ಪ್ರಿಯ ಸಾಹಿತ್ಯ ಪ್ರಿಯರೆ,
ನಾ ಬರೆದ ಮೊದಲ ಕೃತಿ ನೆರಳ ಹೆಜ್ಜೆ ಯನ್ನು ಭಾನುವಾರ ದಿ: 15-ಮಾರ್ಚ್ -2015ರಂದು ಲೋಕಾರ್ಪಣೆ ಮಾಡಲಾಯಿತು
ಖ್ಯಾತ ಕವಿ ಹಾಗು ಅಖಿಲ ಭಾರತ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದ ಡಾ. ಸಿದ್ಧಲಿಂಗಯ್ಯ ನವರು ಕೃತಿ ಬಿಡುಗಡೆ ಮಾಡಿದರು. ಖ್ಯಾತ ರಂಗಭೂಮಿ ಹಾಗು ಚಲನ ಚಿತ್ರ ಕಲಾವಿದರಾದ ಶ್ರೀ ಯಶವಂತ ಸರದೇಶಪಾಂಡೆ ಯವರು ಅಧ್ಯಕ್ಷತೆ ವಹಿಸಿದ್ದರು ಹಾಗು ಕವಯಿತ್ರಿ ಅರುಂಧತಿ ರಮೇಶ್ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು.
ಪುಸ್ತಕ: ನೆರಳ ಹೆಜ್ಜೆ
ಕವಿ/ಲೇಖಕ : ತೇಜಸ್ವಿ ಎ. ಸಿ
ಸಾಹಿತ್ಯ ಪ್ರಕಾರ: ಕವನ ಸಂಕಲನ
ಪ್ರಕಾಶಕರು: ನಿರೂಪ್ ಪಬ್ಲಿಕೇಷನ್ಸ್
ಪುಸ್ತಕದ ಬೆಲೆ: ರೂ. 70