ಮರಳಿ ಬಾ ವರ್ಷಧಾರೆ
ನೋಡಲು ನಾ ನಿಂತಿದ್ದೆ ಬೀಳುವ ವರ್ಷಧಾರೆಯ
ಆಗಸದಿಂದ ಸುರಿಯುತ್ತಿದ್ದ ಬಿಳಿಯ ಶುಭ್ರ ಹನಿಯ
ಸುತ್ತಲು ಕಣ್ಣಾಡಿಸದಲ್ಲೆಲ್ಲಾ ಕಾಣುತ್ತಿತ್ತು ಜಲಧಾರೆ
ಸುರಿಯುತ ಮಜ್ಜನ ಮಾಡಿಸಿ ಶುಭ್ರಗೊಂಡಿತು ಧರೆ
ಅಲ್ಲಲ್ಲಿ ಸಣ್ಣದಾಗಿ ಹರಿಯಲಾರಂಭಿಸಿತು ಝರಿಗಳು
ಝರಿಗಳಲ್ಲಿ ದೋಣಿ ಬಿಡಲು ಕಾಯುತ್ತಿದ್ದರು ಮಕ್ಕಳು
ಮಳೆಗಾಳಿಗೆ ಬಾಗಿ ಕರೆಯುತ್ತಿದ್ದವು ಮರದ ರೆಂಬೆಗಳು
ಅದು ಕೊಡುವ ಆಶ್ರಯಕೆ ಓಡುತ್ತಿದ್ದವು ಹಸು-ಕರುಗಳು
ಆಕಾಶದೆಡೆಗೆ ನೋಡಿದೆ ಕಪ್ಪು ಕಾರ್ಮೋಡದ ಛಾಯೆ
ತಾ ಸರಿಯುವುದ ಸೂಚಿಸಿತು ಮುಗಿಸುತ ತನ್ನ ಮಾಯೆ
ನಿಧಾನವಾಗಿ ನಿಲ್ಲಲಾರಂಭಿಸಿತು ಸುಂದರ ವರ್ಷಧಾರೆ
ತನ್ನ ವೈಭವಕೆ ನಿಧಾನವಾಗಿ ಎಳೆಯತೊಡಗಿತು ತೆರೆ
ಮಳೆಯು ನಿಂತಾಗ ಕಾಣುತಿತ್ತು ಶುಭ್ರ ವಾತಾವರಣ
ತನ್ನೆಲ್ಲಾ ಆರ್ಭಟವ ಮುಗಿಸಿ ಶಾಂತವಾಗಿದ್ದ ವರುಣ
ಗಿಡ ಮರಗಳ ಎಲೆಗಳೆಲ್ಲ ತೊಯ್ದಾಗಿತ್ತು ಹಚ್ಚ ಹಸಿರು
ಎಲ್ಲಾ ಜೀವಿಗಳಿಗೆ ಸಿಕ್ಕಿತ್ತು ಆಡಲು ಉಲ್ಲಾಸದ ಉಸಿರು
ನೀ ಬಂದು ಜೀವಗಳಿಗೆ ಹೊಸ ಜೀವವ ಇತ್ತೆ ವರ್ಷಧಾರೆ
ಹೊರಟೆ ಎನಬೇಡ ಹಾಗೆ ನಮ್ಮ ಭೇಟಿಗಾಗಿ ಮರಳಿ ಬಾರೆ
- ತೇಜಸ್ವಿ.ಎ.ಸಿ
ಹಾಯ್,ನಾನು ತೇಜಸ್ವಿ, ವೃತ್ತಿಯಲ್ಲಿ ಐ ಟಿ ಕ್ಷೇತ್ರದಲ್ಲಿ ಉದ್ಯೋಗಿ. ನನ್ನ ಆಸಕ್ತಿಯೆಲ್ಲ ಕವನ, ಸಾಹಿತ್ಯ, ಚಿತ್ರಕಲೆ, ಛಾಯಾಚಿತ್ರಗ್ರಹಣ. ಈ ನನ್ನ ಕಲೆಯ ಅಭಿರುಚಿಗಾಗಿ ನಾನು ಈ ತಾಣವನ್ನು ನಿರ್ಮಿಸಿದ್ದೇನೆ. ನಿಮ್ಮಲ್ಲರಿಗೂ ನನ್ನ ಪುಟ್ಟ ತಾಣಕ್ಕೆ ಸ್ವಾಗತ.
Saturday, September 25, 2010
Sunday, September 19, 2010
ಸುಮ್ಮನಿರಬಾರದೇ ನೀನೊಮ್ಮೆ
ಸುಮ್ಮನಿರಬಾರದೇ ನೀನೊಮ್ಮೆ
ಸುಮ್ಮನಿರು ಎಂದು ಹೇಳಿದರೂ ಕೇಳದು ಮನ,
ವಟ-ವಟನೆ ಸದಾ ಮಾತಾಡುವ ಚಂಚಲ ಮನ
ನಿನ್ನ ಈ ಸ್ವಭಾವದಿಂದ ಬೇಸರಸಿದ್ದಾರೆ ಜನ
ಇರದ ವಿಷಯಗಳಿಗೆಲ್ಲ ತಲೆ ಕೆಡಿಸಿಕೊಂಡು,
ನಡೆಯದ ಘಟನೆಗಳ ತನ್ನ ಕಲ್ಪನೆಯಲಿ ಕಟ್ಟಿ
ಕಲ್ಪನೆಯಲ್ಲೇ ಪ್ರಪಂಚ ಕಾಣುವ ಮೊದ್ದು ಮನ
ತನ್ನ ಪಂಚೇಂದ್ರಿಯಗಳ ಮೂಲಕ ನೇರವಾದ
ವಾಸ್ತವವ ಗ್ರಹಿಸದೆ, ಕೂತಲ್ಲೇ ಎಲ್ಲಾ ಕಲ್ಪಿಸಿ
ಸರಳ ವಾಸ್ತವದಿಂದ ದೂರವಿರುವ ಪೆದ್ದು ಮನ
ಬೇಡದ ಸಂದರ್ಭದಲ್ಲೂ ಮಾತನಾಡುವ, ಸ್ವಲ್ಪ
ಸುಮ್ಮನಿರದೇ ಕಿರಿಕಿರಿ ಮಾಡುವ ತುಂಟ ಮನ,
ಈ ತುಂಟನಿಗೊಂದು ಕೊಡಬಾರದೇ ರಜಾ ದಿನ
ನನಗೆ ಗೊತ್ತು ನಿನ್ನದು ಎಂದೂ ಬತ್ತದ ಉತ್ಸಾಹ
ನಾ ಅರ್ಥೈಸಿರುವೆ ನೀ ಚೈತನ್ಯದ ಚಿಲುಮೆ ಎಂದು
ಆದರೂ ಕೆಲವು ಸಂದರ್ಭದಲಿ ತೆಗೆದುಕೋ ಬಿಡುವು
ಮಲಗಿ ನೆಮ್ಮದಿಯಾಗಿ ನಿದ್ದೆ ಮಾಡಲು ಒರಗಿದರು
ನಿನ್ನ ಮಾತಾಡುವ ಬಾಯನು ನಿಲ್ಲಿಸ ಯತ್ನಿಸಿದರು
ನಿದ್ದೆಯಲಿ ಕನಸಾಗಿ ಬಂದು ತೊಂದರೆಯ ಕೊಡುವೆ
ನನಗೆ ಗೊತ್ತು ಸುಟ್ಟರೂ ಬಿಡದು ಈ ನಿನ್ನ ಬುದ್ದಿ
ನಾನೂ ನಿನ್ನ ಕೇಳಿ ಸಮಯ ವ್ಯರ್ಥ ಮಾಡುತ್ತಿರುವೆ
ಏಕೆ ಹೇಳು? ಏಕೆಂದರೆ ಹೇಳುತ್ತಿರುವವನು ನೀನೆನೇ.
- ತೇಜಸ್ವಿ.ಎ.ಸಿ
ಸುಮ್ಮನಿರು ಎಂದು ಹೇಳಿದರೂ ಕೇಳದು ಮನ,
ವಟ-ವಟನೆ ಸದಾ ಮಾತಾಡುವ ಚಂಚಲ ಮನ
ನಿನ್ನ ಈ ಸ್ವಭಾವದಿಂದ ಬೇಸರಸಿದ್ದಾರೆ ಜನ
ಇರದ ವಿಷಯಗಳಿಗೆಲ್ಲ ತಲೆ ಕೆಡಿಸಿಕೊಂಡು,
ನಡೆಯದ ಘಟನೆಗಳ ತನ್ನ ಕಲ್ಪನೆಯಲಿ ಕಟ್ಟಿ
ಕಲ್ಪನೆಯಲ್ಲೇ ಪ್ರಪಂಚ ಕಾಣುವ ಮೊದ್ದು ಮನ
ತನ್ನ ಪಂಚೇಂದ್ರಿಯಗಳ ಮೂಲಕ ನೇರವಾದ
ವಾಸ್ತವವ ಗ್ರಹಿಸದೆ, ಕೂತಲ್ಲೇ ಎಲ್ಲಾ ಕಲ್ಪಿಸಿ
ಸರಳ ವಾಸ್ತವದಿಂದ ದೂರವಿರುವ ಪೆದ್ದು ಮನ
ಬೇಡದ ಸಂದರ್ಭದಲ್ಲೂ ಮಾತನಾಡುವ, ಸ್ವಲ್ಪ
ಸುಮ್ಮನಿರದೇ ಕಿರಿಕಿರಿ ಮಾಡುವ ತುಂಟ ಮನ,
ಈ ತುಂಟನಿಗೊಂದು ಕೊಡಬಾರದೇ ರಜಾ ದಿನ
ನನಗೆ ಗೊತ್ತು ನಿನ್ನದು ಎಂದೂ ಬತ್ತದ ಉತ್ಸಾಹ
ನಾ ಅರ್ಥೈಸಿರುವೆ ನೀ ಚೈತನ್ಯದ ಚಿಲುಮೆ ಎಂದು
ಆದರೂ ಕೆಲವು ಸಂದರ್ಭದಲಿ ತೆಗೆದುಕೋ ಬಿಡುವು
ಮಲಗಿ ನೆಮ್ಮದಿಯಾಗಿ ನಿದ್ದೆ ಮಾಡಲು ಒರಗಿದರು
ನಿನ್ನ ಮಾತಾಡುವ ಬಾಯನು ನಿಲ್ಲಿಸ ಯತ್ನಿಸಿದರು
ನಿದ್ದೆಯಲಿ ಕನಸಾಗಿ ಬಂದು ತೊಂದರೆಯ ಕೊಡುವೆ
ನನಗೆ ಗೊತ್ತು ಸುಟ್ಟರೂ ಬಿಡದು ಈ ನಿನ್ನ ಬುದ್ದಿ
ನಾನೂ ನಿನ್ನ ಕೇಳಿ ಸಮಯ ವ್ಯರ್ಥ ಮಾಡುತ್ತಿರುವೆ
ಏಕೆ ಹೇಳು? ಏಕೆಂದರೆ ಹೇಳುತ್ತಿರುವವನು ನೀನೆನೇ.
- ತೇಜಸ್ವಿ.ಎ.ಸಿ
Wednesday, September 8, 2010
ನನಗೊಮ್ಮೆ ಅವಕಾಶ ಕೊಡು
ನನಗೊಮ್ಮೆ ಅವಕಾಶ ಕೊಡು
ನಾ ತಿದ್ದಬೇಕು ನನ್ನ ಹಿಂದಿನ ಜೀವನವನು
ನನ್ನ ಎಳೆಯ ಬುದ್ದಿ ಚಿಗುರಿ ದೊಡ್ಡದಾಗಿದೆ
ನಾ ತಿಳಿಯದೆ ಸೋತ ಕಾರಣ ಗೊತ್ತಾಗಿದೆ
ನನಗಿಂದು ಜೀವನವ ಸರಿ ಪಡಿಸಬೇಕಾಗಿದೆ
ನಾ ಹೋಗಬೇಕು ನನ್ನ ಭೂತಕಾಲಕೆ, ನನಗೆ
ಮತ್ತೆ ಅವಕಾಶ ಬೇಕು ಜೀವನವ ಸರಿಪಡಿಸಲು
ನಾ ಮತ್ತೊಮ್ಮೆ ಚಿಕ್ಕವನಾಗಿ ನನ್ನ ಜೀವನದ
ನ್ಯೂನ್ಯತೆಯ ಸರಿ ಪಡಿಸಿಕೊಂಡು ಬೆಳೆಯುವೆ
ಕಾಲ ಮೀರಿದೆ ಎಂದು ಗೊತ್ತು, ಕಾಲದೊಡನೆ
ವಯಸ್ಸು, ಅವಕಾಶ ಎಲ್ಲಾ ಮೀರಿದೆ ಎಂಬುದು
ಗೊತ್ತು, ಆದರೂ ನನಗೆ ಬೇಕು ನನ್ನ ಬಾಲ್ಯಕೆ
ಮರಳುವ ಅವಕಾಶ, ಸರಿ ಪಡಿಸುವೆ ಜೀವನವ
ನನ್ನ ಈಗಿರುವ ಅಭ್ಯಾಸವ ಅಲ್ಲಿಗೆ ಒಯ್ಯುವೆ
ನನಗೀಗಿರುವ ತಿಳುವಳಿಕೆಯನು ನನ್ನ ಬಾಲ್ಯಕೆ
ಹೊತ್ತೊಯ್ಯುವೆ, ಬಾಗಿಲು ತಗಿ ಭೂತಕಾಲವೆ
ನಾ ಬೇಡಿ ಬಂದಿರುವೆ, ನನಗೆ ನೀಡು ಅವಕಾಶವ
ನಾ ಭೂತಕಾಲಕ್ಕೆ ಮರಳಿ ಪ್ರಭುದ್ಧತೆಯ ಬಳಸಿ
ಮಾಡುವೆನು ಇಂದನು ಸುಂದರವಾಗಿ, ಸಂರಕ್ಷಿಸಿ
ನನ್ನೆಲ್ಲಾ ಆಸೆಗಳಿಗೆ ವಾಸ್ತವದ ರೆಕ್ಕೆ ನೀಡುವೆನು
ನನಗೊಮ್ಮೆ ಮರಳಿಸು ನನ್ನ ಹಿಂದಿನ ದಿನಗಳನು
- ತೇಜಸ್ವಿ.ಎ.ಸಿ
ನಾ ತಿದ್ದಬೇಕು ನನ್ನ ಹಿಂದಿನ ಜೀವನವನು
ನನ್ನ ಎಳೆಯ ಬುದ್ದಿ ಚಿಗುರಿ ದೊಡ್ಡದಾಗಿದೆ
ನಾ ತಿಳಿಯದೆ ಸೋತ ಕಾರಣ ಗೊತ್ತಾಗಿದೆ
ನನಗಿಂದು ಜೀವನವ ಸರಿ ಪಡಿಸಬೇಕಾಗಿದೆ
ನಾ ಹೋಗಬೇಕು ನನ್ನ ಭೂತಕಾಲಕೆ, ನನಗೆ
ಮತ್ತೆ ಅವಕಾಶ ಬೇಕು ಜೀವನವ ಸರಿಪಡಿಸಲು
ನಾ ಮತ್ತೊಮ್ಮೆ ಚಿಕ್ಕವನಾಗಿ ನನ್ನ ಜೀವನದ
ನ್ಯೂನ್ಯತೆಯ ಸರಿ ಪಡಿಸಿಕೊಂಡು ಬೆಳೆಯುವೆ
ಕಾಲ ಮೀರಿದೆ ಎಂದು ಗೊತ್ತು, ಕಾಲದೊಡನೆ
ವಯಸ್ಸು, ಅವಕಾಶ ಎಲ್ಲಾ ಮೀರಿದೆ ಎಂಬುದು
ಗೊತ್ತು, ಆದರೂ ನನಗೆ ಬೇಕು ನನ್ನ ಬಾಲ್ಯಕೆ
ಮರಳುವ ಅವಕಾಶ, ಸರಿ ಪಡಿಸುವೆ ಜೀವನವ
ನನ್ನ ಈಗಿರುವ ಅಭ್ಯಾಸವ ಅಲ್ಲಿಗೆ ಒಯ್ಯುವೆ
ನನಗೀಗಿರುವ ತಿಳುವಳಿಕೆಯನು ನನ್ನ ಬಾಲ್ಯಕೆ
ಹೊತ್ತೊಯ್ಯುವೆ, ಬಾಗಿಲು ತಗಿ ಭೂತಕಾಲವೆ
ನಾ ಬೇಡಿ ಬಂದಿರುವೆ, ನನಗೆ ನೀಡು ಅವಕಾಶವ
ನಾ ಭೂತಕಾಲಕ್ಕೆ ಮರಳಿ ಪ್ರಭುದ್ಧತೆಯ ಬಳಸಿ
ಮಾಡುವೆನು ಇಂದನು ಸುಂದರವಾಗಿ, ಸಂರಕ್ಷಿಸಿ
ನನ್ನೆಲ್ಲಾ ಆಸೆಗಳಿಗೆ ವಾಸ್ತವದ ರೆಕ್ಕೆ ನೀಡುವೆನು
ನನಗೊಮ್ಮೆ ಮರಳಿಸು ನನ್ನ ಹಿಂದಿನ ದಿನಗಳನು
- ತೇಜಸ್ವಿ.ಎ.ಸಿ
Monday, August 30, 2010
ಮೊಳಗಲಿ ಕನ್ನಡದ ಕೀರ್ತಿ
ಮೊಳಗಲಿ ಕನ್ನಡದ ಕೀರ್ತಿ
ಕನ್ನಡ ಅಕ್ಷರದೊಡನೆ ನಾ ಆರಂಭಿಸಿದ್ದ ಒಡನಾಟ
ನನಗಿಂದು ಮಾಡಿದೆ ಕನ್ನಡ ವ್ಯಾಮೋಹದ ಮಾಟ
ಕನ್ನಡದ ಅಕ್ಷರಗಳಲ್ಲಿ ನಾ ಕಾಣುವೆನು ಅನುರಾಗ
ಅದಾಗಿ ಹೋಗಿದೆ ಬಿಡಿಸಲಾಗದ ಅನುಬಂಧವೀಗ
ಕನ್ನಡ ಎನಗೆ ನನ್ನೆದೆಯಲ್ಲಿನ ಉಸಿರಿನಷ್ಟೇ ಸರಾಗ
ಕನ್ನಡಕೆ ಹೃದಯ ಬಡಿತ ಪಡೆದುಕೊಳ್ಳುವುದು ವೇಗ
ಕನ್ನಡ ನನ್ನ ನಾಡಿಗಳಲ್ಲಿ ಹರಿಯುವ ರಕ್ತದಷ್ಟೆ ಸಹಜ
ಹೃದಯದಲಿ ಶಾಶ್ವತವಾಗಿ ನೆಟ್ಟಿಹೆನು ಕನ್ನಡ ಧ್ವಜ
ಕನ್ನಡ ಅಕ್ಷರಗಳನ್ನು ಓದುವಾಗ ಸಿಗುವ ತಲ್ಲೀನತೆ
ಹೆಚ್ಚಿಸುವುದು ಓದು ಹಾಗು ಕೆಲಸದಲ್ಲಿನ ಏಕಾಗ್ರತೆ
ಕನ್ನಡಾಕ್ಷರಗಳಲ್ಲಿನ ಕೊಂಬು ಇಳೀ ದೀರ್ಘ ಒತ್ತು
ಕನ್ನಡಿಗರಿಗೆಲ್ಲರಿಗೂ ಆಗಿದೆ ಹೆಮ್ಮೆಯ ಸಂಪತ್ತು
ನಮ್ಮ ಭಾಷೆ ನಮ್ಮ ಹೆಮ್ಮೆ ಸ್ವಾಭಿಮಾನದ ಪ್ರತೀಕ
ಆಗಿದೆ ನಮ್ಮ ನಾಡಿನ ಜನರೆಲ್ಲರ ಒಗ್ಗಟ್ಟಿಗೆ ಪ್ರೇರಕ
ಎಲ್ಲರೂ ಸೇರಿ ತರೋಣ ಕನ್ನಡ ಬಳಸುವ ಆಚರಣೆ
ಎಲ್ಲರ ಮನಕೆ ನೀಡೋಣ ಕನ್ನಡ ಬಳಸುವ ಪ್ರೇರಣೆ
ಭಗವಂತನೇ ವರವಾಗಿ ನೀಡಿಹನು ನಾಡಿಗೆ ಶ್ರೀಗಂಧ
ಜಗತ್ತಿನೆಲ್ಲೆಡೆ ಪಸರಿಸಲು ಕನ್ನಡ ಭಾಷೆಯ ಸುಗಂಧ
ಕನ್ನಡ ನುಡಿಯ ಸಿಹಿಯಿಂದಲೇ ಹಂಚುವೆವು ಪ್ರೀತಿ
ಜಗತ್ತಿನಾದ್ಯಂತ ಮೊಳಗಲಿ ಕಸ್ತೂರಿ ಕನ್ನಡದ ಕೀರ್ತಿ
- ತೇಜಸ್ವಿ.ಎ.ಸಿ
ಕನ್ನಡ ಅಕ್ಷರದೊಡನೆ ನಾ ಆರಂಭಿಸಿದ್ದ ಒಡನಾಟ
ನನಗಿಂದು ಮಾಡಿದೆ ಕನ್ನಡ ವ್ಯಾಮೋಹದ ಮಾಟ
ಕನ್ನಡದ ಅಕ್ಷರಗಳಲ್ಲಿ ನಾ ಕಾಣುವೆನು ಅನುರಾಗ
ಅದಾಗಿ ಹೋಗಿದೆ ಬಿಡಿಸಲಾಗದ ಅನುಬಂಧವೀಗ
ಕನ್ನಡ ಎನಗೆ ನನ್ನೆದೆಯಲ್ಲಿನ ಉಸಿರಿನಷ್ಟೇ ಸರಾಗ
ಕನ್ನಡಕೆ ಹೃದಯ ಬಡಿತ ಪಡೆದುಕೊಳ್ಳುವುದು ವೇಗ
ಕನ್ನಡ ನನ್ನ ನಾಡಿಗಳಲ್ಲಿ ಹರಿಯುವ ರಕ್ತದಷ್ಟೆ ಸಹಜ
ಹೃದಯದಲಿ ಶಾಶ್ವತವಾಗಿ ನೆಟ್ಟಿಹೆನು ಕನ್ನಡ ಧ್ವಜ
ಕನ್ನಡ ಅಕ್ಷರಗಳನ್ನು ಓದುವಾಗ ಸಿಗುವ ತಲ್ಲೀನತೆ
ಹೆಚ್ಚಿಸುವುದು ಓದು ಹಾಗು ಕೆಲಸದಲ್ಲಿನ ಏಕಾಗ್ರತೆ
ಕನ್ನಡಾಕ್ಷರಗಳಲ್ಲಿನ ಕೊಂಬು ಇಳೀ ದೀರ್ಘ ಒತ್ತು
ಕನ್ನಡಿಗರಿಗೆಲ್ಲರಿಗೂ ಆಗಿದೆ ಹೆಮ್ಮೆಯ ಸಂಪತ್ತು
ನಮ್ಮ ಭಾಷೆ ನಮ್ಮ ಹೆಮ್ಮೆ ಸ್ವಾಭಿಮಾನದ ಪ್ರತೀಕ
ಆಗಿದೆ ನಮ್ಮ ನಾಡಿನ ಜನರೆಲ್ಲರ ಒಗ್ಗಟ್ಟಿಗೆ ಪ್ರೇರಕ
ಎಲ್ಲರೂ ಸೇರಿ ತರೋಣ ಕನ್ನಡ ಬಳಸುವ ಆಚರಣೆ
ಎಲ್ಲರ ಮನಕೆ ನೀಡೋಣ ಕನ್ನಡ ಬಳಸುವ ಪ್ರೇರಣೆ
ಭಗವಂತನೇ ವರವಾಗಿ ನೀಡಿಹನು ನಾಡಿಗೆ ಶ್ರೀಗಂಧ
ಜಗತ್ತಿನೆಲ್ಲೆಡೆ ಪಸರಿಸಲು ಕನ್ನಡ ಭಾಷೆಯ ಸುಗಂಧ
ಕನ್ನಡ ನುಡಿಯ ಸಿಹಿಯಿಂದಲೇ ಹಂಚುವೆವು ಪ್ರೀತಿ
ಜಗತ್ತಿನಾದ್ಯಂತ ಮೊಳಗಲಿ ಕಸ್ತೂರಿ ಕನ್ನಡದ ಕೀರ್ತಿ
- ತೇಜಸ್ವಿ.ಎ.ಸಿ
Friday, August 20, 2010
ಬೆಳದಿಂಗಳ ಚಂದಿರ
ಬೆಳದಿಂಗಳ ಚಂದಿರ
ಸೂರ್ಯ ಮುಳುಗುವ ಸಂಜೆ ಹೊತ್ತಿನಲಿ
ಮುಸ್ಸಂಜೆಯ ಮಬ್ಬಿನ ಬಾನಂಗಳದಲಿ
ತನ್ನ ಪಾಳಿಗಾಗಿ ಪೂರ್ಣಚಂದ್ರ ಬರುತ್ತಲಿದ್ದ
ನಸುಗೆಂಪ ಬಣ್ಣಕ್ಕೆ ತಿರುಗಿದ ನೇಸರ
ಆಗಸದ ಮೇಲೆಲ್ಲಾ ಕೆಂಪು ಬಣ್ಣವ ಚೆಲ್ಲಿ
ಬರುವ ಚಂದ್ರನಿಗೆ ಸ್ವಾಗತ ಕೋರುತ್ತಿದ್ದ
ನೇಸರನೆ ತಮ್ಮ ಯಜಮಾನನಂತೆ
ಆತ ಹೊರಡುತ್ತಲೇ ಅವನ ಹಿಂದೆಯೇ
ಹೊರಟವು ಹಕ್ಕಿಗಳು ಮರಳಿ ಗೂಡಿಗೆ
ಸಾಲು ಸಾಲಾಗಿ ಹೊರಟ ಹಕ್ಕಿಗಳು ಕೆಂಪು
ಆಗಸದಲಿ ತೋರಣವಾಗಿ, ಬರುವ ಚಂದಿರನ
ಸ್ವಾಗತಿಸಲು ಬಂದಂತೆ ತೋರುತ್ತೀತ್ತು
ನಿಧಾನವಾಗಿ ಕತ್ತಲೆಯು ಎಲ್ಲೆಡೆಯು ಆವರಿಸಿ
ಬೆಳದಿಂಗಳ ಚಂದಿರನು ಕತ್ತಲೆಯ ನಡುವೆ
ಆಗಸದಲ್ಲಿ ಪ್ರಕಾಶಮಾನವಾಗಿ ಬೆಳಗುತ್ತಿತ್ತು
ನೋಡ ನೋಡುತ್ತಲೇ ತೆರೆಯಲಾರಂಭಿಸಿತು
ತನ್ನದೇ ಆದ ಇರುಳಿನ ಹೊಸ ಸುಂದರ ಜಗತ್ತು
ಆ ಬೆಳದಿಂಗಳ ರೂಪ ನನ್ನ ಬೆರಗುಗೊಳಿಸಿತ್ತು
- ತೇಜಸ್ವಿ.ಎ.ಸಿ
ಸೂರ್ಯ ಮುಳುಗುವ ಸಂಜೆ ಹೊತ್ತಿನಲಿ
ಮುಸ್ಸಂಜೆಯ ಮಬ್ಬಿನ ಬಾನಂಗಳದಲಿ
ತನ್ನ ಪಾಳಿಗಾಗಿ ಪೂರ್ಣಚಂದ್ರ ಬರುತ್ತಲಿದ್ದ
ನಸುಗೆಂಪ ಬಣ್ಣಕ್ಕೆ ತಿರುಗಿದ ನೇಸರ
ಆಗಸದ ಮೇಲೆಲ್ಲಾ ಕೆಂಪು ಬಣ್ಣವ ಚೆಲ್ಲಿ
ಬರುವ ಚಂದ್ರನಿಗೆ ಸ್ವಾಗತ ಕೋರುತ್ತಿದ್ದ
ನೇಸರನೆ ತಮ್ಮ ಯಜಮಾನನಂತೆ
ಆತ ಹೊರಡುತ್ತಲೇ ಅವನ ಹಿಂದೆಯೇ
ಹೊರಟವು ಹಕ್ಕಿಗಳು ಮರಳಿ ಗೂಡಿಗೆ
ಸಾಲು ಸಾಲಾಗಿ ಹೊರಟ ಹಕ್ಕಿಗಳು ಕೆಂಪು
ಆಗಸದಲಿ ತೋರಣವಾಗಿ, ಬರುವ ಚಂದಿರನ
ಸ್ವಾಗತಿಸಲು ಬಂದಂತೆ ತೋರುತ್ತೀತ್ತು
ನಿಧಾನವಾಗಿ ಕತ್ತಲೆಯು ಎಲ್ಲೆಡೆಯು ಆವರಿಸಿ
ಬೆಳದಿಂಗಳ ಚಂದಿರನು ಕತ್ತಲೆಯ ನಡುವೆ
ಆಗಸದಲ್ಲಿ ಪ್ರಕಾಶಮಾನವಾಗಿ ಬೆಳಗುತ್ತಿತ್ತು
ನೋಡ ನೋಡುತ್ತಲೇ ತೆರೆಯಲಾರಂಭಿಸಿತು
ತನ್ನದೇ ಆದ ಇರುಳಿನ ಹೊಸ ಸುಂದರ ಜಗತ್ತು
ಆ ಬೆಳದಿಂಗಳ ರೂಪ ನನ್ನ ಬೆರಗುಗೊಳಿಸಿತ್ತು
- ತೇಜಸ್ವಿ.ಎ.ಸಿ
Thursday, August 12, 2010
ಅಡೆ-ತಡೆ
ಅಡೆ-ತಡೆ
ನಾವೆಷ್ಟೇ ತಿಳಿದುಕೊಂಡರು ನಮ್ಮ ಬೇಕುಗಳನ್ನು ಗೆಲ್ಲಲಾರೆವೇಕೆ
ನಾವೆಷ್ಟೇ ಕೆಲಸವನ್ನು ಯೋಜಿಸಿದರು ಕೆಲಸದಲ್ಲಿ ಸೋಲುವುದೇಕೆ
ನಾವು ಮಾಡ ಬೇಕೆನಿಸುವ ಕಾರ್ಯಗಳನ್ನು ತಡೆಯುವುದು ಏನು
ತಡೆಯುವ ಅಂಶಗಳೆನೆಂದು ಗುರುತಿಸಿ ನೀ ತಿಳಿಸಿ ಹೇಳಿಯೇನು
ನಾವು ಮಾಡುವ ಕೆಲಸಗಳಿಗೆ ಅಡ್ಡಿ ತರುವ ವಿಷಯಗಳು ಹಲವಾರು
ಹಲವು ನಮ್ಮ ಹತೋಟಿಯಲ್ಲುಂಟು, ಬೇರೆಯದರ ಕೈಯಲ್ಲಿ ಕೆಲವಾರು
ಕಾಗದದ ಮೇಲೆ ಯೋಜನೆಗಳ ಹಾಕಿ, ಬುದ್ದಿ ಪ್ರದರ್ಶಿಸಿದರೆ ಸಾಲದು
ಕ್ರಿಯಾಶೀಲರಾಗಿ ದುಡಿದರೆ ಸೋಮಾರಿತನ ನಮ್ಮ ತಡೆಯಾಗಲಾರದು
ಹಲವು ಕೆಲಸಗಳಿಗೆ ಉಂಟು ಬೇರೆ ಜನಗಳ ಮೇಲೆ ಪರಾವಲಂಬನೆ
ಜನ ಬಳಕೆಯ ನಡವಳಿಕೆಯು ಸರಾಗ ಮಾಡುವುದು ಕಷ್ಟದ ಕೆಲಸವನೆ
ಹಲವು ಕೆಲಸಗಳಿಗೆ ನಮ್ಮ ಬಳಿಯಿರುವುದು ಯತೇಚ್ಚವಾದ ಸಮಯ
ಕೆಲಸಗಳ ಮುಂದೂಡಿಕೆಯೇ ತಡೆಯಾಗುವುದು ನಮ್ಮೆಲ್ಲರ ಕಾರ್ಯ
ಹಣವ ಉಳಿಸುವ ತಡೆ ಹಾಕಿ ಕುಳಿತರೆ ಸಾಗದು ನಮ್ಮ ಯೋಜನೆ
ಅಗತ್ಯ ಹಣವನ್ನು ಖರ್ಚು ಮಾಡಿ ಗಳಿಸಲು ಯಶಸ್ಸಿನ ಖಜಾನೆ
ಶುರು ಮಾಡುವ ಮುಂಚೆಯೇ ಮಾಡದಿರಿ ನಕಾರಾತ್ಮಕ ಚಿಂತನೆ
ಈ ನಕಾರಾತ್ಮಕತೆಯೇ ಆಗುವುದು ಕೆಲಸವ ತಡೆಯುವ ಭಾವನೆ
ನಿಮ್ಮ ರೂಪ, ವಿಧ್ಯೆ, ಸೋಲುಗಳಿಂದ ಬೆಳೆಸಬೇಡಿ ಹೊಸ ಕೀಳರಿಮೆ
ಇದು ನಿಮ್ಮ ತಡೆಯಾಗುವುದು, ತಿಳಿಯಿರಿ ಅದು ಕೇವಲ ಒಂದು ಭ್ರಮೆ
ಹೀಗೆ ನಿಮ್ಮ ತಡೆಯುವ ಅಂಶಗಳ ಮಾಡುತ ಹೋಗಿ ಪಟ್ಟಿಯ
ನಿಧಾನವಾಗಿ ಸಾಧಿಸುತ ಹೋಗಿ ಅವುಗಳ ಮೇಲೆ ಹತೋಟಿಯ
- ತೇಜಸ್ವಿ.ಎ.ಸಿ
ನಾವೆಷ್ಟೇ ತಿಳಿದುಕೊಂಡರು ನಮ್ಮ ಬೇಕುಗಳನ್ನು ಗೆಲ್ಲಲಾರೆವೇಕೆ
ನಾವೆಷ್ಟೇ ಕೆಲಸವನ್ನು ಯೋಜಿಸಿದರು ಕೆಲಸದಲ್ಲಿ ಸೋಲುವುದೇಕೆ
ನಾವು ಮಾಡ ಬೇಕೆನಿಸುವ ಕಾರ್ಯಗಳನ್ನು ತಡೆಯುವುದು ಏನು
ತಡೆಯುವ ಅಂಶಗಳೆನೆಂದು ಗುರುತಿಸಿ ನೀ ತಿಳಿಸಿ ಹೇಳಿಯೇನು
ನಾವು ಮಾಡುವ ಕೆಲಸಗಳಿಗೆ ಅಡ್ಡಿ ತರುವ ವಿಷಯಗಳು ಹಲವಾರು
ಹಲವು ನಮ್ಮ ಹತೋಟಿಯಲ್ಲುಂಟು, ಬೇರೆಯದರ ಕೈಯಲ್ಲಿ ಕೆಲವಾರು
ಕಾಗದದ ಮೇಲೆ ಯೋಜನೆಗಳ ಹಾಕಿ, ಬುದ್ದಿ ಪ್ರದರ್ಶಿಸಿದರೆ ಸಾಲದು
ಕ್ರಿಯಾಶೀಲರಾಗಿ ದುಡಿದರೆ ಸೋಮಾರಿತನ ನಮ್ಮ ತಡೆಯಾಗಲಾರದು
ಹಲವು ಕೆಲಸಗಳಿಗೆ ಉಂಟು ಬೇರೆ ಜನಗಳ ಮೇಲೆ ಪರಾವಲಂಬನೆ
ಜನ ಬಳಕೆಯ ನಡವಳಿಕೆಯು ಸರಾಗ ಮಾಡುವುದು ಕಷ್ಟದ ಕೆಲಸವನೆ
ಹಲವು ಕೆಲಸಗಳಿಗೆ ನಮ್ಮ ಬಳಿಯಿರುವುದು ಯತೇಚ್ಚವಾದ ಸಮಯ
ಕೆಲಸಗಳ ಮುಂದೂಡಿಕೆಯೇ ತಡೆಯಾಗುವುದು ನಮ್ಮೆಲ್ಲರ ಕಾರ್ಯ
ಹಣವ ಉಳಿಸುವ ತಡೆ ಹಾಕಿ ಕುಳಿತರೆ ಸಾಗದು ನಮ್ಮ ಯೋಜನೆ
ಅಗತ್ಯ ಹಣವನ್ನು ಖರ್ಚು ಮಾಡಿ ಗಳಿಸಲು ಯಶಸ್ಸಿನ ಖಜಾನೆ
ಶುರು ಮಾಡುವ ಮುಂಚೆಯೇ ಮಾಡದಿರಿ ನಕಾರಾತ್ಮಕ ಚಿಂತನೆ
ಈ ನಕಾರಾತ್ಮಕತೆಯೇ ಆಗುವುದು ಕೆಲಸವ ತಡೆಯುವ ಭಾವನೆ
ನಿಮ್ಮ ರೂಪ, ವಿಧ್ಯೆ, ಸೋಲುಗಳಿಂದ ಬೆಳೆಸಬೇಡಿ ಹೊಸ ಕೀಳರಿಮೆ
ಇದು ನಿಮ್ಮ ತಡೆಯಾಗುವುದು, ತಿಳಿಯಿರಿ ಅದು ಕೇವಲ ಒಂದು ಭ್ರಮೆ
ಹೀಗೆ ನಿಮ್ಮ ತಡೆಯುವ ಅಂಶಗಳ ಮಾಡುತ ಹೋಗಿ ಪಟ್ಟಿಯ
ನಿಧಾನವಾಗಿ ಸಾಧಿಸುತ ಹೋಗಿ ಅವುಗಳ ಮೇಲೆ ಹತೋಟಿಯ
- ತೇಜಸ್ವಿ.ಎ.ಸಿ
Thursday, August 5, 2010
ಮುಸಲಧಾರೆ
ಮುಸಲಧಾರೆ
ಮಧ್ಯಾಹ್ನದ ಸಮಯದಲಿ ಮುಸುಕ ಮಬ್ಬು ಇಣುಕುತಿರಲು
ಅನಿರೀಕ್ಷಿತ ತಂಗಾಳಿಯು ಎಲ್ಲಡೆಯೂ ತಂಪೆರಿಯುತಿರಲು
ಏನೀ ಬೆಳಕಿನಾಟವಿದೆಂದು ಕುತೂಹಲಕೆ ನಾ ಹೊರ ಬಂದೆ
ಕಪ್ಪು ಕಾರ್ಮೋಡವು ತಂಗಾಳಿಯ ಹೊತ್ತು ತನ್ನ ರಾಜ್ಯವನು
ವಿಸ್ತರಿಸುತ್ತ, ನಿಧಾನವಾಗಿ ತನ್ನ ಬಲಿಷ್ಠ ಬಾಹುಗಳ ಚಾಚಿ
ಸಿಡಿಲಬ್ಬರದಿ ಸದ್ದ ಮೊಳಗಿಸುತ ತನ್ನಾಗಮನವ ಸಾರುತ್ತಿತ್ತು
ಕಾರ್ಮೋಡದ ನಡುವೆ ಬೆಳ್ಳನೆಯ ಬೆಳ್ಳಿ ರೇಖೆ ಮಿಂಚುತಿರಲು
ರೈತನ ಮನದೊಳಗಿನ ಸಣ್ಣನೆಯ ನಗೆ ಮುಖವರಳುತಿರಲು
ಸುತ್ತಣದ ವಾತಾವರಣದಲಿ ಹೊಸ ಉಲ್ಲಾಸವ ಪಸರಿಸಿತ್ತು
ಎದುರಿನ ಬಯಲಲ್ಲಿ ಸಣ್ಣಗೆ ಎದ್ದ ಗಾಳಿಗೆ ಓಡುತ್ತಿರುವ ಕರು
ಅದನ್ನೇ ಹಿಂಬಾಲಿಸುವಂತೆ ಧರೆಗೆ ಬಿದ್ದ ಮುತ್ತಿನ ಹನಿಗಳು
ಧಣಿದ ಭೂಮಿಗೆ ಉಲ್ಲಾಸದ ಸಿಂಚನವ ಸಿಂಪಡಿಸುತ್ತಿತ್ತು
ಧರೆಗೆ ಬಿದ್ದ ಮುತ್ತಿನ ಹನಿಗಳ ತನ್ನ ಮೈಯೊಳಗೆ ಹೀರಿ
ಘಮ ಘಮಿಸುವ ಸುವಾಸನೆಯ ಎಲ್ಲೆಡೆಯಲಿ ಪಸರಿಸಲು
ಭೂಮಿ ಬಚ್ಚಿಟ್ಟ ಸುಂದರ ಸುಗಂಧವ ಹೊರಸೂಸುತಿತ್ತು
ಅಂಗಳೊಳ ಮಕ್ಕಳು ಮನದ ಗರಿ ಗೆದರಿ ಆಡಲನುವಾಗಿ
ಕಾಡಿನೊಳು ಗರಿ ಗೆದರಿ ನವಿಲುಗಳ ನರ್ತನದ ತೆರನಾಗಿ
ಸುತ್ತಲ ವಾತಾವರಣ ತಂಗಾಳಿಯಾಗಿ ಹರಿದಾಡುತ್ತಿತ್ತು
ಹನಿ ಹನಿಯಾಗಿ ಸುರಿಯಲಾರಂಭಿಸಿತು ಮುಸಲಧಾರೆಯು
ಸೃಷ್ಟಿಸುತ ಭುವಿ ಆಕಾಶವೊಂದು ಮಾಡುವ ಕಾಮನ ಬಿಲ್ಲನು
ನೋಡಲು ದಕ್ಕಿತ್ತು ಪ್ರಕೃತಿಯ ರಮ್ಯದೃಶ್ಯ ಕಣ್ಣಿಗೆ ಹಬ್ಬವಾಗಿ
- ತೇಜಸ್ವಿ.ಎ.ಸಿ
ಮಧ್ಯಾಹ್ನದ ಸಮಯದಲಿ ಮುಸುಕ ಮಬ್ಬು ಇಣುಕುತಿರಲು
ಅನಿರೀಕ್ಷಿತ ತಂಗಾಳಿಯು ಎಲ್ಲಡೆಯೂ ತಂಪೆರಿಯುತಿರಲು
ಏನೀ ಬೆಳಕಿನಾಟವಿದೆಂದು ಕುತೂಹಲಕೆ ನಾ ಹೊರ ಬಂದೆ
ಕಪ್ಪು ಕಾರ್ಮೋಡವು ತಂಗಾಳಿಯ ಹೊತ್ತು ತನ್ನ ರಾಜ್ಯವನು
ವಿಸ್ತರಿಸುತ್ತ, ನಿಧಾನವಾಗಿ ತನ್ನ ಬಲಿಷ್ಠ ಬಾಹುಗಳ ಚಾಚಿ
ಸಿಡಿಲಬ್ಬರದಿ ಸದ್ದ ಮೊಳಗಿಸುತ ತನ್ನಾಗಮನವ ಸಾರುತ್ತಿತ್ತು
ಕಾರ್ಮೋಡದ ನಡುವೆ ಬೆಳ್ಳನೆಯ ಬೆಳ್ಳಿ ರೇಖೆ ಮಿಂಚುತಿರಲು
ರೈತನ ಮನದೊಳಗಿನ ಸಣ್ಣನೆಯ ನಗೆ ಮುಖವರಳುತಿರಲು
ಸುತ್ತಣದ ವಾತಾವರಣದಲಿ ಹೊಸ ಉಲ್ಲಾಸವ ಪಸರಿಸಿತ್ತು
ಎದುರಿನ ಬಯಲಲ್ಲಿ ಸಣ್ಣಗೆ ಎದ್ದ ಗಾಳಿಗೆ ಓಡುತ್ತಿರುವ ಕರು
ಅದನ್ನೇ ಹಿಂಬಾಲಿಸುವಂತೆ ಧರೆಗೆ ಬಿದ್ದ ಮುತ್ತಿನ ಹನಿಗಳು
ಧಣಿದ ಭೂಮಿಗೆ ಉಲ್ಲಾಸದ ಸಿಂಚನವ ಸಿಂಪಡಿಸುತ್ತಿತ್ತು
ಧರೆಗೆ ಬಿದ್ದ ಮುತ್ತಿನ ಹನಿಗಳ ತನ್ನ ಮೈಯೊಳಗೆ ಹೀರಿ
ಘಮ ಘಮಿಸುವ ಸುವಾಸನೆಯ ಎಲ್ಲೆಡೆಯಲಿ ಪಸರಿಸಲು
ಭೂಮಿ ಬಚ್ಚಿಟ್ಟ ಸುಂದರ ಸುಗಂಧವ ಹೊರಸೂಸುತಿತ್ತು
ಅಂಗಳೊಳ ಮಕ್ಕಳು ಮನದ ಗರಿ ಗೆದರಿ ಆಡಲನುವಾಗಿ
ಕಾಡಿನೊಳು ಗರಿ ಗೆದರಿ ನವಿಲುಗಳ ನರ್ತನದ ತೆರನಾಗಿ
ಸುತ್ತಲ ವಾತಾವರಣ ತಂಗಾಳಿಯಾಗಿ ಹರಿದಾಡುತ್ತಿತ್ತು
ಹನಿ ಹನಿಯಾಗಿ ಸುರಿಯಲಾರಂಭಿಸಿತು ಮುಸಲಧಾರೆಯು
ಸೃಷ್ಟಿಸುತ ಭುವಿ ಆಕಾಶವೊಂದು ಮಾಡುವ ಕಾಮನ ಬಿಲ್ಲನು
ನೋಡಲು ದಕ್ಕಿತ್ತು ಪ್ರಕೃತಿಯ ರಮ್ಯದೃಶ್ಯ ಕಣ್ಣಿಗೆ ಹಬ್ಬವಾಗಿ
- ತೇಜಸ್ವಿ.ಎ.ಸಿ
Subscribe to:
Posts (Atom)