ವನ ಮಹೋತ್ಸವ
ಶಾಲೆಯಲ್ಲಿ ಮಾಡಿದೆವು ವನ ಮಹೋತ್ಸವ
ಸಸಿಯ ನೆಡಲು ನಮಗೆ ಕೊಟ್ಟಿತು ಉತ್ಸಾಹ
ಅಂದು ಶಾಲೆಯಲಿ ಇತ್ತು ಪುಟ್ಟ ಸಮಾರಂಭ
ನಂತರ ಮಾಡಿದೆವು ಗಿಡ ನೆಡಲು ಆರಂಭ
ಪುಟ್ಟ ಸಲಾಖೆಯ ಹೊತ್ತು ತಂದೆವು ನಾವು
ಕೆತ್ತಿ ಆವರಣದಲಿ ಚಿಕ್ಕ ಪಾತಿಯ ಮಾಡಿದೆವು
ಬಗೆ ಬಗೆಯ ಸಸಿ ನೆಟ್ಟು ಅದಕ್ಕೆ ನೀರೆರೆದೆವು
ಆ ಸಸಿಗಳಿಗೆ ಗೊಬ್ಬರ ನೀಡಿ ಪೋಷಿಸಿದೆವು
ಪುಟ್ಟ ಸಸಿಗಳ ತೋಟವಾಯ್ತು ಶಾಲೆ ಅಂಗಳ
ಮುಂದಿನ ಪೀಳಿಗೆಗೆ ಹಾಡುವುದಿದು ಮಂಗಳ
ಪ್ರತಿ ವರ್ಷ ಆಚರಿಸುವೆವು ವನ ಮಹೋತ್ಸವ
ಹಸಿರು ಹೆಚ್ಚಿಸಲು ಕೊಡುವೆವು ಪ್ರೋತ್ಸಾಹ
- ತೇಜಸ್ವಿ.ಎ.ಸಿ
ಹಾಯ್,ನಾನು ತೇಜಸ್ವಿ, ವೃತ್ತಿಯಲ್ಲಿ ಐ ಟಿ ಕ್ಷೇತ್ರದಲ್ಲಿ ಉದ್ಯೋಗಿ. ನನ್ನ ಆಸಕ್ತಿಯೆಲ್ಲ ಕವನ, ಸಾಹಿತ್ಯ, ಚಿತ್ರಕಲೆ, ಛಾಯಾಚಿತ್ರಗ್ರಹಣ. ಈ ನನ್ನ ಕಲೆಯ ಅಭಿರುಚಿಗಾಗಿ ನಾನು ಈ ತಾಣವನ್ನು ನಿರ್ಮಿಸಿದ್ದೇನೆ. ನಿಮ್ಮಲ್ಲರಿಗೂ ನನ್ನ ಪುಟ್ಟ ತಾಣಕ್ಕೆ ಸ್ವಾಗತ.
Friday, December 31, 2010
Wednesday, December 22, 2010
ಪ್ರಕೃತಿ ಪ್ರವಾಸ
ಪ್ರಕೃತಿ ಪ್ರವಾಸ
ಯಾಂತ್ರಿಕತೆಯಿಂದ ಬೇಸರವೆನಿಸಿತು ನಗರದ ವಾಸ
ಯೋಚಿಸಿದೆವು ನಾವೆಲ್ಲಾ ಮಾಡಲು ಪುಟ್ಟ ಪ್ರವಾಸ
ಸಭೆ ಏರ್ಪಡಿಸಿದೆವು ತೀರ್ಮಾನಿಸಲು ಪ್ರವಾಸದ ತಾಣ
ಬದಲಾವಣೆಗೆ ಮಲೆನಾಡೇ ಒಳ್ಳೆಯದೆಂದ ಒಬ್ಬ ಜಾಣ
ನಾಲ್ವರೂ ಸೇರಿ ಹೊರೆಟೆವು ಹತ್ತಿ ನಮ್ಮ ಕಾರು
ಉತ್ಸಾಹದಲೇ ಪ್ರವಾಸಕಾಗಿ ಬಿಟ್ಟೆವು ನಮ್ಮ ಊರು
ದಾರಿಯುದ್ದಕೂ ಕಂಡಿತು ಹಚ್ಚ ಹಸಿರ ಗುಡ್ಡ ಬೆಟ್ಟಗಳು
ಹಸಿರ ಕಾಡ ತಂಪಾಗಿಸಿತ್ತು ಹರಿಯುತ್ತಿದ್ದ ಝರಿಗಳು
ದಾರಿಯಲ್ಲಿ ಕಾಣ ಸಿಕ್ಕವು ಪುಟ್ಟ ಮೊಲ, ಜಿಂಕೆ, ಕೋತಿ
ಸಣ್ಣನೆ ಮಂಜು ಹೆಚ್ಚಿಸಿತು ಪ್ರಕೃತಿಯ ರಮ್ಯತೆ ಈ ರೀತಿ
ಸುಂದರ ನೋಟದ ನಡುವೆ ತಲುಪಿದೆವು ವಿಹಾರಧಾಮ
ತುಂತುರು ಮಳೆ ಶುರುವಾಗಿ ಹೆಚ್ಚಿಸಿತು ಪ್ರಕೃತಿ ಪ್ರೇಮ
ಪ್ರವಾಸದಿ ನಾವು ಹೊಕ್ಕಿದೆವು ದಟ್ಟನೆಯ ಅಭಯಾರಣ್ಯ
ನಾಡಿನ ಅರಣ್ಯ ಸಂಪತ್ತು ನೋಡಿ ನಾನಾದೆನಂದು ಧನ್ಯ
ಯಥೇಚ್ಛ ಪ್ರಕೃತಿ ಸಂಪತ್ತನು ಹೊಂದಿದ ನಾಡು ನಮ್ಮದು
ಈ ಸಂಪತ್ತನು ರಕ್ಷಿಸಿ ಬೆಳೆಸುವ ಜವಾಬ್ದಾರಿಯು ನಮ್ಮದು
ಪ್ರಕೃತಿಯ ಪ್ರವಾಸದಲಿ ಎಲ್ಲೂ ಪ್ಲಾಸ್ಟಿಕ್ ಬಳಸಿಲಿಲ್ಲ ನಾವು
ಹೀಗೆ ಎಲ್ಲಾ ನೋಡಿಕೊಂಡೆವು ಏರದಂತೆ ಭೂಮಿಯ ಕಾವು
- ತೇಜಸ್ವಿ.ಎ.ಸಿ
ಯಾಂತ್ರಿಕತೆಯಿಂದ ಬೇಸರವೆನಿಸಿತು ನಗರದ ವಾಸ
ಯೋಚಿಸಿದೆವು ನಾವೆಲ್ಲಾ ಮಾಡಲು ಪುಟ್ಟ ಪ್ರವಾಸ
ಸಭೆ ಏರ್ಪಡಿಸಿದೆವು ತೀರ್ಮಾನಿಸಲು ಪ್ರವಾಸದ ತಾಣ
ಬದಲಾವಣೆಗೆ ಮಲೆನಾಡೇ ಒಳ್ಳೆಯದೆಂದ ಒಬ್ಬ ಜಾಣ
ನಾಲ್ವರೂ ಸೇರಿ ಹೊರೆಟೆವು ಹತ್ತಿ ನಮ್ಮ ಕಾರು
ಉತ್ಸಾಹದಲೇ ಪ್ರವಾಸಕಾಗಿ ಬಿಟ್ಟೆವು ನಮ್ಮ ಊರು
ದಾರಿಯುದ್ದಕೂ ಕಂಡಿತು ಹಚ್ಚ ಹಸಿರ ಗುಡ್ಡ ಬೆಟ್ಟಗಳು
ಹಸಿರ ಕಾಡ ತಂಪಾಗಿಸಿತ್ತು ಹರಿಯುತ್ತಿದ್ದ ಝರಿಗಳು
ದಾರಿಯಲ್ಲಿ ಕಾಣ ಸಿಕ್ಕವು ಪುಟ್ಟ ಮೊಲ, ಜಿಂಕೆ, ಕೋತಿ
ಸಣ್ಣನೆ ಮಂಜು ಹೆಚ್ಚಿಸಿತು ಪ್ರಕೃತಿಯ ರಮ್ಯತೆ ಈ ರೀತಿ
ಸುಂದರ ನೋಟದ ನಡುವೆ ತಲುಪಿದೆವು ವಿಹಾರಧಾಮ
ತುಂತುರು ಮಳೆ ಶುರುವಾಗಿ ಹೆಚ್ಚಿಸಿತು ಪ್ರಕೃತಿ ಪ್ರೇಮ
ಪ್ರವಾಸದಿ ನಾವು ಹೊಕ್ಕಿದೆವು ದಟ್ಟನೆಯ ಅಭಯಾರಣ್ಯ
ನಾಡಿನ ಅರಣ್ಯ ಸಂಪತ್ತು ನೋಡಿ ನಾನಾದೆನಂದು ಧನ್ಯ
ಯಥೇಚ್ಛ ಪ್ರಕೃತಿ ಸಂಪತ್ತನು ಹೊಂದಿದ ನಾಡು ನಮ್ಮದು
ಈ ಸಂಪತ್ತನು ರಕ್ಷಿಸಿ ಬೆಳೆಸುವ ಜವಾಬ್ದಾರಿಯು ನಮ್ಮದು
ಪ್ರಕೃತಿಯ ಪ್ರವಾಸದಲಿ ಎಲ್ಲೂ ಪ್ಲಾಸ್ಟಿಕ್ ಬಳಸಿಲಿಲ್ಲ ನಾವು
ಹೀಗೆ ಎಲ್ಲಾ ನೋಡಿಕೊಂಡೆವು ಏರದಂತೆ ಭೂಮಿಯ ಕಾವು
- ತೇಜಸ್ವಿ.ಎ.ಸಿ
Sunday, December 12, 2010
ಪರಿಪೂರ್ಣತೆಯ ಹುಚ್ಚು
ಪರಿಪೂರ್ಣತೆಯ ಹುಚ್ಚು
ತಾನು ಮುಟ್ಟಲಾಗದ ನಿರೀಕ್ಷೆಯ ಭಾರವ ಹೊತ್ತು
ಸರಳ ತೃಪ್ತಿಗಾಗಿ ಹೋರಾಡುವುದು ತರವೇ?
ಎಂದೂ ಮುಗಿಯದ ಹುಚ್ಚು ಸ್ಪರ್ಧೆಗಳ ಗೆಲುವಿನ
ಅಳತೆಗೋಲಿಗೆ ಸಂತೋಷದ ಅವಲಂಭನೆ ತರವೇ?
ಜೀವನದುದ್ದಕ್ಕೂ ಪ್ರತಿ ಕೆಲಸಗಳಲ್ಲಿ ಅತ್ಯುನ್ನತ
ಸಾಧಿಸಲು ಮನದ ನೆಮ್ಮದಿಯ ಮರೆವುದು ತರವೇ?
ಬಾಹ್ಯ ಸಮಾಜದ ಕಣ್ಣ ಮೆಚ್ಚುಗೆಯ ಉದ್ದೇಶಕಾಗಿ
ಬಲವಂತದ ಗುರಿಯ ಹೊರುವುದು ತರವೇ?
ಮನದ ಸಹಜ ಸಂತೋಷವನು ಮಿತಿ ಇಲ್ಲದ
ಈ ಆಸೆಗಳ ಹತೋಟಿಗೆ ಬಿಟ್ಟು ಕೊಡಲಾರೆ
ನವಿರಾದ ಭಾವನೆಗಳ ಕೋಮಲ ಹೃದಯವನು
ಸಾಮರ್ಥ್ಯ ಅಳೆವ ಹುಚ್ಚು ಜೂಜಿಗೆ ಬಿಡಲಾರೆ
ಕೈಯಲ್ಲೇ ಇರುವ ನನ್ನ ಸುಂದರ ಜೀವನವನ್ನು
ದಿಕ್ಕು ಕೊನೆಯಿಲ್ಲದ ಸ್ಪರ್ಧೆಗಳಿಗೆ ತಳ್ಳಲಾರೆ
ನನಗಿತ್ತುರುವ ಶಕ್ತಿ ಸಾಮರ್ಥ್ಯವನು ವಿರಳವಾದ
ಪರಿಪೂರ್ಣತೆಯೆಂಬ ಅತೃಪ್ತಿಗೆ ಒಪ್ಪಿಸಲಾರೆ
ಚಿಕ್ಕ ವಿಷಯಗಳಲ್ಲೂ ತೃಪ್ತಿ ಪಡೋಣ ನಾವು
ಆಗದಿರಲಿ ಪರಿಪೂರ್ಣತೆ ಎಂಬುದು ನೋವು
-ತೇಜಸ್ವಿ.ಎ.ಸಿ
ತಾನು ಮುಟ್ಟಲಾಗದ ನಿರೀಕ್ಷೆಯ ಭಾರವ ಹೊತ್ತು
ಸರಳ ತೃಪ್ತಿಗಾಗಿ ಹೋರಾಡುವುದು ತರವೇ?
ಎಂದೂ ಮುಗಿಯದ ಹುಚ್ಚು ಸ್ಪರ್ಧೆಗಳ ಗೆಲುವಿನ
ಅಳತೆಗೋಲಿಗೆ ಸಂತೋಷದ ಅವಲಂಭನೆ ತರವೇ?
ಜೀವನದುದ್ದಕ್ಕೂ ಪ್ರತಿ ಕೆಲಸಗಳಲ್ಲಿ ಅತ್ಯುನ್ನತ
ಸಾಧಿಸಲು ಮನದ ನೆಮ್ಮದಿಯ ಮರೆವುದು ತರವೇ?
ಬಾಹ್ಯ ಸಮಾಜದ ಕಣ್ಣ ಮೆಚ್ಚುಗೆಯ ಉದ್ದೇಶಕಾಗಿ
ಬಲವಂತದ ಗುರಿಯ ಹೊರುವುದು ತರವೇ?
ಮನದ ಸಹಜ ಸಂತೋಷವನು ಮಿತಿ ಇಲ್ಲದ
ಈ ಆಸೆಗಳ ಹತೋಟಿಗೆ ಬಿಟ್ಟು ಕೊಡಲಾರೆ
ನವಿರಾದ ಭಾವನೆಗಳ ಕೋಮಲ ಹೃದಯವನು
ಸಾಮರ್ಥ್ಯ ಅಳೆವ ಹುಚ್ಚು ಜೂಜಿಗೆ ಬಿಡಲಾರೆ
ಕೈಯಲ್ಲೇ ಇರುವ ನನ್ನ ಸುಂದರ ಜೀವನವನ್ನು
ದಿಕ್ಕು ಕೊನೆಯಿಲ್ಲದ ಸ್ಪರ್ಧೆಗಳಿಗೆ ತಳ್ಳಲಾರೆ
ನನಗಿತ್ತುರುವ ಶಕ್ತಿ ಸಾಮರ್ಥ್ಯವನು ವಿರಳವಾದ
ಪರಿಪೂರ್ಣತೆಯೆಂಬ ಅತೃಪ್ತಿಗೆ ಒಪ್ಪಿಸಲಾರೆ
ಚಿಕ್ಕ ವಿಷಯಗಳಲ್ಲೂ ತೃಪ್ತಿ ಪಡೋಣ ನಾವು
ಆಗದಿರಲಿ ಪರಿಪೂರ್ಣತೆ ಎಂಬುದು ನೋವು
-ತೇಜಸ್ವಿ.ಎ.ಸಿ
Monday, December 6, 2010
ಕವನ ರಚಿಸುವ ಅನುಭವ
ಕವನ ರಚಿಸುವ ಅನುಭವ
ಕವನ ಬರೆಯಲು ಕೂತರೆ ಆಗುವುದು ಮನ ಪುಳಕ
ತಯಾರಿಸಬೇಕೆನಿಸುವುದು ಅಕ್ಷರಗಳ ಹೊಸ ಪಾಕ
ಬರೆಯುವ ವಿಷಯದಲ್ಲಿ ಒಮ್ಮೆ ವಿಹರಿಸುವೆನು ಹಾಗೆ
ವಿಹರಿಸಿ ತೀರ್ಮನಿಸುವೆನು ಅದನು ಬರೆಯುವ ಬಗೆ
ಬರೆಯಲು ಕುಳಿತರೆ ಜೀವಕೆ ಸಿಗುವುದು ಹೊಸಜೀವ
ಕವನವು ಕೊಡುವುದು ನಮಗೆ ನವ ಜೀವನೋತ್ಸಾಹ
ನನ್ನ ಅನುಭವಕೆ ಅಕ್ಷರಗಳು ಕೊಡುವವು ಸೌಂದರ್ಯ
ಕನ್ನಡದಲೇ ನಾ ಮಾಡುವೆನು ಕವನ ಕೆತ್ತುವ ಕಾರ್ಯ
ಕನ್ನಡದ ಪದಗಳು ಮಾಡುವವು ನಿರೂಪಣೆ ಸುಲಭ
ಅದರಿಂದಲೆ ಕವನ ರಚನೆ ಒಂದು ಸುಂದರ ಅನುಭವ
ಕವನ ರಚನೆಯಿಂದ ಹಗುರವಾಗುವುದು ನಮ್ಮ ಮನ
ಸುಂದರ ಕವನದ ರಚನೆ ನೀಡುವುದು ಸಂತೋಷವನ್ನ
- ತೇಜಸ್ವಿ.ಎ.ಸಿ
ಕವನ ಬರೆಯಲು ಕೂತರೆ ಆಗುವುದು ಮನ ಪುಳಕ
ತಯಾರಿಸಬೇಕೆನಿಸುವುದು ಅಕ್ಷರಗಳ ಹೊಸ ಪಾಕ
ಬರೆಯುವ ವಿಷಯದಲ್ಲಿ ಒಮ್ಮೆ ವಿಹರಿಸುವೆನು ಹಾಗೆ
ವಿಹರಿಸಿ ತೀರ್ಮನಿಸುವೆನು ಅದನು ಬರೆಯುವ ಬಗೆ
ಬರೆಯಲು ಕುಳಿತರೆ ಜೀವಕೆ ಸಿಗುವುದು ಹೊಸಜೀವ
ಕವನವು ಕೊಡುವುದು ನಮಗೆ ನವ ಜೀವನೋತ್ಸಾಹ
ನನ್ನ ಅನುಭವಕೆ ಅಕ್ಷರಗಳು ಕೊಡುವವು ಸೌಂದರ್ಯ
ಕನ್ನಡದಲೇ ನಾ ಮಾಡುವೆನು ಕವನ ಕೆತ್ತುವ ಕಾರ್ಯ
ಕನ್ನಡದ ಪದಗಳು ಮಾಡುವವು ನಿರೂಪಣೆ ಸುಲಭ
ಅದರಿಂದಲೆ ಕವನ ರಚನೆ ಒಂದು ಸುಂದರ ಅನುಭವ
ಕವನ ರಚನೆಯಿಂದ ಹಗುರವಾಗುವುದು ನಮ್ಮ ಮನ
ಸುಂದರ ಕವನದ ರಚನೆ ನೀಡುವುದು ಸಂತೋಷವನ್ನ
- ತೇಜಸ್ವಿ.ಎ.ಸಿ
Subscribe to:
Posts (Atom)