ಹ್ಯಾಪಿ ಬರ್ತಡೆ
ಚಿಂಟು ಕೇಳಿದ ಕೇಕು
ನನಗೆ ಬೇಕೇ ಬೇಕು
ಮಾಡೋಣ ನಿನ್ನ ಬರ್ತಡೆ
ಮುಂದಿನ ತಿಂಗಳು ಬರ್ತದೆ
ತರೋಣ ದೊಡ್ಡ ಕೇಕು
ಈಗ ಮಿಠಾಯಿ ಸಾಕು
ಇವತ್ತೇ ಬರ್ತಡೆ ಯಾಕಿಲ್ಲ
ಈಗಲೇ ಕೇಕು ಬೇಕಲ್ಲ
ಚಿಂಟುವಿನ ಹಠ ನಿಲ್ಲಲಿಲ್ಲ
ಕೊನೆಗೂ ಕೇಕು ಸಿಕ್ಕಿತಲ್ಲ
ಚಿಂಟು ಕುಣಿದು ಕೇಕು ತಿಂದ
ದಿನಾ ಬರ್ತಡೆ ಬರಲಿ ಎಂದ
- ತೇಜಸ್ವಿ. ಎ.ಸಿ
ಹಾಯ್,ನಾನು ತೇಜಸ್ವಿ, ವೃತ್ತಿಯಲ್ಲಿ ಐ ಟಿ ಕ್ಷೇತ್ರದಲ್ಲಿ ಉದ್ಯೋಗಿ. ನನ್ನ ಆಸಕ್ತಿಯೆಲ್ಲ ಕವನ, ಸಾಹಿತ್ಯ, ಚಿತ್ರಕಲೆ, ಛಾಯಾಚಿತ್ರಗ್ರಹಣ. ಈ ನನ್ನ ಕಲೆಯ ಅಭಿರುಚಿಗಾಗಿ ನಾನು ಈ ತಾಣವನ್ನು ನಿರ್ಮಿಸಿದ್ದೇನೆ. ನಿಮ್ಮಲ್ಲರಿಗೂ ನನ್ನ ಪುಟ್ಟ ತಾಣಕ್ಕೆ ಸ್ವಾಗತ.
Thursday, April 29, 2010
Thursday, April 22, 2010
ಮೋಜಿನ ಬೇಸಿಗೆ ರಜೆ
ಮೋಜಿನ ಬೇಸಿಗೆ ರಜೆ
ಮುಗಿಯಿತು ಮಕ್ಕಳ ವಾರ್ಷಿಕ ಪರೀಕ್ಷೆ
ಮರಳಿ ಬಂದಿದೆ ಎಲ್ಲರಿಗೂ ಬೇಸಿಗೆ ರಜೆ
ಧರೆಯಲಿ ಉರಿಯುತ್ತಿದೆ ಬೇಸಿಗೆಯ ಧಗೆ
ಮಕ್ಕಳು ನೆನೆವರು ಐಸ್ ಕ್ರೀಮ್ ಗಳ ಬಗೆ
ಬೆಳಗಿನಿಂದ ಸಂಜೆವರೆಗೂ ಆಡುವರು ಕ್ರಿಕೆಟ್ಟು
ಆಟವೆಂದರೆ ಓಡುವರಿವರು ಊಟ ತಿಂಡಿ ಬಿಟ್ಟು
ಊರಿನ ಕೆರೆ, ಕೊಳದಲ್ಲಿ ಮಕ್ಕಳಾಡುವರು ಈಜು
ರಜೆಯಲ್ಲಿ ಯಾರು ತಡೆಯರು ಇವರುಗಳ ಮೋಜು
ರಜೆಯಲ್ಲಿ ಓಡುವರು ತಾತ ಅಜ್ಜಿಗಳ ಊರಿಗೆ
ತಡೆ ಹಾಕಲಾದೀತೇ ಇವರುಗಳ ಓಟದ ದಾರಿಗೆ
ಮಳೆ ಬಂದರೆ ಮನೆಯಲ್ಲಿ ನಿಲ್ಲುವರೇ ಇವರು
ಅದರಲ್ಲೂ ಸೇರಿ ನೆನೆವ ಹೊಸ ಆಟ ಆಡುವರು
ಬೇಸಿಗೆ ಶಿಬಿರಕ್ಕೆ ಸೇರುವರು ನಗರದ ಮಕ್ಕಳು
ಪ್ರಕೃತಿಯನ್ನೇ ಶಿಬಿರ ಮಾಡುವರು ಹಳ್ಳಿಯ ಹೈಕಳು
ಕುಂಟಾಪಿಲ್ಲೆ, ಕಬಡ್ಡಿ, ಕೊ ಕೋ, ಮರಕೋತಿ, ಬುಗುರಿ
ಗೋಲಿ, ಕ್ರಿಕೆಟ್ಟು, ಚಿನ್ನಿದಾಂಡು, ಚೌಕಬಾರಾ, ಲಗೋರಿ
ಚಿತ್ರ, ಸೈಕಲ್, ಈಜು ಕಲಿಯಲು ಒಳ್ಳೆಯ ಅವಕಾಶ
ಎಲ್ಲಾ ಕಲಿತು ನಲಿಯುವರು, ಗಳಿಸಿ ಆಸೆಯಲ್ಲಿ ಯಶ
ಈ ದಿನಗಳು ಬರುವುದಿಲ್ಲ ಮುಂದೆ ದೊಡ್ಡವರಾದಾಗ
ಕಲಿತು, ಕುಣಿದು ಕುಪ್ಪಳಿಸಿ ನೀವುಗಳು ಚಿಕ್ಕವರಿದ್ದಾಗ
- ತೇಜಸ್ವಿ .ಎ. ಸಿ
ಮುಗಿಯಿತು ಮಕ್ಕಳ ವಾರ್ಷಿಕ ಪರೀಕ್ಷೆ
ಮರಳಿ ಬಂದಿದೆ ಎಲ್ಲರಿಗೂ ಬೇಸಿಗೆ ರಜೆ
ಧರೆಯಲಿ ಉರಿಯುತ್ತಿದೆ ಬೇಸಿಗೆಯ ಧಗೆ
ಮಕ್ಕಳು ನೆನೆವರು ಐಸ್ ಕ್ರೀಮ್ ಗಳ ಬಗೆ
ಬೆಳಗಿನಿಂದ ಸಂಜೆವರೆಗೂ ಆಡುವರು ಕ್ರಿಕೆಟ್ಟು
ಆಟವೆಂದರೆ ಓಡುವರಿವರು ಊಟ ತಿಂಡಿ ಬಿಟ್ಟು
ಊರಿನ ಕೆರೆ, ಕೊಳದಲ್ಲಿ ಮಕ್ಕಳಾಡುವರು ಈಜು
ರಜೆಯಲ್ಲಿ ಯಾರು ತಡೆಯರು ಇವರುಗಳ ಮೋಜು
ರಜೆಯಲ್ಲಿ ಓಡುವರು ತಾತ ಅಜ್ಜಿಗಳ ಊರಿಗೆ
ತಡೆ ಹಾಕಲಾದೀತೇ ಇವರುಗಳ ಓಟದ ದಾರಿಗೆ
ಮಳೆ ಬಂದರೆ ಮನೆಯಲ್ಲಿ ನಿಲ್ಲುವರೇ ಇವರು
ಅದರಲ್ಲೂ ಸೇರಿ ನೆನೆವ ಹೊಸ ಆಟ ಆಡುವರು
ಬೇಸಿಗೆ ಶಿಬಿರಕ್ಕೆ ಸೇರುವರು ನಗರದ ಮಕ್ಕಳು
ಪ್ರಕೃತಿಯನ್ನೇ ಶಿಬಿರ ಮಾಡುವರು ಹಳ್ಳಿಯ ಹೈಕಳು
ಕುಂಟಾಪಿಲ್ಲೆ, ಕಬಡ್ಡಿ, ಕೊ ಕೋ, ಮರಕೋತಿ, ಬುಗುರಿ
ಗೋಲಿ, ಕ್ರಿಕೆಟ್ಟು, ಚಿನ್ನಿದಾಂಡು, ಚೌಕಬಾರಾ, ಲಗೋರಿ
ಚಿತ್ರ, ಸೈಕಲ್, ಈಜು ಕಲಿಯಲು ಒಳ್ಳೆಯ ಅವಕಾಶ
ಎಲ್ಲಾ ಕಲಿತು ನಲಿಯುವರು, ಗಳಿಸಿ ಆಸೆಯಲ್ಲಿ ಯಶ
ಈ ದಿನಗಳು ಬರುವುದಿಲ್ಲ ಮುಂದೆ ದೊಡ್ಡವರಾದಾಗ
ಕಲಿತು, ಕುಣಿದು ಕುಪ್ಪಳಿಸಿ ನೀವುಗಳು ಚಿಕ್ಕವರಿದ್ದಾಗ
- ತೇಜಸ್ವಿ .ಎ. ಸಿ
Thursday, April 15, 2010
ಹೀಗೆ ಆಗಿದ್ದಿದ್ದರೆ
ಹೀಗೆ ಆಗಿದ್ದಿದ್ದರೆ
ಮನಸು ಗರಿಗೆದರಿತು ಆಕೆಯ
ನೋಡಿ
ಆಗಬೇಕನಿಸಿತು ನಾವಿಬ್ಬರು
ಜೋಡಿ
ಮಾತಾಡಿಸಿ, ನಗಿಸಿ ಮಾಡಿದೆ
ಮೋಡಿ
ನಂತರ ಪ್ರೇಮದ ಸಿಗ್ನಲ್ ಕೊಟ್ಟೆ
ನೋಡಿ
ಮೊದಲು ನಂಬಲಿಲ್ಲ ಪರೀಕ್ಷಿಸಿದಳು
ನಾಟಕವಾಡಿ
ನಿಧಾನವಾಗಿ ತೆಕ್ಕೆಗೆ ಬಿದ್ದಳು ಮನಸು
ಮಾಡಿ
ಕುಣಿದೆವು ಕೆಲ ದಿನ ಬಾನಂಗಳದಿ
ಹಾರಾಡಿ
ಸಿಕ್ಕಿ ಬಿದ್ದೆವು ಮನೆಯಲ್ಲಿ, ಎಲ್ಲೆಡೆ
ತಿರುಗಾಡಿ
ಮದುವೆಗೆ ಒಪ್ಪಿಸಿದೆವು ಮನೆಯಲ್ಲಿ
ಹೋರಾಡಿ
ಈಗ ಉಂಟು ಮಕ್ಕಳೆರಡು ಅಂಗಳದಿ
ಆಟವಾಡಿ
- ತೇಜಸ್ವಿ .ಎ.ಸಿ
ಮನಸು ಗರಿಗೆದರಿತು ಆಕೆಯ
ನೋಡಿ
ಆಗಬೇಕನಿಸಿತು ನಾವಿಬ್ಬರು
ಜೋಡಿ
ಮಾತಾಡಿಸಿ, ನಗಿಸಿ ಮಾಡಿದೆ
ಮೋಡಿ
ನಂತರ ಪ್ರೇಮದ ಸಿಗ್ನಲ್ ಕೊಟ್ಟೆ
ನೋಡಿ
ಮೊದಲು ನಂಬಲಿಲ್ಲ ಪರೀಕ್ಷಿಸಿದಳು
ನಾಟಕವಾಡಿ
ನಿಧಾನವಾಗಿ ತೆಕ್ಕೆಗೆ ಬಿದ್ದಳು ಮನಸು
ಮಾಡಿ
ಕುಣಿದೆವು ಕೆಲ ದಿನ ಬಾನಂಗಳದಿ
ಹಾರಾಡಿ
ಸಿಕ್ಕಿ ಬಿದ್ದೆವು ಮನೆಯಲ್ಲಿ, ಎಲ್ಲೆಡೆ
ತಿರುಗಾಡಿ
ಮದುವೆಗೆ ಒಪ್ಪಿಸಿದೆವು ಮನೆಯಲ್ಲಿ
ಹೋರಾಡಿ
ಈಗ ಉಂಟು ಮಕ್ಕಳೆರಡು ಅಂಗಳದಿ
ಆಟವಾಡಿ
- ತೇಜಸ್ವಿ .ಎ.ಸಿ
Friday, April 9, 2010
ಯಾರಿವನು ಸಿಂಹ
ಯಾರಿವನು ಸಿಂಹ
ನೆನೆಪಿದೆ ನನಗೆ ಆ ನಸುಗೆಂಪು ಸಂಜೆ
ಅಂದು ಇತ್ತು ನನಗೆ ಭಾನುವಾರದ ರಜೆ
ಅದು ಅಂದು ಆಗಿತ್ತು ತುಂಟ ಪುಟ್ಟ ಕಂದ
ಕೆಂಪು ರಿಬ್ಬನ್ ಕಟ್ಟಿಕೊಂಡು ಕಂಡಿತ್ತು ಚೆಂದ
ತುಂಟ ಕುನ್ನಿಯ ಕಣ್ಣಿನಲ್ಲಿ ಕಾಣುತ್ತಿತ್ತು ಅರ್ಧ ಚಂದ್ರ
ಅವನನ್ನು ಹೊತ್ತು ತರಲು ಪೆಟ್ಟಿಗೆಯಲ್ಲಿ ಮಾಡಿದ್ದೆ ರಂದ್ರ
ಆ ಪುಟ್ಟ ಶ್ವಾನಕೆ ಅವರು ಹಾಕಿದ್ದರು ಆನೆಯ ಸರಪಳಿ
ಆ ಕುನ್ನಿಯು ಬಂದಿತು ಮನೆಗೆ ಆಗಿ ಪುಟ್ಟ ಬಳುವಳಿ
ಪುಟ್ಟ ಕುನ್ನಿಯ ತುಂಟಾಟ ಅಂದು ಗಳಿಸಿತ್ತು ಎಲ್ಲರ ಪ್ರೀತಿ
ಅವನು ಮಾಡುತ್ತಿದ್ದ ನಾಯಿಗಳ ಬೇಟೆ ಪಡೆದಿತ್ತು ಮನೆಯಲ್ಲಿ ಖ್ಯಾತಿ
ಶಾಲೆಗೆ ಹೋಗುವ ಮಕ್ಕಳನ್ನು ಹೆದರಿಸುತ್ತಿದ್ದ ಬೊಗಳಿ
ಕುಣಿದು ಬೊಗಳಿ ಕೆಸರು ಮಾಡುತ್ತಿದ್ದ ನಮ್ಮ ಮನೆಯ ಜಗುಲಿ
ವಾಕಿಂಗ್ ಎಂದು ಹೋಗುವಾಗ ಮುಖದಲ್ಲಿರಿತ್ತಿತ್ತು ಸಿಂಹದ ಠೀವಿ
ರಸ್ತೆಯ ಹಂದಿ, ನಾಯಿಗಳಿಗೆ ಸದಾ ಆಗಿರುತ್ತಿದ್ದ ಬೇಟೆಯ ಕೋವಿ
ನಮ್ಮ ಮನೆಯ 'ನಂದು'ವನ್ನು ಸಾಕಿದ್ದೇವೆ ಸಿಂಹದ ಧಾಟಿ
ಎಂದೂ ಕಳ್ಳರನ್ನು ಬಿಡಲಿಲ್ಲ ಅದು ಹೋಗಲು ತನ್ನನು ದಾಟಿ
- ತೇಜಸ್ವಿ .ಎ.ಸಿ
ನೆನೆಪಿದೆ ನನಗೆ ಆ ನಸುಗೆಂಪು ಸಂಜೆ
ಅಂದು ಇತ್ತು ನನಗೆ ಭಾನುವಾರದ ರಜೆ
ಅದು ಅಂದು ಆಗಿತ್ತು ತುಂಟ ಪುಟ್ಟ ಕಂದ
ಕೆಂಪು ರಿಬ್ಬನ್ ಕಟ್ಟಿಕೊಂಡು ಕಂಡಿತ್ತು ಚೆಂದ
ತುಂಟ ಕುನ್ನಿಯ ಕಣ್ಣಿನಲ್ಲಿ ಕಾಣುತ್ತಿತ್ತು ಅರ್ಧ ಚಂದ್ರ
ಅವನನ್ನು ಹೊತ್ತು ತರಲು ಪೆಟ್ಟಿಗೆಯಲ್ಲಿ ಮಾಡಿದ್ದೆ ರಂದ್ರ
ಆ ಪುಟ್ಟ ಶ್ವಾನಕೆ ಅವರು ಹಾಕಿದ್ದರು ಆನೆಯ ಸರಪಳಿ
ಆ ಕುನ್ನಿಯು ಬಂದಿತು ಮನೆಗೆ ಆಗಿ ಪುಟ್ಟ ಬಳುವಳಿ
ಪುಟ್ಟ ಕುನ್ನಿಯ ತುಂಟಾಟ ಅಂದು ಗಳಿಸಿತ್ತು ಎಲ್ಲರ ಪ್ರೀತಿ
ಅವನು ಮಾಡುತ್ತಿದ್ದ ನಾಯಿಗಳ ಬೇಟೆ ಪಡೆದಿತ್ತು ಮನೆಯಲ್ಲಿ ಖ್ಯಾತಿ
ಶಾಲೆಗೆ ಹೋಗುವ ಮಕ್ಕಳನ್ನು ಹೆದರಿಸುತ್ತಿದ್ದ ಬೊಗಳಿ
ಕುಣಿದು ಬೊಗಳಿ ಕೆಸರು ಮಾಡುತ್ತಿದ್ದ ನಮ್ಮ ಮನೆಯ ಜಗುಲಿ
ವಾಕಿಂಗ್ ಎಂದು ಹೋಗುವಾಗ ಮುಖದಲ್ಲಿರಿತ್ತಿತ್ತು ಸಿಂಹದ ಠೀವಿ
ರಸ್ತೆಯ ಹಂದಿ, ನಾಯಿಗಳಿಗೆ ಸದಾ ಆಗಿರುತ್ತಿದ್ದ ಬೇಟೆಯ ಕೋವಿ
ನಮ್ಮ ಮನೆಯ 'ನಂದು'ವನ್ನು ಸಾಕಿದ್ದೇವೆ ಸಿಂಹದ ಧಾಟಿ
ಎಂದೂ ಕಳ್ಳರನ್ನು ಬಿಡಲಿಲ್ಲ ಅದು ಹೋಗಲು ತನ್ನನು ದಾಟಿ
- ತೇಜಸ್ವಿ .ಎ.ಸಿ
Thursday, April 1, 2010
ಬಿದ್ದ ಅವನು ಜಾರಿ
ಬಿದ್ದ ಅವನು ಜಾರಿ
ಪ್ರೇಮ ನಿವೇದಿಸಬೇಕೆಂದ
ಸೂರಿ
ಬೀಳ ಬೇಡ ಎಂದೇ
ಜಾರಿ
ಆದರೂ ಬಿಡದೆ ನಡೆಸಿದ
ತಯಾರಿ
ಹೇಳಲು ಮುಂದೆ ನಿಂತ
ಈ ಬಾರಿ
ಮುಂದೆ ನಿಂತು ಆದನಾತ
ಗಾಬರಿ
ಅವಳು ತೋರಿದಳು ಅಸಡ್ಡೆಯ
ಮಾರಿ
ಕಾಣದಾಯಿತು ಅವನಿಗೆ ಯಾವ
ದಾರಿ
ಬೆಪ್ಪ ಹೇಳಿದ ನೀನೆ ಎನ್ನ
ಸೋದರಿ
- ತೇಜಸ್ವಿ .ಎ .ಸಿ
ಪ್ರೇಮ ನಿವೇದಿಸಬೇಕೆಂದ
ಸೂರಿ
ಬೀಳ ಬೇಡ ಎಂದೇ
ಜಾರಿ
ಆದರೂ ಬಿಡದೆ ನಡೆಸಿದ
ತಯಾರಿ
ಹೇಳಲು ಮುಂದೆ ನಿಂತ
ಈ ಬಾರಿ
ಮುಂದೆ ನಿಂತು ಆದನಾತ
ಗಾಬರಿ
ಅವಳು ತೋರಿದಳು ಅಸಡ್ಡೆಯ
ಮಾರಿ
ಕಾಣದಾಯಿತು ಅವನಿಗೆ ಯಾವ
ದಾರಿ
ಬೆಪ್ಪ ಹೇಳಿದ ನೀನೆ ಎನ್ನ
ಸೋದರಿ
- ತೇಜಸ್ವಿ .ಎ .ಸಿ
Subscribe to:
Posts (Atom)