲೂ ಈ ತರಹ ಕನಸು ಕಂಡಿರಲಿಲ್ಲ
ಮಹಾರಾಜನು ಇಂತಹ ಜೀವನ ಸವಿದಿರಲಿಲ್ಲ
ಸುಖದಿ ಓಡಾಡಲು ಆಡಂಬರ ವಾಹನಗಳ ಕಾಲ
ದೂರದಿ ಮಾತಾಡಲು ದೂರವಾಣಿಯ ಜಾಲ
ಸಾವಿರಾರು ಚಾನಲ್ ನ ದೂರದರ್ಶನದ ಗಾಳ
ಹೊಸ ವಿಧ್ಯುನ್ಮಾನ ಯಂತ್ರಗಳ ನಿತ್ಯದ ಮೇಳ
ಗಣಕ ಯಂತ್ರಗಳಲ್ಲಿ ಕೆಲಸ ಮಾಡುವ ಸವಲತ್ತು
ಬೇಕಾದಾಗ ಹಣ ಕೊಡುವ ಎಟಿಎಂಗಳ ದೌಲತ್ತು
ಆಹಾರ ಸುರಕ್ಷಿಸುವ ಶೀತಕ ಪೆಟ್ಟಿಗೆಗಳ ತಂಪು
ಬಗೆ ಬಗೆ ಅಡುಗೆಗೆ ವಿಧ್ಯುತ್ ಸಾಧನಗಳ ಇಂಪು
ಬರೆಯಲು ಕೂತರೆ ಬಾಲಂಗೋಚಿಯ ಪಟ್ಟಿಯಿದೆ
ಇವೆಲ್ಲದರಿಂದ ನಮ್ಮಗಳ ಜೀವನ ಬಲು ಗಟ್ಟಿಯಿದೆ
ಹಲವು ಯುಗದ ಜನಗಳು ಅನುಭವಿಸದ ಬಾಳ್ವೆಯಿದು
ನಿಶ್ಚಿಂತರಾಗಿರಲು ನಮಗೆ ದೈವವಿತ್ತ ಸೌಕರ್ಯವಿವು
ನೆನೆಯಿರಿ ಇಲ್ಲದ ಕುರಿತು ಕೊರಗುವ ಜನಗಳೇ
ಹಾಗೆಂದು ಸೋಮಾರಿಗಳಾಗಬೇಡಿ ಮನುಜರೆ
ಬಾಳಲು ಸಿಕ್ಕಿದೆ ಕೇಳದ ಸುಂದರ ಸುಖದ ಜೀವನ
ನೆನೆಯಿರಿ ಈ ಸುಖ ಸವಲತ್ತು ಕೊಟ್ಟ ಭಗವಂತನ
- ತೇಜಸ್ವಿ .ಎ.ಸಿ
ನಮ್ಮ ಕನಸಿಗೂ ಎಟುಕದ ಜೀವನವಿದು
ನನಸಿನಲ್ಲೇ ಸಿಕ್ಕಿದೆಯಲ್ಲ ನಿಜವೇ ಇದು
ಕನಸಿನಲ್ಲೂ ಈ ತರಹ ಕನಸು ಕಂಡಿರಲಿಲ್ಲ
ಮಹಾರಾಜನು ಇಂತಹ ಜೀವನ ಸವಿದಿರಲಿಲ್ಲ
ಸುಖದಿ ಓಡಾಡಲು ಆಡಂಬರ ವಾಹನಗಳ ಕಾಲ
ದೂರದಿ ಮಾತಾಡಲು ದೂರವಾಣಿಯ ಜಾಲ
ಸಾವಿರಾರು ಚಾನಲ್ ನ ದೂರದರ್ಶನದ ಗಾಳ
ಹೊಸ ವಿಧ್ಯುನ್ಮಾನ ಯಂತ್ರಗಳ ನಿತ್ಯದ ಮೇಳ
ಗಣಕ ಯಂತ್ರಗಳಲ್ಲಿ ಕೆಲಸ ಮಾಡುವ ಸವಲತ್ತು
ಬೇಕಾದಾಗ ಹಣ ಕೊಡುವ ಎಟಿಎಂಗಳ ದೌಲತ್ತು
ಆಹಾರ ಸುರಕ್ಷಿಸುವ ಶೀತಕ ಪೆಟ್ಟಿಗೆಗಳ ತಂಪು
ಬಗೆ ಬಗೆ ಅಡುಗೆಗೆ ವಿಧ್ಯುತ್ ಸಾಧನಗಳ ಇಂಪು
ಬರೆಯಲು ಕೂತರೆ ಬಾಲಂಗೋಚಿಯ ಪಟ್ಟಿಯಿದೆ
ಇವೆಲ್ಲದರಿಂದ ನಮ್ಮಗಳ ಜೀವನ ಬಲು ಗಟ್ಟಿಯಿದೆ
ಹಲವು ಯುಗದ ಜನಗಳು ಅನುಭವಿಸದ ಬಾಳ್ವೆಯಿದು
ನಿಶ್ಚಿಂತರಾಗಿರಲು ನಮಗೆ ದೈವವಿತ್ತ ಸೌಕರ್ಯವಿವು
ನೆನೆಯಿರಿ ಇಲ್ಲದ ಕುರಿತು ಕೊರಗುವ ಜನಗಳೇ
ಹಾಗೆಂದು ಸೋಮಾರಿಗಳಾಗಬೇಡಿ ಮನುಜರೆ
ಬಾಳಲು ಸಿಕ್ಕಿದೆ ಕೇಳದ ಸುಂದರ ಸುಖದ ಜೀವನ
ನೆನೆಯಿರಿ ಈ ಸುಖ ಸವಲತ್ತು ಕೊಟ್ಟ ಭಗವಂತನ
- ತೇಜಸ್ವಿ .ಎ.ಸಿ
Thursday, March 11, 2010
ತನ್ನನ್ನು ಮೊದಲು ಪ್ರೀತಿಸು
ತನ್ನನ್ನು ಮೊದಲು ಪ್ರೀತಿಸು
ನಿಲ್ಲು ವೇಗದಿ ಓಡುತ್ತಿರುವ ಗೆಳೆಯನೆ
ಮರೆತೆಯೇನು ಪ್ರೀತಿಸಲು ತನ್ನನೇ
ಜೀವನದ ದೋಣಿಯನು ಸಾಗಿಸುವ ಭರದಲಿ
ಮರೆತೆಯೇನು ಪ್ರೀತಿಸಲು ತನ್ನನೇ
ಬಾಲ್ಯದ ಹೊತ್ತಿಗೆಯ ಭಾರವನು ಇಳಿಸುವೆತ್ನದಲಿ
ಮರೆತೆಯೇನು ಪ್ರೀತಿಸಲು ತನ್ನನೇ
ಹರೆಯದ ಹುಚ್ಚು ಸ್ಪರ್ಧೆಯನು ಗೆಲ್ಲುವೆಡೆಯಲಿ
ಮರೆತೆಯೇನು ಪ್ರೀತಿಸಲು ತನ್ನನೇ
ಯೌವನದಿ ಪರರ ಪ್ರೇಮವ ಪಡೆಯುವ ತವಕದಲಿ
ಮರೆತೆಯೇನು ಪ್ರೀತಿಸಲು ತನ್ನನೇ
ತನ್ನ ಸಂಸಾರದ ಹೊರೆ ಹೊತ್ತು ದಡ ಮುಟ್ಟುವಲಿ
ಮರೆತೆಯೇನು ಪ್ರೀತಿಸಲು ತನ್ನನೇ
ಜೀವನಕೆ ಸಂಪಾದಿಸುವ ನೀ ಪಡುವ ಶ್ರಮದಲಿ
ಮರೆತೆಯೇನು ಪ್ರೀತಿಸಲು ತನ್ನನೇ
ಜೀವನದ ಪುಟವೊಮ್ಮೆ ತಿರುಗಿಸು, ಅಲಕ್ಷಿಸಿದ್ದೆಯ ತನ್ನನೇ
ನಿನ್ನೇ ಮನ ಬಿಚ್ಚಿ ಪ್ರೀತಿಸು, ಜೀವನೋತ್ಸಾಹವನ್ನು ಹೆಚ್ಚಿಸು
ಆದ್ಯತೆ ಕೊಡು ಬದುಕಿನ ಲಕ್ಷ್ಯಕ್ಕೆ, ಹೆಚ್ಚಿಸು ಜೀವನದ ದಕ್ಷತೆ
- ತೇಜಸ್ವಿ.ಎ.ಸಿ
ನಿಲ್ಲು ವೇಗದಿ ಓಡುತ್ತಿರುವ ಗೆಳೆಯನೆ
ಮರೆತೆಯೇನು ಪ್ರೀತಿಸಲು ತನ್ನನೇ
ಜೀವನದ ದೋಣಿಯನು ಸಾಗಿಸುವ ಭರದಲಿ
ಮರೆತೆಯೇನು ಪ್ರೀತಿಸಲು ತನ್ನನೇ
ಬಾಲ್ಯದ ಹೊತ್ತಿಗೆಯ ಭಾರವನು ಇಳಿಸುವೆತ್ನದಲಿ
ಮರೆತೆಯೇನು ಪ್ರೀತಿಸಲು ತನ್ನನೇ
ಹರೆಯದ ಹುಚ್ಚು ಸ್ಪರ್ಧೆಯನು ಗೆಲ್ಲುವೆಡೆಯಲಿ
ಮರೆತೆಯೇನು ಪ್ರೀತಿಸಲು ತನ್ನನೇ
ಯೌವನದಿ ಪರರ ಪ್ರೇಮವ ಪಡೆಯುವ ತವಕದಲಿ
ಮರೆತೆಯೇನು ಪ್ರೀತಿಸಲು ತನ್ನನೇ
ತನ್ನ ಸಂಸಾರದ ಹೊರೆ ಹೊತ್ತು ದಡ ಮುಟ್ಟುವಲಿ
ಮರೆತೆಯೇನು ಪ್ರೀತಿಸಲು ತನ್ನನೇ
ಜೀವನಕೆ ಸಂಪಾದಿಸುವ ನೀ ಪಡುವ ಶ್ರಮದಲಿ
ಮರೆತೆಯೇನು ಪ್ರೀತಿಸಲು ತನ್ನನೇ
ಜೀವನದ ಪುಟವೊಮ್ಮೆ ತಿರುಗಿಸು, ಅಲಕ್ಷಿಸಿದ್ದೆಯ ತನ್ನನೇ
ನಿನ್ನೇ ಮನ ಬಿಚ್ಚಿ ಪ್ರೀತಿಸು, ಜೀವನೋತ್ಸಾಹವನ್ನು ಹೆಚ್ಚಿಸು
ಆದ್ಯತೆ ಕೊಡು ಬದುಕಿನ ಲಕ್ಷ್ಯಕ್ಕೆ, ಹೆಚ್ಚಿಸು ಜೀವನದ ದಕ್ಷತೆ
- ತೇಜಸ್ವಿ.ಎ.ಸಿ
Wednesday, March 3, 2010
ಮಾನವ ಸಮಾನತೆ
ಮಾನವ ಸಮಾನತೆ
ಜೀವಿಸಲೊಂದು ಭೂಮಿ, ಒಂದೇ ಜೀವನ.
ಮಾಡಬಹುದಲ್ಲವೇ ಇದನ್ನು ನಂದನ ವನ
ದೇವರು ಸೃಷ್ಟಿಸಿ ಕೊಟ್ಟದ್ದು ಕೇವಲ ಎರಡು ಜಾತಿ
ನಮ್ಮ ಸೃಷ್ಟಿಯಲ್ಲವೇ ಧರ್ಮ, ಜಾತಿಗಳೆಂಬ ಭ್ರಾಂತಿ
ಜಾತಿ ಧರ್ಮ ಎಂದು ಮಾಡುತ್ತಿದ್ದಾರೆ ಅಮಾಯಕರ ತಿಥಿ
ವೈಯಕ್ತಿಕವಲ್ಲವೇ ಈ ನಂಬಿಕೆಗಳು, ಓ ಭೂಮಿ ಮೇಲಿನ ಅತಿಥಿ?
ಈ ಮನದೊಳಗಿನ ನಂಬಿಕೆಗೆ ಏಕೆ ಬೇಕು ಬಾಹ್ಯ ಕಟ್ಟಡ?
ಸೃಷ್ಟಿಸಲೇ ಸದಾ ಗುಮಾನಿ, ಧ್ವೇಷವೆಂಬ ಅಂತರ?
ಅಳಿಸಿ ನೋಡಿ ಜಾತಿ, ಧರ್ಮ, ಭಾಷೆ ಹಾಗು ಬಣ್ಣ,
ಈ ಎಲ್ಲಾ ಒಂದೇ ಆದ್ರೆ ಜಗವು ಎಷ್ಟು ಸುಂದರವಣ್ಣ.
ಎಲ್ಲಾ ತೊಡೆದು ಒಂದಾಗಲು ಮನದಲಿ ತುಂಬಲಿ ಪ್ರೀತಿಯ
ಎಲ್ಲಾ ವ್ಯತ್ಯಾಸ ಮೀರಿ, ಮಾನವತೆ ಮೆರೆಯಲಿ ಎಂದೆನ್ನ ಆಶಯ
- ತೇಜಸ್ವಿ .ಎ. ಸಿ
ಜೀವಿಸಲೊಂದು ಭೂಮಿ, ಒಂದೇ ಜೀವನ.
ಮಾಡಬಹುದಲ್ಲವೇ ಇದನ್ನು ನಂದನ ವನ
ದೇವರು ಸೃಷ್ಟಿಸಿ ಕೊಟ್ಟದ್ದು ಕೇವಲ ಎರಡು ಜಾತಿ
ನಮ್ಮ ಸೃಷ್ಟಿಯಲ್ಲವೇ ಧರ್ಮ, ಜಾತಿಗಳೆಂಬ ಭ್ರಾಂತಿ
ಜಾತಿ ಧರ್ಮ ಎಂದು ಮಾಡುತ್ತಿದ್ದಾರೆ ಅಮಾಯಕರ ತಿಥಿ
ವೈಯಕ್ತಿಕವಲ್ಲವೇ ಈ ನಂಬಿಕೆಗಳು, ಓ ಭೂಮಿ ಮೇಲಿನ ಅತಿಥಿ?
ಈ ಮನದೊಳಗಿನ ನಂಬಿಕೆಗೆ ಏಕೆ ಬೇಕು ಬಾಹ್ಯ ಕಟ್ಟಡ?
ಸೃಷ್ಟಿಸಲೇ ಸದಾ ಗುಮಾನಿ, ಧ್ವೇಷವೆಂಬ ಅಂತರ?
ಅಳಿಸಿ ನೋಡಿ ಜಾತಿ, ಧರ್ಮ, ಭಾಷೆ ಹಾಗು ಬಣ್ಣ,
ಈ ಎಲ್ಲಾ ಒಂದೇ ಆದ್ರೆ ಜಗವು ಎಷ್ಟು ಸುಂದರವಣ್ಣ.
ಎಲ್ಲಾ ತೊಡೆದು ಒಂದಾಗಲು ಮನದಲಿ ತುಂಬಲಿ ಪ್ರೀತಿಯ
ಎಲ್ಲಾ ವ್ಯತ್ಯಾಸ ಮೀರಿ, ಮಾನವತೆ ಮೆರೆಯಲಿ ಎಂದೆನ್ನ ಆಶಯ
- ತೇಜಸ್ವಿ .ಎ. ಸಿ
Monday, February 22, 2010
ಸ್ವಾವಲಂಬನೆಯತ್ತ ಹೆಜ್ಜೆ
ಸ್ವಾವಲಂಬನೆಯತ್ತ ಹೆಜ್ಜೆ
ಸ್ನೇಹಿತನಿಗೊಂದು ದಿನ ಬಂದಿತ್ತು ಈ-ಪತ್ರ
ಗೆದ್ದಿದ್ದನಾತ ಲಾಟರಿ ಹತ್ತು ಕೋಟಿಯಷ್ಟು ಎತ್ತರ
ಗೊತ್ತಿತ್ತು ಎಲ್ಲರಿಗೂ ಈ ಲಾಟರಿ ಮೋಸದ ಬಲೆ ಎಂದು
ನಾ ಕೇಳಿದೆ, ನಿಜವಾಗಲೂ ಸಿಕ್ಕರೆ ಏನು ಮಾಡುವೆ ಎಂದು?
ಹೇಳಿದ ಆತ ಎಲ್ಲರಿಗೂ ನಿರೀಕ್ಷಿತ ಉತ್ತರವನ್ನು
ಬಿಡುವೆ ಈ ವೃತ್ತಿಯನ್ನು, ಘೋಷಿಸಿ ನಿವೃತ್ತಿಯನ್ನು
ಅಬ್ಬಾ!! ಕಂಡೆ ನಾ ಜನಗಳ ಬಹು ಮುಖ್ಯ ಗುರಿಯನ್ನು
ಆದಷ್ಟು ಬೇಗ ಜೀವನದಲ್ಲಿ ನೆಲೆಯೂರುವ ತುಡಿತವನ್ನು
ಗುರಿ ಗೊತ್ತಾಗಿಯೂ ನಾವ್ ಮಾಡುತ್ತಿರುವ ಕೆಲಸವೇನು?
ಉಧ್ಯೋಗ ಹಿಡಿದು ಬರುವ ಸಂಬಳಕ್ಕೆ ಕಾಯುವುದೇ ಏನು?
ನೋಡಿದೆ ನನ್ನ ಜೀವಮಾನದ ಒಟ್ಟು ಆದಾಯವನ್ನು ಗುಣಿಸಿ
ಸಿಗುವುದಿಷ್ಟೇನಾ ಜೀವನವೆಲ್ಲಾ ದುಡಿದರೂ ದೇಹವನ್ನು ಧಣಿಸಿ?
ಕಾಯುತ್ತ ಕೂತವರು ಗಳಿಸಿದ್ದಾರೆಯೇ ಗುರಿಯಲ್ಲಿ ಯಶಸ್ಸು?
ಸಾಧ್ಯವಾಗುವುದು ಗುರಿ, ಮಾಡಿದರೆ ಸ್ವಂತ ಪ್ರಯತ್ನದ ಮನಸ್ಸು
ಗುರಿ ಮುಟ್ಟುವ ತವಕದಲಿ ಹಾಕಲಿ ಜನಗಳು ಶ್ರಮ
ಮುನ್ನುಗ್ಗಿ ಶ್ರಮಿಸುವುದೇ, ಕಾಯುವುದಕ್ಕಿಂತ ಉತ್ತಮ.
ಗುರಿಯಲ್ಲಿ ಸಾಧಿಸಲಿ ಯಶಸ್ಸು ನಮ್ಮ ಪ್ರೀತಿಯ ಜನ
ಆಗಲೇ ನೆಲೆಯೂರಲು ಆಗುವುದು ನಮ್ಮೆಲ್ಲರ ಜೀವನ.
- ತೇಜಸ್ವಿ. ಎ. ಸಿ
ಸ್ನೇಹಿತನಿಗೊಂದು ದಿನ ಬಂದಿತ್ತು ಈ-ಪತ್ರ
ಗೆದ್ದಿದ್ದನಾತ ಲಾಟರಿ ಹತ್ತು ಕೋಟಿಯಷ್ಟು ಎತ್ತರ
ಗೊತ್ತಿತ್ತು ಎಲ್ಲರಿಗೂ ಈ ಲಾಟರಿ ಮೋಸದ ಬಲೆ ಎಂದು
ನಾ ಕೇಳಿದೆ, ನಿಜವಾಗಲೂ ಸಿಕ್ಕರೆ ಏನು ಮಾಡುವೆ ಎಂದು?
ಹೇಳಿದ ಆತ ಎಲ್ಲರಿಗೂ ನಿರೀಕ್ಷಿತ ಉತ್ತರವನ್ನು
ಬಿಡುವೆ ಈ ವೃತ್ತಿಯನ್ನು, ಘೋಷಿಸಿ ನಿವೃತ್ತಿಯನ್ನು
ಅಬ್ಬಾ!! ಕಂಡೆ ನಾ ಜನಗಳ ಬಹು ಮುಖ್ಯ ಗುರಿಯನ್ನು
ಆದಷ್ಟು ಬೇಗ ಜೀವನದಲ್ಲಿ ನೆಲೆಯೂರುವ ತುಡಿತವನ್ನು
ಗುರಿ ಗೊತ್ತಾಗಿಯೂ ನಾವ್ ಮಾಡುತ್ತಿರುವ ಕೆಲಸವೇನು?
ಉಧ್ಯೋಗ ಹಿಡಿದು ಬರುವ ಸಂಬಳಕ್ಕೆ ಕಾಯುವುದೇ ಏನು?
ನೋಡಿದೆ ನನ್ನ ಜೀವಮಾನದ ಒಟ್ಟು ಆದಾಯವನ್ನು ಗುಣಿಸಿ
ಸಿಗುವುದಿಷ್ಟೇನಾ ಜೀವನವೆಲ್ಲಾ ದುಡಿದರೂ ದೇಹವನ್ನು ಧಣಿಸಿ?
ಕಾಯುತ್ತ ಕೂತವರು ಗಳಿಸಿದ್ದಾರೆಯೇ ಗುರಿಯಲ್ಲಿ ಯಶಸ್ಸು?
ಸಾಧ್ಯವಾಗುವುದು ಗುರಿ, ಮಾಡಿದರೆ ಸ್ವಂತ ಪ್ರಯತ್ನದ ಮನಸ್ಸು
ಗುರಿ ಮುಟ್ಟುವ ತವಕದಲಿ ಹಾಕಲಿ ಜನಗಳು ಶ್ರಮ
ಮುನ್ನುಗ್ಗಿ ಶ್ರಮಿಸುವುದೇ, ಕಾಯುವುದಕ್ಕಿಂತ ಉತ್ತಮ.
ಗುರಿಯಲ್ಲಿ ಸಾಧಿಸಲಿ ಯಶಸ್ಸು ನಮ್ಮ ಪ್ರೀತಿಯ ಜನ
ಆಗಲೇ ನೆಲೆಯೂರಲು ಆಗುವುದು ನಮ್ಮೆಲ್ಲರ ಜೀವನ.
- ತೇಜಸ್ವಿ. ಎ. ಸಿ
Tuesday, February 9, 2010
ವಾಸ್ತವವ ಅರಿ ಮನವೆ
ವಾಸ್ತವವ ಅರಿ ಮನವೆ
ವಾಸ್ತವಿಕತೆಯ ಅರಿ ಮನವೇ ನಿಜ ವಾಸ್ತವವ
ಭೌತಿಕ ಜಗದಲಿರುವ ಸರಳ ಹಸಿ ಸತ್ಯವ
ಪ್ರತಿ ನಿತ್ಯ ಆಡುವೆ ಮಾತು ದಿನಕ್ ಹತ್ತು ಲಕ್ಷ
ನಿಜವಾಗುವುದೇ ಅದರಲ್ಲಿ ನೂರು ಕಡೇ ಪಕ್ಷ?
ಸೃಷ್ಟಿಸುವೆ ನಿತ್ಯ ನೀ ನೂರು ಹೊಸ ಲೋಕವ
ನೂರು ಲೋಕದಲಿ ನೀಡುವೆ ವಿಭಿನ್ನ ಅನುಭವ
ಭವಿಷ್ಯದ ಬಗ್ಗೆ ಸೃಷ್ಟಿಸುವೆ ಅನಗತ್ಯ ಆತಂಕವ
ಕೋಟಿ ಯೋಚನೆಗಳಲಿ ಆಗುವುದೆಷ್ಟು ವಾಸ್ತವ?
ಲಕ್ಷ ಮಾತುಗಳು ಸೃಷ್ಟಿಸುವವು ಬರೀ ಹಗಲು ಗನಸು
ಆದರೆ ನಾಲ್ಕೇ ಮಾತು ಮಾಡುವವು ಕನಸನ್ನು ನನಸು
ಅನಗತ್ಯ ಸುದ್ದಿಯಲಿ ಮುಳುಗಿ ಮಾಡುವೆ ಬೇಡದ ವ್ಯಥೆ
ನಿನ್ನ ಜೀವನಕ್ಕೆ ಪರಿಣಮಿಸದ ವಿಷಯಕ್ಕೆ ನಿನಗೇಕೆ ಚಿಂತೆ?
ಅರಿ ನಿಜವ, ತೊರಿ ಭ್ರಮೆಯ, ಗಳಿಸು ನೆಮ್ಮದಿಯ
ನಡೆಸು ಜೀವನವ, ಅರಸಿ ಭೌತಿಕ ವಾಸ್ತವಿಕತೆಯ
- ತೇಜಸ್ವಿ .ಎ.ಸಿ
ವಾಸ್ತವಿಕತೆಯ ಅರಿ ಮನವೇ ನಿಜ ವಾಸ್ತವವ
ಭೌತಿಕ ಜಗದಲಿರುವ ಸರಳ ಹಸಿ ಸತ್ಯವ
ಪ್ರತಿ ನಿತ್ಯ ಆಡುವೆ ಮಾತು ದಿನಕ್ ಹತ್ತು ಲಕ್ಷ
ನಿಜವಾಗುವುದೇ ಅದರಲ್ಲಿ ನೂರು ಕಡೇ ಪಕ್ಷ?
ಸೃಷ್ಟಿಸುವೆ ನಿತ್ಯ ನೀ ನೂರು ಹೊಸ ಲೋಕವ
ನೂರು ಲೋಕದಲಿ ನೀಡುವೆ ವಿಭಿನ್ನ ಅನುಭವ
ಭವಿಷ್ಯದ ಬಗ್ಗೆ ಸೃಷ್ಟಿಸುವೆ ಅನಗತ್ಯ ಆತಂಕವ
ಕೋಟಿ ಯೋಚನೆಗಳಲಿ ಆಗುವುದೆಷ್ಟು ವಾಸ್ತವ?
ಲಕ್ಷ ಮಾತುಗಳು ಸೃಷ್ಟಿಸುವವು ಬರೀ ಹಗಲು ಗನಸು
ಆದರೆ ನಾಲ್ಕೇ ಮಾತು ಮಾಡುವವು ಕನಸನ್ನು ನನಸು
ಅನಗತ್ಯ ಸುದ್ದಿಯಲಿ ಮುಳುಗಿ ಮಾಡುವೆ ಬೇಡದ ವ್ಯಥೆ
ನಿನ್ನ ಜೀವನಕ್ಕೆ ಪರಿಣಮಿಸದ ವಿಷಯಕ್ಕೆ ನಿನಗೇಕೆ ಚಿಂತೆ?
ಅರಿ ನಿಜವ, ತೊರಿ ಭ್ರಮೆಯ, ಗಳಿಸು ನೆಮ್ಮದಿಯ
ನಡೆಸು ಜೀವನವ, ಅರಸಿ ಭೌತಿಕ ವಾಸ್ತವಿಕತೆಯ
- ತೇಜಸ್ವಿ .ಎ.ಸಿ
Monday, February 1, 2010
ನನ್ನ ವಿದೇಶ ಪ್ರವಾಸ
ನನ್ನ ವಿದೇಶ ಪ್ರವಾಸ
ದೊರಕ್ಕಿತ್ತು ಒಂದು ಅವಕಾಶವು ನನಗೆ
ಹಾರಿ ಹೋಗಲು ಹೊರದೇಶಕ್ಕೆ ಕೊನೆಗೆ
ತಿಳಿಸಿದೆ ಎಲ್ಲರಿಗೂ ನಾ ಹೋಗುವೆ ಹಾರಿ
ನಡೆಸಿದೆ ಹೊರಡಲು ಭರ್ಜರಿ ತಯಾರಿ
ಸಿದ್ದವಾಯಿತು ನನ್ನ ವೀಸ ಪಾಸ್ ಪೋರ್ಟು
ಆಗಸಕ್ಕೆ ಹಾರಿದೆ ನಾ ಬಿಟ್ಟು ಏರ್ ಪೋರ್ಟು
ಕಂಡು ನಾ ಬೆರಗಾದೆ ಯೂರೋಪಿನ ಸೌಂದರ್ಯ
ಇಡೀ ಭೂಮಿ ಹೊದ್ದಿತ್ತು ಹಸಿರು ರತ್ನ ಗಂಬಳಿಯ
ಇತಿ ಮಿತಿ ಜನಸಂಖ್ಯೆಯ ಆ ಪುಟ್ಟ ದೇಶ
ಸುಖ ಸವಲತ್ತು ಹೊಂದಿದ ಶ್ರೀಮಂತ ದೇಶ
ವಿಶ್ವ ಮಾತಾಡುವ ಆಂಗ್ಲ ಅವರ ಮಾತೃ ಭಾಷೆ
ಶಾಲೆ ಕಲಿಸುವ ಮಾಧ್ಯಮ ಅವರ ಆಡು ಭಾಷೆ
ಜನ ಹಂಬಲಿಸಿ ಹುಡುಕುವ ಬಿಳಿ ಚರ್ಮ ಅವರದ್ದು
ಜನ ಬಯಸುವ ಶುಭ್ರ ಹವೆ, ಹಸಿರು ನೆಲ ಅವರದ್ದು
ಜನ ಆಶಿಸುವ ನೀಳ, ಧೃಡ ಕಾಯ ಅವರದ್ದು
ನೀಲ ಕಂಗಳ, ಲಕ್ಷಣ ಮುಖಚರ್ಯೆ ಅವರದ್ದು
ವಿಶ್ವವನ್ನು ಸುಲಭವಾಗಿ ಸುತ್ತಬಲ್ಲ ಆರ್ಥಿಕತೆ ಅವರದ್ದು
ಸುಖವಾಗಿ ಸುತ್ತಾಡಲು ಬಯಸುವ ಕಾರು ಅವರೆಲ್ಲರದ್ದು
ವಿಶ್ವದೆಲ್ಲೆಡೆ ಸಿಗುತ್ತದೆ ಅವರಿಗೆ ಗೌರವ, ಮಾನ್ಯತೆ
ನೆನೆದೇ ನಾನು ನಮ್ಮಗಳ ಜೀವನದ ಸಾಮಾನ್ಯತೆ
ಮೂರು ಶತಮಾನ ಆಳಿ ಹೊತ್ತು ಹೋದರು ನಮ್ಮ ಸಂಪತ್ತು
ಮೂರೇ ತಿಂಗಳಲ್ಲಿ ಅವರ ಕೆಲಸಗಳಿಗೆ ನಾವು ಕೊಟ್ಟೆವು ಆಪತ್ತು
ಏನಾದರು ಆಗಲಿ ಸುಂದರವಾಗಿತ್ತು ನನ್ನ ಅನುಭವ
ಇಂಥಹ ಪ್ರವಾಸ ತೀರಿಸಿವುದು ದೇಶದ ಹಣದ ಅಭಾವ
- ತೇಜಸ್ವಿ.ಎ.ಸಿ
ದೊರಕ್ಕಿತ್ತು ಒಂದು ಅವಕಾಶವು ನನಗೆ
ಹಾರಿ ಹೋಗಲು ಹೊರದೇಶಕ್ಕೆ ಕೊನೆಗೆ
ತಿಳಿಸಿದೆ ಎಲ್ಲರಿಗೂ ನಾ ಹೋಗುವೆ ಹಾರಿ
ನಡೆಸಿದೆ ಹೊರಡಲು ಭರ್ಜರಿ ತಯಾರಿ
ಸಿದ್ದವಾಯಿತು ನನ್ನ ವೀಸ ಪಾಸ್ ಪೋರ್ಟು
ಆಗಸಕ್ಕೆ ಹಾರಿದೆ ನಾ ಬಿಟ್ಟು ಏರ್ ಪೋರ್ಟು
ಕಂಡು ನಾ ಬೆರಗಾದೆ ಯೂರೋಪಿನ ಸೌಂದರ್ಯ
ಇಡೀ ಭೂಮಿ ಹೊದ್ದಿತ್ತು ಹಸಿರು ರತ್ನ ಗಂಬಳಿಯ
ಇತಿ ಮಿತಿ ಜನಸಂಖ್ಯೆಯ ಆ ಪುಟ್ಟ ದೇಶ
ಸುಖ ಸವಲತ್ತು ಹೊಂದಿದ ಶ್ರೀಮಂತ ದೇಶ
ವಿಶ್ವ ಮಾತಾಡುವ ಆಂಗ್ಲ ಅವರ ಮಾತೃ ಭಾಷೆ
ಶಾಲೆ ಕಲಿಸುವ ಮಾಧ್ಯಮ ಅವರ ಆಡು ಭಾಷೆ
ಜನ ಹಂಬಲಿಸಿ ಹುಡುಕುವ ಬಿಳಿ ಚರ್ಮ ಅವರದ್ದು
ಜನ ಬಯಸುವ ಶುಭ್ರ ಹವೆ, ಹಸಿರು ನೆಲ ಅವರದ್ದು
ಜನ ಆಶಿಸುವ ನೀಳ, ಧೃಡ ಕಾಯ ಅವರದ್ದು
ನೀಲ ಕಂಗಳ, ಲಕ್ಷಣ ಮುಖಚರ್ಯೆ ಅವರದ್ದು
ವಿಶ್ವವನ್ನು ಸುಲಭವಾಗಿ ಸುತ್ತಬಲ್ಲ ಆರ್ಥಿಕತೆ ಅವರದ್ದು
ಸುಖವಾಗಿ ಸುತ್ತಾಡಲು ಬಯಸುವ ಕಾರು ಅವರೆಲ್ಲರದ್ದು
ವಿಶ್ವದೆಲ್ಲೆಡೆ ಸಿಗುತ್ತದೆ ಅವರಿಗೆ ಗೌರವ, ಮಾನ್ಯತೆ
ನೆನೆದೇ ನಾನು ನಮ್ಮಗಳ ಜೀವನದ ಸಾಮಾನ್ಯತೆ
ಮೂರು ಶತಮಾನ ಆಳಿ ಹೊತ್ತು ಹೋದರು ನಮ್ಮ ಸಂಪತ್ತು
ಮೂರೇ ತಿಂಗಳಲ್ಲಿ ಅವರ ಕೆಲಸಗಳಿಗೆ ನಾವು ಕೊಟ್ಟೆವು ಆಪತ್ತು
ಏನಾದರು ಆಗಲಿ ಸುಂದರವಾಗಿತ್ತು ನನ್ನ ಅನುಭವ
ಇಂಥಹ ಪ್ರವಾಸ ತೀರಿಸಿವುದು ದೇಶದ ಹಣದ ಅಭಾವ
- ತೇಜಸ್ವಿ.ಎ.ಸಿ
Subscribe to:
Posts (Atom)