ಸ್ವಾವಲಂಬನೆಯತ್ತ ಹೆಜ್ಜೆ
ಸ್ನೇಹಿತನಿಗೊಂದು ದಿನ ಬಂದಿತ್ತು ಈ-ಪತ್ರ
ಗೆದ್ದಿದ್ದನಾತ ಲಾಟರಿ ಹತ್ತು ಕೋಟಿಯಷ್ಟು ಎತ್ತರ
ಗೊತ್ತಿತ್ತು ಎಲ್ಲರಿಗೂ ಈ ಲಾಟರಿ ಮೋಸದ ಬಲೆ ಎಂದು
ನಾ ಕೇಳಿದೆ, ನಿಜವಾಗಲೂ ಸಿಕ್ಕರೆ ಏನು ಮಾಡುವೆ ಎಂದು?
ಹೇಳಿದ ಆತ ಎಲ್ಲರಿಗೂ ನಿರೀಕ್ಷಿತ ಉತ್ತರವನ್ನು
ಬಿಡುವೆ ಈ ವೃತ್ತಿಯನ್ನು, ಘೋಷಿಸಿ ನಿವೃತ್ತಿಯನ್ನು
ಅಬ್ಬಾ!! ಕಂಡೆ ನಾ ಜನಗಳ ಬಹು ಮುಖ್ಯ ಗುರಿಯನ್ನು
ಆದಷ್ಟು ಬೇಗ ಜೀವನದಲ್ಲಿ ನೆಲೆಯೂರುವ ತುಡಿತವನ್ನು
ಗುರಿ ಗೊತ್ತಾಗಿಯೂ ನಾವ್ ಮಾಡುತ್ತಿರುವ ಕೆಲಸವೇನು?
ಉಧ್ಯೋಗ ಹಿಡಿದು ಬರುವ ಸಂಬಳಕ್ಕೆ ಕಾಯುವುದೇ ಏನು?
ನೋಡಿದೆ ನನ್ನ ಜೀವಮಾನದ ಒಟ್ಟು ಆದಾಯವನ್ನು ಗುಣಿಸಿ
ಸಿಗುವುದಿಷ್ಟೇನಾ ಜೀವನವೆಲ್ಲಾ ದುಡಿದರೂ ದೇಹವನ್ನು ಧಣಿಸಿ?
ಕಾಯುತ್ತ ಕೂತವರು ಗಳಿಸಿದ್ದಾರೆಯೇ ಗುರಿಯಲ್ಲಿ ಯಶಸ್ಸು?
ಸಾಧ್ಯವಾಗುವುದು ಗುರಿ, ಮಾಡಿದರೆ ಸ್ವಂತ ಪ್ರಯತ್ನದ ಮನಸ್ಸು
ಗುರಿ ಮುಟ್ಟುವ ತವಕದಲಿ ಹಾಕಲಿ ಜನಗಳು ಶ್ರಮ
ಮುನ್ನುಗ್ಗಿ ಶ್ರಮಿಸುವುದೇ, ಕಾಯುವುದಕ್ಕಿಂತ ಉತ್ತಮ.
ಗುರಿಯಲ್ಲಿ ಸಾಧಿಸಲಿ ಯಶಸ್ಸು ನಮ್ಮ ಪ್ರೀತಿಯ ಜನ
ಆಗಲೇ ನೆಲೆಯೂರಲು ಆಗುವುದು ನಮ್ಮೆಲ್ಲರ ಜೀವನ.
- ತೇಜಸ್ವಿ. ಎ. ಸಿ
ಹಾಯ್,ನಾನು ತೇಜಸ್ವಿ, ವೃತ್ತಿಯಲ್ಲಿ ಐ ಟಿ ಕ್ಷೇತ್ರದಲ್ಲಿ ಉದ್ಯೋಗಿ. ನನ್ನ ಆಸಕ್ತಿಯೆಲ್ಲ ಕವನ, ಸಾಹಿತ್ಯ, ಚಿತ್ರಕಲೆ, ಛಾಯಾಚಿತ್ರಗ್ರಹಣ. ಈ ನನ್ನ ಕಲೆಯ ಅಭಿರುಚಿಗಾಗಿ ನಾನು ಈ ತಾಣವನ್ನು ನಿರ್ಮಿಸಿದ್ದೇನೆ. ನಿಮ್ಮಲ್ಲರಿಗೂ ನನ್ನ ಪುಟ್ಟ ತಾಣಕ್ಕೆ ಸ್ವಾಗತ.
Monday, February 22, 2010
Tuesday, February 9, 2010
ವಾಸ್ತವವ ಅರಿ ಮನವೆ
ವಾಸ್ತವವ ಅರಿ ಮನವೆ
ವಾಸ್ತವಿಕತೆಯ ಅರಿ ಮನವೇ ನಿಜ ವಾಸ್ತವವ
ಭೌತಿಕ ಜಗದಲಿರುವ ಸರಳ ಹಸಿ ಸತ್ಯವ
ಪ್ರತಿ ನಿತ್ಯ ಆಡುವೆ ಮಾತು ದಿನಕ್ ಹತ್ತು ಲಕ್ಷ
ನಿಜವಾಗುವುದೇ ಅದರಲ್ಲಿ ನೂರು ಕಡೇ ಪಕ್ಷ?
ಸೃಷ್ಟಿಸುವೆ ನಿತ್ಯ ನೀ ನೂರು ಹೊಸ ಲೋಕವ
ನೂರು ಲೋಕದಲಿ ನೀಡುವೆ ವಿಭಿನ್ನ ಅನುಭವ
ಭವಿಷ್ಯದ ಬಗ್ಗೆ ಸೃಷ್ಟಿಸುವೆ ಅನಗತ್ಯ ಆತಂಕವ
ಕೋಟಿ ಯೋಚನೆಗಳಲಿ ಆಗುವುದೆಷ್ಟು ವಾಸ್ತವ?
ಲಕ್ಷ ಮಾತುಗಳು ಸೃಷ್ಟಿಸುವವು ಬರೀ ಹಗಲು ಗನಸು
ಆದರೆ ನಾಲ್ಕೇ ಮಾತು ಮಾಡುವವು ಕನಸನ್ನು ನನಸು
ಅನಗತ್ಯ ಸುದ್ದಿಯಲಿ ಮುಳುಗಿ ಮಾಡುವೆ ಬೇಡದ ವ್ಯಥೆ
ನಿನ್ನ ಜೀವನಕ್ಕೆ ಪರಿಣಮಿಸದ ವಿಷಯಕ್ಕೆ ನಿನಗೇಕೆ ಚಿಂತೆ?
ಅರಿ ನಿಜವ, ತೊರಿ ಭ್ರಮೆಯ, ಗಳಿಸು ನೆಮ್ಮದಿಯ
ನಡೆಸು ಜೀವನವ, ಅರಸಿ ಭೌತಿಕ ವಾಸ್ತವಿಕತೆಯ
- ತೇಜಸ್ವಿ .ಎ.ಸಿ
ವಾಸ್ತವಿಕತೆಯ ಅರಿ ಮನವೇ ನಿಜ ವಾಸ್ತವವ
ಭೌತಿಕ ಜಗದಲಿರುವ ಸರಳ ಹಸಿ ಸತ್ಯವ
ಪ್ರತಿ ನಿತ್ಯ ಆಡುವೆ ಮಾತು ದಿನಕ್ ಹತ್ತು ಲಕ್ಷ
ನಿಜವಾಗುವುದೇ ಅದರಲ್ಲಿ ನೂರು ಕಡೇ ಪಕ್ಷ?
ಸೃಷ್ಟಿಸುವೆ ನಿತ್ಯ ನೀ ನೂರು ಹೊಸ ಲೋಕವ
ನೂರು ಲೋಕದಲಿ ನೀಡುವೆ ವಿಭಿನ್ನ ಅನುಭವ
ಭವಿಷ್ಯದ ಬಗ್ಗೆ ಸೃಷ್ಟಿಸುವೆ ಅನಗತ್ಯ ಆತಂಕವ
ಕೋಟಿ ಯೋಚನೆಗಳಲಿ ಆಗುವುದೆಷ್ಟು ವಾಸ್ತವ?
ಲಕ್ಷ ಮಾತುಗಳು ಸೃಷ್ಟಿಸುವವು ಬರೀ ಹಗಲು ಗನಸು
ಆದರೆ ನಾಲ್ಕೇ ಮಾತು ಮಾಡುವವು ಕನಸನ್ನು ನನಸು
ಅನಗತ್ಯ ಸುದ್ದಿಯಲಿ ಮುಳುಗಿ ಮಾಡುವೆ ಬೇಡದ ವ್ಯಥೆ
ನಿನ್ನ ಜೀವನಕ್ಕೆ ಪರಿಣಮಿಸದ ವಿಷಯಕ್ಕೆ ನಿನಗೇಕೆ ಚಿಂತೆ?
ಅರಿ ನಿಜವ, ತೊರಿ ಭ್ರಮೆಯ, ಗಳಿಸು ನೆಮ್ಮದಿಯ
ನಡೆಸು ಜೀವನವ, ಅರಸಿ ಭೌತಿಕ ವಾಸ್ತವಿಕತೆಯ
- ತೇಜಸ್ವಿ .ಎ.ಸಿ
Monday, February 1, 2010
ನನ್ನ ವಿದೇಶ ಪ್ರವಾಸ
ನನ್ನ ವಿದೇಶ ಪ್ರವಾಸ
ದೊರಕ್ಕಿತ್ತು ಒಂದು ಅವಕಾಶವು ನನಗೆ
ಹಾರಿ ಹೋಗಲು ಹೊರದೇಶಕ್ಕೆ ಕೊನೆಗೆ
ತಿಳಿಸಿದೆ ಎಲ್ಲರಿಗೂ ನಾ ಹೋಗುವೆ ಹಾರಿ
ನಡೆಸಿದೆ ಹೊರಡಲು ಭರ್ಜರಿ ತಯಾರಿ
ಸಿದ್ದವಾಯಿತು ನನ್ನ ವೀಸ ಪಾಸ್ ಪೋರ್ಟು
ಆಗಸಕ್ಕೆ ಹಾರಿದೆ ನಾ ಬಿಟ್ಟು ಏರ್ ಪೋರ್ಟು
ಕಂಡು ನಾ ಬೆರಗಾದೆ ಯೂರೋಪಿನ ಸೌಂದರ್ಯ
ಇಡೀ ಭೂಮಿ ಹೊದ್ದಿತ್ತು ಹಸಿರು ರತ್ನ ಗಂಬಳಿಯ
ಇತಿ ಮಿತಿ ಜನಸಂಖ್ಯೆಯ ಆ ಪುಟ್ಟ ದೇಶ
ಸುಖ ಸವಲತ್ತು ಹೊಂದಿದ ಶ್ರೀಮಂತ ದೇಶ
ವಿಶ್ವ ಮಾತಾಡುವ ಆಂಗ್ಲ ಅವರ ಮಾತೃ ಭಾಷೆ
ಶಾಲೆ ಕಲಿಸುವ ಮಾಧ್ಯಮ ಅವರ ಆಡು ಭಾಷೆ
ಜನ ಹಂಬಲಿಸಿ ಹುಡುಕುವ ಬಿಳಿ ಚರ್ಮ ಅವರದ್ದು
ಜನ ಬಯಸುವ ಶುಭ್ರ ಹವೆ, ಹಸಿರು ನೆಲ ಅವರದ್ದು
ಜನ ಆಶಿಸುವ ನೀಳ, ಧೃಡ ಕಾಯ ಅವರದ್ದು
ನೀಲ ಕಂಗಳ, ಲಕ್ಷಣ ಮುಖಚರ್ಯೆ ಅವರದ್ದು
ವಿಶ್ವವನ್ನು ಸುಲಭವಾಗಿ ಸುತ್ತಬಲ್ಲ ಆರ್ಥಿಕತೆ ಅವರದ್ದು
ಸುಖವಾಗಿ ಸುತ್ತಾಡಲು ಬಯಸುವ ಕಾರು ಅವರೆಲ್ಲರದ್ದು
ವಿಶ್ವದೆಲ್ಲೆಡೆ ಸಿಗುತ್ತದೆ ಅವರಿಗೆ ಗೌರವ, ಮಾನ್ಯತೆ
ನೆನೆದೇ ನಾನು ನಮ್ಮಗಳ ಜೀವನದ ಸಾಮಾನ್ಯತೆ
ಮೂರು ಶತಮಾನ ಆಳಿ ಹೊತ್ತು ಹೋದರು ನಮ್ಮ ಸಂಪತ್ತು
ಮೂರೇ ತಿಂಗಳಲ್ಲಿ ಅವರ ಕೆಲಸಗಳಿಗೆ ನಾವು ಕೊಟ್ಟೆವು ಆಪತ್ತು
ಏನಾದರು ಆಗಲಿ ಸುಂದರವಾಗಿತ್ತು ನನ್ನ ಅನುಭವ
ಇಂಥಹ ಪ್ರವಾಸ ತೀರಿಸಿವುದು ದೇಶದ ಹಣದ ಅಭಾವ
- ತೇಜಸ್ವಿ.ಎ.ಸಿ
ದೊರಕ್ಕಿತ್ತು ಒಂದು ಅವಕಾಶವು ನನಗೆ
ಹಾರಿ ಹೋಗಲು ಹೊರದೇಶಕ್ಕೆ ಕೊನೆಗೆ
ತಿಳಿಸಿದೆ ಎಲ್ಲರಿಗೂ ನಾ ಹೋಗುವೆ ಹಾರಿ
ನಡೆಸಿದೆ ಹೊರಡಲು ಭರ್ಜರಿ ತಯಾರಿ
ಸಿದ್ದವಾಯಿತು ನನ್ನ ವೀಸ ಪಾಸ್ ಪೋರ್ಟು
ಆಗಸಕ್ಕೆ ಹಾರಿದೆ ನಾ ಬಿಟ್ಟು ಏರ್ ಪೋರ್ಟು
ಕಂಡು ನಾ ಬೆರಗಾದೆ ಯೂರೋಪಿನ ಸೌಂದರ್ಯ
ಇಡೀ ಭೂಮಿ ಹೊದ್ದಿತ್ತು ಹಸಿರು ರತ್ನ ಗಂಬಳಿಯ
ಇತಿ ಮಿತಿ ಜನಸಂಖ್ಯೆಯ ಆ ಪುಟ್ಟ ದೇಶ
ಸುಖ ಸವಲತ್ತು ಹೊಂದಿದ ಶ್ರೀಮಂತ ದೇಶ
ವಿಶ್ವ ಮಾತಾಡುವ ಆಂಗ್ಲ ಅವರ ಮಾತೃ ಭಾಷೆ
ಶಾಲೆ ಕಲಿಸುವ ಮಾಧ್ಯಮ ಅವರ ಆಡು ಭಾಷೆ
ಜನ ಹಂಬಲಿಸಿ ಹುಡುಕುವ ಬಿಳಿ ಚರ್ಮ ಅವರದ್ದು
ಜನ ಬಯಸುವ ಶುಭ್ರ ಹವೆ, ಹಸಿರು ನೆಲ ಅವರದ್ದು
ಜನ ಆಶಿಸುವ ನೀಳ, ಧೃಡ ಕಾಯ ಅವರದ್ದು
ನೀಲ ಕಂಗಳ, ಲಕ್ಷಣ ಮುಖಚರ್ಯೆ ಅವರದ್ದು
ವಿಶ್ವವನ್ನು ಸುಲಭವಾಗಿ ಸುತ್ತಬಲ್ಲ ಆರ್ಥಿಕತೆ ಅವರದ್ದು
ಸುಖವಾಗಿ ಸುತ್ತಾಡಲು ಬಯಸುವ ಕಾರು ಅವರೆಲ್ಲರದ್ದು
ವಿಶ್ವದೆಲ್ಲೆಡೆ ಸಿಗುತ್ತದೆ ಅವರಿಗೆ ಗೌರವ, ಮಾನ್ಯತೆ
ನೆನೆದೇ ನಾನು ನಮ್ಮಗಳ ಜೀವನದ ಸಾಮಾನ್ಯತೆ
ಮೂರು ಶತಮಾನ ಆಳಿ ಹೊತ್ತು ಹೋದರು ನಮ್ಮ ಸಂಪತ್ತು
ಮೂರೇ ತಿಂಗಳಲ್ಲಿ ಅವರ ಕೆಲಸಗಳಿಗೆ ನಾವು ಕೊಟ್ಟೆವು ಆಪತ್ತು
ಏನಾದರು ಆಗಲಿ ಸುಂದರವಾಗಿತ್ತು ನನ್ನ ಅನುಭವ
ಇಂಥಹ ಪ್ರವಾಸ ತೀರಿಸಿವುದು ದೇಶದ ಹಣದ ಅಭಾವ
- ತೇಜಸ್ವಿ.ಎ.ಸಿ
Subscribe to:
Posts (Atom)